ಕರ್ನಾಟಕ

karnataka

ETV Bharat / bharat

ಹೊಂಡಕ್ಕೆ ಬಿದ್ದು ಒಂದೇ ಕುಟುಂಬದ ಇಬ್ಬರು ಮಕ್ಕಳು ನೀರುಪಾಲು.. ಪೊಲೀಸರಿಗೆ ಹೆದರಿ ಭೂ ಮಾಲೀಕ ಆತ್ಮಹತ್ಯೆಗೆ ಶರಣು - ಭೂಮಿ ಮಾಲೀಕ ಆತ್ಮಹತ್ಯೆ

ಒಂದೇ ಕುಟುಂಬದ ಇಬ್ಬರು ಮಕ್ಕಳು ಆಕಸ್ಮಿಕವಾಗಿ ಹೊಂಡದಲ್ಲಿ ಜಾರಿ ಬಿದ್ದು ಮೃತಪಟ್ಟಿರುವ ಘಟನೆ ರಾಜಸ್ಥಾನದ ಅಲ್ವಾರ್​ ಜಿಲ್ಲೆಯಲ್ಲಿ ಸಂಭವಿಸಿದೆ.

Two children of a family drowned  Two children of a family drowned in a pit  children of a family drowned in a pit in Rajasthan  ಒಂದೇ ಕುಟುಂಬದ ಇಬ್ಬರು ಮಕ್ಕಳು ನೀರುಪಾಲು  ಪೊಲೀಸರಿಗೆ ಹೆದರಿ ಭೂ ಮಾಲೀಕ ಆತ್ಮಹತ್ಯೆಗೆ ಶರಣು  ಆಕಸ್ಮಿಕವಾಗಿ ಹೊಂಡದಲ್ಲಿ ಜಾರಿ ಬಿದ್ದು ಮೃತ  ಕಥುಮಾರ್ ಪೊಲೀಸ್ ಠಾಣೆ ವ್ಯಾಪ್ತಿ  ಕುಟುಂಬದವರು ನೀಡಿದ ದೂರಿನ ಮೇರೆಗೆ ಪ್ರಕರಣ  ಭೂಮಿ ಮಾಲೀಕ ಆತ್ಮಹತ್ಯೆ  ಜೈಪುರದಲ್ಲಿ ಬ್ಯಾಕ್​ ಟು ಬ್ಯಾಕ್​ ಭೂಕಂಪನ
ಹೊಂಡಕ್ಕೆ ಬಿದ್ದು ಒಂದೇ ಕುಟುಂಬದ ಇಬ್ಬರು ಮಕ್ಕಳು ನೀರುಪಾಲು

By

Published : Jul 21, 2023, 8:57 PM IST

ಅಲ್ವಾರ್, ರಾಜಸ್ಥಾನ: ಜಿಲ್ಲೆಯ ಕಥುಮಾರ್ ಪೊಲೀಸ್ ಠಾಣೆ ವ್ಯಾಪ್ತಿಯ ಛೋಟಾ ಭಾದಿರಾ ಗ್ರಾಮದಲ್ಲಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಹೊಂಡಕ್ಕೆ ಬಿದ್ದು ಸಾವನ್ನಪ್ಪಿದ ದಾರುಣ ಘಟನೆ ಜುಲೈ 19 ರಂದು ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇಬ್ಬರು ಮಕ್ಕಳು ಹೊಂಡದಲ್ಲಿ ಬಿದ್ದು ಸಾವನ್ನಪ್ಪಿದ್ದಾರೆ. ಮಕ್ಕಳ ಸಾವಿಗೆ ಇಡೀ ಗ್ರಾಮವೇ ಕಂಬನಿ ಮಿಡಿದಿದೆ. ಹೊಂಡ ತೋಡಿದ್ದ ಸಾಹಬ್ ಸಿಂಗ್ ಜುಲೈ 20ರಂದು ಪೊಲೀಸರ ಭಯ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗ್ತಿದೆ.

ಕುಟುಂಬದವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ಓಂ ಪ್ರಕಾಶ್ ಮೀನಾ ತಿಳಿಸಿದ್ದಾರೆ. ಇಬ್ಬರು ಮಕ್ಕಳನ್ನು ಲವ್​ಕುಶ್ ಜಾತವ್ (ಒಂಬತ್ತು ವರ್ಷ) ಮತ್ತು ಯಶಾಂಕ್ ಜಾತವ್ (ಆರು ವರ್ಷ) ಎಂದು ಗುರುತಿಸಲಾಗಿದೆ. ಇಬ್ಬರು ಮಕ್ಕಳು ಪ್ರತಿದಿನ ಹೊಲಗಳಲ್ಲಿ ಆಟವಾಡಲು ಹೋಗುತ್ತಿದ್ದರು. ಮಳೆಯ ಹಿನ್ನೆಲೆ ಘಟನಾ ಸ್ಥಳ ಜಾರುತ್ತಿದ್ದು, ಮಕ್ಕಳು ಗುಂಡಿಗೆ ಬಿದ್ದು ಸಾವನ್ನಪ್ಪಿದ್ದಾರೆ ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಚೌಹಾಣ್ ಮಾಹಿತಿ ನೀಡಿದ್ದಾರೆ.

ಮಕ್ಕಳು ಮನೆಗೆ ಬಾರದ ಹಿನ್ನೆಲೆ ಕುಟುಂಬಸ್ಥರು ಹುಡುಕಾಟ ಆರಂಭಿಸಿದ್ದರು. ಈ ವೇಳೆ ಗುಂಡಿಯಲ್ಲಿ ಶವಗಳು ಪತ್ತೆಯಾಗಿವೆ. ಘಟನೆ ಕುರಿತು ಪೊಲೀಸರಿಗೆ ದೂರು ನೀಡಲಾಗಿದ್ದು, ತನಿಖೆಗೆ ಆದೇಶಿಸಲಾಗಿದೆ. ಶವಗಳನ್ನು ಕಥುಮಾರ್ ಕಾಮನ್ ಸರ್ವೀಸ್ ಸೆಂಟರ್ (ಸಿಎಸ್‌ಸಿ) ನಲ್ಲಿರುವ ಶವಾಗಾರಕ್ಕೆ ಕೊಂಡೊಯ್ಯಲಾಯಿತು. ನಂತರ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹಗಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದಾರೆ.

ಭೂಮಿ ಮಾಲೀಕ ಆತ್ಮಹತ್ಯೆ: ಕುಟುಂಬಸ್ಥರ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುವುದಾಗಿ ಠಾಣಾಧಿಕಾರಿ ಓಂಪ್ರಕಾಶ್ ಮೀನಾ ತಿಳಿಸಿದ್ದಾರೆ. ಈ ಘಟನೆಯ ನಂತರ ಭೂ ಮಾಲೀಕ ಸಾಹಬ್ ಸಿಂಗ್ ಗುರುವಾರ ರಾತ್ರಿ ಪೊಲೀಸ್ ಆಡಳಿತದ ಕ್ರಮಕ್ಕೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಘಟನೆಯಿಂದ ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ.

ಜೈಪುರದಲ್ಲಿ ಬ್ಯಾಕ್​ ಟು ಬ್ಯಾಕ್​ ಭೂಕಂಪನ, ಯೋಧರಿಗೆ ಗಾಯ: ರಾಜಧಾನಿ ಜೈಪುರದಲ್ಲಿ ಶುಕ್ರವಾರ ಬೆಳಗ್ಗೆ ಭೂಕಂಪನದ ತೀವ್ರ ನಡುಕ ಜನರನ್ನು ನಿದ್ದೆಯಿಂದ ಎಬ್ಬಿಸಿದೆ. ಭೂಕಂಪದ ಪ್ರಬಲ ಕಂಪನದಿಂದಾಗಿ ರಾಜಧಾನಿ ಜೈಪುರದ ಚಾಂದ್‌ಪೋಲ್‌ನಲ್ಲಿರುವ ರಿಸರ್ವ್ ಪೊಲೀಸ್ ಲೈನ್‌ನಲ್ಲಿ ಸಂಚಲನ ಮೂಡಿತು. ಹಠಾತ್ ಭೂಕಂಪದ ಸಂದರ್ಭದಲ್ಲಿ ಪೊಲೀಸ್ ಲೈನ್‌ನಲ್ಲಿದ್ದ ಸೈನಿಕರ ನಡುವೆ ಕಾಲ್ತುಳಿತ ಉಂಟಾಯಿತು. ಅನೇಕ ಸೈನಿಕರು ಬ್ಯಾರಿಕೇಡ್‌ಗಳನ್ನು ಹಾರಿ ಓಡಿಹೋದರು. ಕಾಲ್ತುಳಿತದ ವೇಳೆ ಹಲವು ಯೋಧರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು.

ಸುಮಾರು 15 ಯೋಧರು ಗಾಯಗೊಂಡಿದ್ದಾರೆ. ಸವಾಯಿ ಮಾನ್‌ಸಿಂಗ್ ಆಸ್ಪತ್ರೆಯ ಟ್ರಾಮಾ ಸೆಂಟರ್‌ನಲ್ಲಿ ಯೋಧರಿಗೆ ಚಿಕಿತ್ಸೆ ನೀಡಲಾಗಿದೆ. ಆದರೂ ಯಾರಿಗೂ ಗಂಭೀರ ಗಾಯವಾಗಿಲ್ಲ. ಪ್ರಥಮ ಚಿಕಿತ್ಸೆ ಬಳಿಕ ಪೊಲೀಸ್ ಸಿಬ್ಬಂದಿಯನ್ನು ಡಿಸ್ಚಾರ್ಜ್​ ಮಾಡಲಾಗಿದೆ. ಶುಕ್ರವಾರ ಬೆಳಿಗ್ಗೆ ಜೈಪುರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ 3 ಬ್ಯಾಕ್ ಟು ಬ್ಯಾಕ್ ಭೂಕಂಪಗಳು ದಾಖಲಾಗಿವೆ.

ಮೊದಲ ಭೂಕಂಪವು ರಿಕ್ಟರ್ ಮಾಪಕದಲ್ಲಿ ಬೆಳಿಗ್ಗೆ 4.09 ಕ್ಕೆ 4.4 ರ ತೀವ್ರತೆಯೊಂದಿಗೆ ದಾಖಲಾಗಿದೆ. ಅದೇ ಸಮಯದಲ್ಲಿ, ಎರಡನೇ ಭೂಕಂಪವು ಬೆಳಗ್ಗೆ 4:22 ಕ್ಕೆ 3.1 ರ ತೀವ್ರತೆಯೊಂದಿಗೆ ಮತ್ತು ಮೂರನೆಯದು 4:25 ಕ್ಕೆ 3.4 ಕ್ಕೆ ರಿಕ್ಟರ್ ಮಾಪಕದಲ್ಲಿ ದಾಖಲಾಗಿದೆ. ಭೂಕಂಪದ ಕಂಪನದ ಮೇಲೆ ಜನರು ಇದ್ದಕ್ಕಿದ್ದಂತೆ ನಿದ್ರೆಯಿಂದ ಎಚ್ಚರಗೊಂಡು ತಮ್ಮ ಮನೆಗಳಿಂದ ಹೊರಬಂದಿದ್ದಾರೆ. ಈ ವೇಳೆ ಜನರಲ್ಲಿ ಆತಂಕದ ವಾತಾವರಣವೂ ನಿರ್ಮಾಣವಾಗಿತ್ತು. ಭೂಕಂಪದ ಕೇಂದ್ರಬಿಂದುವು ಭೂಮಿಯಿಂದ ಸುಮಾರು 10 ಕಿಲೋಮೀಟರ್ ಆಳದಲ್ಲಿದೆ ಎಂದು ಹೇಳಲಾಗಿದೆ.

ಓದಿ:ಕೊಳದಲ್ಲಿ ಮುಳುಗಿ ನಾಲ್ವರು ಶಾಲಾ ಬಾಲಕಿಯರು ಸಾವು!

ABOUT THE AUTHOR

...view details