ಪ್ರತಾಪಗಢ(ರಾಜಸ್ಥಾನ): ವಿಷಾಹಾರ ಸೇವಿಸಿ ಜಿಲ್ಲಾಸ್ಪತ್ರೆಗೆ ದಾಖಲಾದ ಒಂದೇ ಕುಟುಂಬದ 4 ಮಕ್ಕಳ ಪೈಕಿ ಇಬ್ಬರು ಸಾವಿಗೀಡಾಗಿದ್ದಾರೆ. ಇನ್ನಿಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಹಾಗೆ ಘಂಟಾಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕುಟುಂಬದ ಉಳಿದ ಮೂವರು ಸದಸ್ಯರು ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಂಟಾಳಿ ಪೊಲೀಸ್ ಠಾಣಾಧಿಕಾರಿ ಸೋಹನಲಾಲ್ ಈ ಬಗ್ಗೆ ಮಾಹಿತಿ ನೀಡಿ, ನಲಪಾಡ ಗ್ರಾಮ ಪಂಚಾಯಿತಿಯ ಮಾಂಡವ್ ಜೈಲು ಗ್ರಾಮದ ನಿವಾಸಿ ಭೂರಿ ಬಾಯಿ ಎಂಬುವವರ ಪುತ್ರಿ ಗುಡ್ಡಿ ಜೂನ್ 18 ರ ಸಂಜೆ ಅಡುಗೆ ಮಾಡಿ ಮನೆಯವರಿಗೆಲ್ಲಾ ಬಡಿಸಿದ್ದಾರೆ. ಸ್ವಲ್ಪ ಸಮಯದ ನಂತರ ಎಲ್ಲರ ಆರೋಗ್ಯವೂ ಹದಗೆಟ್ಟಿದೆ. ಎಲ್ಲರಿಗೂ ವಾಂತಿ-ಭೇದಿ ಆಗಿದೆ. ತಕ್ಷಣವೇ ಗ್ರಾಮಸ್ಥರ ನೆರವಿನಿಂದ ಎಲ್ಲರನ್ನು ಘಂಟಾಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತರಲಾಯಿತು ಎಂದು ವಿವರಿಸಿದರು.