ಪಾಕೂರ್ (ಜಾರ್ಖಂಡ್): ಇಬ್ಬರು ಮಕ್ಕಳನ್ನು ಬರ್ಬರವಾಗಿ ಹತೈ ಮಾಡಿ ಮೃತದೇಹಗಳನ್ನು ಕೊಟ್ಟಿಗೆಯಲ್ಲಿ ಎಸೆದು ಆರೋಪಿಗಳು ಪರಾರಿಯಾಗಿರುವ ಘಟನೆ ಜಾರ್ಖಂಡ್ನ ಪಾಕೂರ್ ಜಿಲ್ಲೆಯಲ್ಲಿ ನಡೆದಿದೆ.
ಅಷ್ಟೇ ಅಲ್ಲದೆ ಮಕ್ಕಳ ಒಂದು ಕಣ್ಣನ್ನೂ ಪಾಪಿಗಳು ಕಿತ್ತಿದ್ದಾರೆ. ಪಾಕೂರ್ ಜಿಲ್ಲೆಯ ಅಂಬಾಡಿಹಾಳ ಎಂಬ ಗ್ರಾಮದ ಪ್ರೇಮ್ ಮರಾಂಡಿ ಎಂಬವರ 10 ಮತ್ತು 11 ವರ್ಷದ ಮಕ್ಕಳು ಇವರಾಗಿದ್ದಾರೆ. ನಿನ್ನೆ ಸಂಜೆ ಸಂಬಂಧಿಕರ ಮನೆಗೆ ತೆರಳಿದ್ದ ಮಕ್ಕಳು ರಾತ್ರಿಯಾದರೂ ಮನೆಗೆ ಹಿಂತಿರುಗಲಿಲ್ಲ. ಇಂದು ಬೆಳಗ್ಗೆ ಗ್ರಾಮದಿಂದ ಸ್ವಲ್ಪ ದೂರದಲ್ಲಿರುವ ಕೊಟ್ಟಿಗೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.