ಕರ್ನಾಟಕ

karnataka

By

Published : Apr 26, 2022, 6:27 PM IST

ETV Bharat / bharat

ಪ್ರಶಾಂತ್ ಕಿಶೋರ್-ಕೆಸಿಆರ್​ ಭೇಟಿ: ಎರಡು ಪಕ್ಷಗಳ ದ್ವಂದ್ವ ನೀತಿ ಬಯಲು- ಬಿಜೆಪಿ

ಪ್ರಶಾಂತ್ ಕಿಶೋರ್ ಮತ್ತು ಕೆಸಿಆರ್​ ಭೇಟಿ ಕುರಿತು ಎರಡು ಪಕ್ಷಗಳ ದ್ವಂದ್ವ ನೀತಿ ಬಯಲಾಗಿದೆ ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.

TRS and Prashant Kishor developments raise eyebrows in Telangana  Telangana political issue  CM Chandrasekhar Rao news  ಎರಡು ಪಕ್ಷಗಳ ದ್ವಂದ್ವ ನೀತಿ ಬಯಲಾಗಿದೆ ಎಂದ ಬಿಜೆಪಿ  ಪ್ರಶಾಂತ್ ಕಿಶೋರ್ ಮತ್ತು ಕೆಸಿಆರ್​ ಭೇಟಿ ವಿಚಾರ  ಸಿಎಂ ಕೆ ಚಂದ್ರಶೇಖರ್​ ರಾವ್​ ಸುದ್ದಿ
ಪ್ರಶಾಂತ್ ಕಿಶೋರ್-ಕೆಸಿಆರ್​

ನವದೆಹಲಿ: ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ನೇತೃತ್ವದ ಭಾರತೀಯ ರಾಜಕೀಯ ಕ್ರಿಯಾ ಸಮಿತಿ ಅಧಿಕೃತವಾಗಿ ಟಿಆರ್‌ಎಸ್‌ಗಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ತೆಲಂಗಾಣ ರಾಷ್ಟ್ರ ಸಮಿತಿ ನಾಯಕ ಕೆ.ಟಿ.ರಾಮರಾವ್ ಭಾನುವಾರ ಖಚಿತಪಡಿಸಿರುವುದು ತೆಲಂಗಾಣ ರಾಜಕೀಯದಲ್ಲಿ ಸಂಚಲನ ಉಂಟು ಮಾಡದೆ.

ಪ್ರಶಾಂತ್ ಕಿಶೋರ್

ಪ್ರಶಾಂತ್ ಕಿಶೋರ್ ಟಿಆರ್‌ಎಸ್ ಪಕ್ಷಕ್ಕೆ ಐ-ಪಿಎಸಿ ಅನ್ನು ಪರಿಚಯಿಸಿದ್ದಾರೆ ಮತ್ತು ಐ-ಪಿಎಸಿ ನಮಗಾಗಿ ಅಧಿಕೃತವಾಗಿ ಕೆಲಸ ಮಾಡುತ್ತಿದೆ. ನಾವು ಪ್ರಶಾಂತ್ ಕಿಶೋರ್ ಅವರೊಂದಿಗೆ ಕೆಲಸ ಮಾಡುತ್ತಿಲ್ಲ, ಆದರೆ ಐ-ಪಿಎಸಿ ಜೊತೆ ಕೆಲಸ ಮಾಡುತ್ತಿದ್ದೇವೆ ಎಂದು ಕೆಟಿಆರ್ ಹೇಳಿದ್ದಾರೆ.

ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಕಳೆದ ಎರಡು ದಶಕಗಳಿಂದ ಟಿಆರ್‌ಎಸ್ ಅನ್ನು ನಡೆಸುತ್ತಿದ್ದಾರೆ. ಆದರೆ ಪಕ್ಷವು ಡಿಜಿಟಲ್ ಮಾಧ್ಯಮವನ್ನು ಕಳೆದುಕೊಳ್ಳಲು ಬಯಸುವುದಿಲ್ಲ. ಅದಕ್ಕಾಗಿಯೇ ಮುಂಬರುವ ಚುನಾವಣೆಯಲ್ಲಿ ಐ-ಪಿಎಸಿ ಟಿಆರ್‌ಎಸ್ ಪಕ್ಷಕ್ಕೆ ಸಹಾಯ ಮಾಡಲಿದೆ ಎಂದು ಟಿಆರ್‌ಎಸ್ ಕಾರ್ಯಾಧ್ಯಕ್ಷರು ಹೇಳಿದರು.

ಇದನ್ನೂ ಓದಿ:ಟಿಡಿಪಿ, ಜೆಡಿಎಸ್, ಟಿಆರ್‌ಎಸ್‌ ಹೊರಗಿಟ್ಟು ಜಂಟಿ ಹೇಳಿಕೆ ನೀಡಿದ ವಿರೋಧ ಪಕ್ಷಗಳ ಒಕ್ಕೂಟ!

ಈ ನಡೆಯನ್ನು ಟೀಕಿಸಿರುವ ಬಿಜೆಪಿ, ಎರಡು ಪಕ್ಷಗಳ ದ್ವಂದ್ವ ನೀತಿ ಬಯಲಾಗಿದೆ. ಐ-ಪಿಎಸಿ ರಾಜ್ಯದಲ್ಲಿ ಟಿಆರ್‌ಎಸ್‌ಗಾಗಿ ಕೆಲಸ ಮಾಡುತ್ತದೆ. ಆದರೆ ಪ್ರಶಾಂತ್ ಕಿಶೋರ್ ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ನಾಯಕರಾಗಿ ಕೆಲಸ ಮಾಡುತ್ತಾರೆ. ಈ ದ್ವಂದ್ವ ನೀತಿಯನ್ನು ಜನರು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲವೇ? ಎಂದು ಪ್ರಶ್ನಿಸಿದೆ.

ABOUT THE AUTHOR

...view details