ಕರ್ನಾಟಕ

karnataka

ETV Bharat / bharat

ರೈಲಿಗೆ ತಲೆಕೊಟ್ಟ ಪ್ರೇಮಿಗಳು: ಹಳಿಯಲ್ಲಿ ದೇಹಗಳು ಛಿದ್ರ ಛಿದ್ರ! - terrible incident took place at surareddypalem of Prakasam district in Andhra Pradesh

ಪೋಷಕರು ತಮ್ಮ ಮದುವೆಗೆ ಒಪ್ಪುವುದಿಲ್ಲ ಎಂದು ತಿಳಿದು ಯುವಜೋಡಿಯೊಂದು ಬಾರದಲೋಕಕ್ಕೆ ತೆರಳಿದೆ. ರೈಲಿಗೆ ತಲೆಕೊಟ್ಟು ಪ್ರೇಮಿಗಳಿಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದು, ಅವರ ದೇಹಗಳು ಛಿದ್ರವಾಗಿವೆ. ಆಂಧ್ರಪ್ರದೇಶದಲ್ಲಿ ಈ ಪ್ರಕರಣ ನಡೆದಿದೆ.

Tragic Incident: Lovers commits suicide by falling under train at prakasam
ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳು

By

Published : Mar 23, 2021, 5:49 PM IST

ಪ್ರಕಾಶಂ(ಆಂಧ್ರಪ್ರದೇಶ): ಜಿಲ್ಲೆಯ ಸುರರೆಡ್ಡಿಪಾಲಂನಲ್ಲಿ ದುರಂತ ಅಂತ್ಯದ ಘಟನೆಯೊಂದು ನಡೆದಿದೆ. ರೈಲ್ವೆ ಹಳಿಗೆ ತಲೆಕೊಟ್ಟು ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕೊಪ್ಪೋಲು ನಿವಾಸಿ ವಿಷ್ಣುವರ್ಧನ್ ರೆಡ್ಡಿ, ವೆಂಕಟೇಶ್ವರ ಕಾಲೊನಿಯ ನಾಗಿನೇನಿ ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳು. ಬೇರೆ ಬೇರೆ ಜಾತಿಯವರಾದ ಇವರು ಕೆಲವು ದಿನಗಳಿಂದ ಪರಸ್ಪರ ಪ್ರೀತಿ ಮಾಡುತ್ತಿದ್ದರು.

ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳು

ಪೋಷಕರು ತಮ್ಮ ಮದುವೆಗೆ ಒಪ್ಪುವುದಿಲ್ಲ ಎಂದು ತಿಳಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿಷ್ಣುವರ್ಧನ್ ರೆಡ್ಡಿ ಎಂಜಿನಿಯರಿಂಗ್ ಎರಡನೇ ವರ್ಷ ಓದುತ್ತಿದ್ದರೆ, ನಾಗಿನೇನಿ ಪ್ರಥಮ ವರ್ಷದ ಪದವಿ ವ್ಯಾಸಂಗ ಮಾಡುತ್ತಿದ್ದಳು.

ಇಬ್ಬರ ದೇಹ ರೈಲಿನ ರಭಸಕ್ಕೆ ಸಿಲುಕಿ ಛಿದ್ರವಾಗಿವೆ. ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸುತ್ತಿದ್ದಾರೆ.

ABOUT THE AUTHOR

...view details