ನವಿಮುಂಬೈ: ಖಾರ್ಘರ್ನ ಪಾಂಡವಕಡ ಜಲಪಾತವನ್ನು ಅಪಾಯಕಾರಿ ಜಲಪಾತ ಎಂದು ಪೊಲೀಸರು ಮತ್ತು ಆಡಳಿತ ಮಂಡಳಿ ಘೋಷಿಸಿದೆ. ಅಲ್ಲದೇ ಜಲಪಾತಕ್ಕೆ ಭೇಟಿ ನೀಡದಂತೆ ತಡೆಯಲು ಮಳೆಗಾಲದ ಆರಂಭದಲ್ಲಿಯೇ ಪೊಲೀಸರು ಸುತ್ತೋಲೆ ಹೊರಡಿಸಿದ್ದಾರೆ. ಆದರೂ ಎಂಜಾಯ್ ಮಾಡಲು ಜಲಪಾತಕ್ಕೆ ತೆರಳಿ ಭಾರಿ ಮಳೆ ಹಿನ್ನೆಲೆ ಅಪಾಯಕ್ಕೆ ಸಿಲುಕಿದ 117 ಮಂದಿಯನ್ನು ನವೀ ಮುಂಬೈ ಪೊಲೀಸರು ಹಾಗೂ ಅಗ್ನಿಶಾಮಕ ದಳ ರಕ್ಷಣಾ ಕಾರ್ಯಾಚರಣೆ ನಡೆಸಿ ರಕ್ಷಿಸಿದೆ.
ಒಟ್ಟು 15 ಅಗ್ನಿಶಾಮಕ ದಳಗಳು ಆಗಮಿಸಿ ಸತತ ಎರಡು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಅಪಾಯದಲ್ಲಿ ಸಿಲುಕಿದ್ದ 78 ಮಹಿಳೆಯರು 5 ಮಕ್ಕಳು ಸೇರಿ ಎಲ್ಲರನ್ನೂ ರಕ್ಷಿಸಿವೆ. ಮುಂಬೈನಲ್ಲಿ ಈಗಾಗಲೇ ವಿಪರೀತ ಮಳೆಯಾಗುತ್ತಿದೆ. ಆದರೂ ಭಾನುವಾರ ರಜಾ ದಿನವಾಗಿರುವುದರಿಂದ ಜಲಪಾತಕ್ಕೆ ಹೋಗುವುದನ್ನು ನಿಷೇಧಿಸಿದ್ದರೂ ಪ್ರವಾಸಿಗರು ನಿಯಮ ಉಲ್ಲಂಘಿಸಿ ಖಾರ್ಘರ್ನಲ್ಲಿರುವ ಜಲಪಾತಕ್ಕೆ ಹೋಗಿದ್ದರು.