ಕರ್ನಾಟಕ

karnataka

By

Published : Aug 23, 2021, 5:14 PM IST

Updated : Aug 23, 2021, 7:58 PM IST

ETV Bharat / bharat

ಕಲ್ಯಾಣ್ ಸಿಂಗ್ ಅಂತಿಮ ವಿಧಿವಿಧಾನ: ಅಂತ್ಯಕ್ರಿಯೆಯಲ್ಲಿ ಪ್ರಮುಖ ರಾಜಕೀಯ ನಾಯಕರು ಭಾಗಿ

ಬಹುಅಂಗಾಂಗ ವೈಫಲ್ಯದಿಂದ ವಿಧಿವಶರಾದ ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್ ಅವರ ಅಂತ್ಯಕ್ರಿಯೆ ಬನ್ಸಿ ಘಾಟ್‌ನಲ್ಲಿ ನಡೆದಿದ್ದು, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ಪ್ರಮುಖ ರಾಜಕೀಯ ನಾಯಕರು ಪಾಲ್ಗೊಂಡಿದ್ದಾರೆ.

top leaders attends kalyan singh funeral
ಅಂತ್ಯಕ್ರಿಯೆಯಲ್ಲಿ ಪ್ರಮುಖ ನಾಯಕರು ಭಾಗಿ

ಲಖನೌ/ಉತ್ತರಪ್ರದೇಶ: ಬಹುಅಂಗಾಂಗ ವೈಫಲ್ಯ ಹಿನ್ನೆಲೆ ನಿಧನರಾದ ಉತ್ತರ ಪ್ರದೇಶ ಮಾಜಿ ಸಿಎಂ ಕಲ್ಯಾಣ್ ಸಿಂಗ್ ಅವರ ಅಂತ್ಯಕ್ರಿಯೆಯನ್ನು ಬುಲಂದ್‌ಶಹರ್‌ನ ನರೋರಾ ಪಟ್ಟಣದ ಬನ್ಸಿ ಘಾಟ್‌ನಲ್ಲಿ ನೆರವೇರಿಸಲಾಗಿದೆ. ಅಂತಿಮ ವಿಧಿವಿಧಾನದ ವೇಳೆ ಹಲವಾರು ಪ್ರಮುಖ ರಾಜಕೀಯ ನಾಯಕರು ಪಾಲ್ಗೊಂಡಿದ್ದರು.

ಕಲ್ಯಾಣ್ ಸಿಂಗ್ ಅಂತ್ಯಕ್ರಿಯೆ

ರಕ್ಷಣಾ ಸಚಿವ ರಾಜನಾಥ್ ಸಿಂಗ್, ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿದಂತೆ ಹಿರಿಯ ಬಿಜೆಪಿ ನಾಯಕರು ಕಲ್ಯಾಣ್​ ಸಿಂಗ್​ ಅವರ ಅಂತ್ಯಕ್ರಿಯೆ ವೇಳೆ ಭಾಗವಹಿಸಿದ್ದರು.

ಇದನ್ನೂ ಓದಿ:ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್​ ವಿಧಿವಶ

ಸ್ಥಳೀಯ ನೂರಾರು ಜನರು ಸಹ ಉತ್ತರ ಪ್ರದೇಶ ಮಾಜಿ ಸಿಎಂ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡರು. ಸಿಂಗ್ ಅವರ ಪುತ್ರ ರಾಜವೀರ್ ಸಿಂಗ್ ತಮ್ಮ ತಂದೆಯ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿದ್ರು.

ಇದನ್ನೂ ಓದಿ:ಕೃಷಿ ಕುಟುಂಬದಿಂದ ಬಂದು ಕೇಸರಿ ಕೋಟೆ ಕಟ್ಟಿದರು.. ಯುಪಿ ಮಾಜಿ ಸಿಎಂ ಕಲ್ಯಾಣ್​ ಸಿಂಗ್ ಏಳುಬೀಳು..

Last Updated : Aug 23, 2021, 7:58 PM IST

ABOUT THE AUTHOR

...view details