ಕರ್ನಾಟಕ

karnataka

ಟಾಲಿವುಡ್​ ನಟ ಸಾಯಿ ಧರಂತೇಜ್ ಆರೋಗ್ಯ ಬುಲೆಟಿನ್ ಬಿಡುಗಡೆ: ಆಸ್ಪತ್ರೆಗೆ ನಟರ ದಂಡು

By

Published : Sep 11, 2021, 11:56 AM IST

ಟಾಲಿವುಡ್​​​ ನಟ ಸಾಯಿ ಧರಂತೇಜ್ ಅವರ ಆರೋಗ್ಯ ವಿಚಾರಿಸಲು ಹೈದರಾಬಾದ್​ನ ಅಪೋಲೋ ಆಸ್ಪತ್ರೆಗೆ ನಟರಾದ ರಾಮ್​ಚರಣ್, ಪ್ರಕಾಶ್​ ರಾಜ್ ಮುಂತಾದವರು ಭೇಟಿ ನೀಡಿದ್ದಾರೆ.

Tollywood actor Sai DharamTej is now stable
ಟಾಲಿವುಡ್​ ನಟ ಸಾಯಿ ಧರಂತೇಜ್ ಆರೋಗ್ಯ ಬುಲೆಟಿನ್ ಬಿಡುಗಡೆ: ಆಸ್ಪತ್ರೆಗೆ ನಟರ ಭೇಟಿ

ಹೈದರಾಬಾದ್​, ತೆಲಂಗಾಣ:ಟಾಲಿವುಡ್​​​ ನಟ ಸಾಯಿ ಧರಂತೇಜ್ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈದರಾಬಾದ್​​ನ ಅಪೋಲೋ ಆಸ್ಪತ್ರೆ ಆರೋಗ್ಯ ಬುಲೆಟಿನ್ ಬಿಡುಗಡೆ ಮಾಡಿದೆ. ಸಾಯಿ ಧರಂ ತೇಜ್ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಎಲ್ಲ ಅಂಗಾಂಗಗಳೂ ಸರಿಯಾಗಿ ಕೆಲಸ ಮಾಡುತ್ತಿವೆ ಎಂದು ಬುಲೆಟಿನ್​ನಲ್ಲಿ ಉಲ್ಲೇಖಿಸಲಾಗಿದೆ.

ಟಾಲಿವುಡ್​ ನಟ ಸಾಯಿ ಧರಂತೇಜ್ ಅಪಘಾತ

ಸದ್ಯಕ್ಕೆ ಸಾಯಿ ಧರಂತೇಜ್​ಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ದಿನಪೂರ್ತಿ ಅವರ ಆರೋಗ್ಯದ ಮೇಲೆ ನಿಗಾ ಇಡಲಾಗುತ್ತದೆ. ಮುಂದಿನ ಆರೋಗ್ಯ ಬುಲೆಟಿನ್ ನಾಳೆ ಬಿಡುಗಡೆಯಾಗುತ್ತದೆ ಎಂದು ಆಸ್ಪತ್ರೆಯ ವೈದ್ಯರು ಮಾಹಿತಿ ನೀಡಿದ್ದಾರೆ.

ಸಾಯಿ ಧರಂತೇಜ್ ಆರೋಗ್ಯ ಬುಲೆಟಿನ್ ಬಿಡುಗಡೆ

ಇನ್ನು ಅಪೋಲೋ ಆಸ್ಪತ್ರೆಗೆ ನಟ ರಾಮ್​ಚರಣ್ ಮತ್ತು ರಾಮ್​ಚರಣ್ ಪತ್ನಿ ಉಪಾಸನಾ ಭೇಟಿ ಕೊಟ್ಟು ತೇಜ್ ಆರೋಗ್ಯದ ಕುರಿತು ವೈದ್ಯರ ಬಳಿ ವಿಚಾರಿಸಿದ್ದಾರೆ. ಇದರ ಜೊತೆಗೆ ಬಹುಭಾಷಾ ನಟ ಪ್ರಕಾಶ್ ರಾಜ್ ಮತ್ತು ಟಾಲಿವುಡ್ ನಟ ಶ್ರೀಕಾಂತ್ ಆಸ್ಪತ್ರೆಗೆ ಭೇಟಿ, ತೇಜ್ ಆರೋಗ್ಯ ವಿಚಾರಿಸಿದ್ದಾರೆ.

ಇದನ್ನೂ ಓದಿ:ಬೈಕ್‌ ನಲ್ಲಿ ತೆರಳುತ್ತಿದ್ದಾಗ ಭೀಕರ ಅಪಘಾತ: ಟಾಲಿವುಡ್‌ ನಟ ಸಾಯಿ ಧರಂ ತೇಜ್‌ ಆರೋಗ್ಯ ಸ್ಥಿರ

ABOUT THE AUTHOR

...view details