ಕರ್ನಾಟಕ

karnataka

ಈ ರಾಶಿಯವರು ಇಂದು ತುಂಬಾ ಅದೃಷ್ಟವಂತರೇ ಹೌದು.. ಇಲ್ಲಿದೆ ಇಂದಿನ ರಾಶಿಫಲ

By

Published : Jul 14, 2022, 5:00 AM IST

ಯಾವ ರಾಶಿಗೆಯವರಿಗೆ ಕೆಟ್ಟದಿನ ಯಾವ ರಾಶಿಯವರಿಗೆ ಒಳ್ಳೆಯ ದಿನ ಇಲ್ಲಿದೆ ನೋಡಿ.

ಈ ರಾಶಿಯವರು ಇಂದು ತುಂಬಾ ಅದೃಷ್ಟವಂತರೇ ಹೌದು
ಈ ರಾಶಿಯವರು ಇಂದು ತುಂಬಾ ಅದೃಷ್ಟವಂತರೇ ಹೌದು

ಮೇಷ : ನೀವು ಇಂದು ಮಹತ್ವಾಕಾಂಕ್ಷಿಯಾಗಿರುವಿರಿ. ಇಂದು ನಿಮಗೆ ಖಚಿತವಾದ ಯೋಜನೆ ಮತ್ತು ದೋಷರಹಿತ ಅನುಷ್ಠಾನ ಇರಲಿದೆ. ಆದರೂ, ನಿಮ್ಮ ಪ್ರಗತಿ ಬಸವನ ಹುಳುವಿನಂತೆ ಇರುತ್ತದೆ. ನಿರಾಸೆ ಹೊಂದಬೇಡಿ. ನಿಮಗೆ ದೇವರ ಕೃಪೆ ಇದೆ.

ವೃಷಭ : ನಿಮ್ಮ ವೃತ್ತಿಯಲ್ಲಿ ಪ್ರಗತಿಯ ಸಾಧ್ಯತೆ ಇದೆ. ಆದರೆ ಈ ಪ್ರಗತಿ ನೀವು ನಿರೀಕ್ಷಿಸಿದ ದಿಕ್ಕಿನಲ್ಲಿ ಇರುವುದಿಲ್ಲ. ಹಣಕಾಸಿನ ಅವಕಾಶಗಳು ಮತ್ತು ಯಶಸ್ಸು ನಿಮ್ಮ ಬಾಗಿಲು ತಟ್ಟುತ್ತವೆ, ಅಪರೂಪದ ಅತಿಥಿಗಳ ಭೆಟಿ ಸಾಧ್ಯತೆ. ನೀವು ಭೌತಿಕ ಯಶಸ್ಸು ಗಳಿಸುತ್ತೀರಿ.

ಮಿಥುನ : ನೀವು ನಿಮ್ಮ ಹಣಕಾಸು, ಜಂಟಿಯಾಗಿ ಹೊಂದಿರುವ ಸಂಪತ್ತುಗಳು ಮತ್ತು ಸ್ಥಿರಾಸ್ತಿಯ ಕುರಿತು ಆತಂಕಗೊಳ್ಳುವ ಸಾಧ್ಯತೆ ಇದೆ. ಅತ್ಯಂತ ನಿರ್ಲಕ್ಷಿಸಬಹುದಾದ ಸಮಸ್ಯೆಗಳೂ ನಿಮ್ಮ ಮೂಡ್ ಹಾಳು ಮಾಡಬಹುದು. ನೀವು ಹಣಕಾಸಿನ ವಿಷಯಗಳಲ್ಲಿ ಅವಕಾಶಗಳನ್ನು ತೆಗೆದುಕೊಳ್ಳಬಹುದು. ವಿಚಲಿತರಾಗದೆ ಇರಿ ಮತ್ತು ನಿಮ್ಮ ವರ್ಚಸ್ವಿ ವ್ಯಕ್ತಿತ್ವಕ್ಕೆ ಮರಳಿರಿ.

ಕರ್ಕಾಟಕ : ಜನರು ನಿಮ್ಮನ್ನು ಸುತ್ತುವರಿಯುತ್ತಾರೆ. ನೀವು ಹಾಸ್ಯಪ್ರಜ್ಞೆಯಿಂದ ಅವರನ್ನು ರಂಜಿಸುತ್ತೀರಿ. ಸಾಮಾಜಿಕ ಸಂಪರ್ಕಗಳು ನಿಮಗೆ ಅನುಕೂಲವಾಗುತ್ತವೆ. ವಿದ್ಯಾರ್ಥಿಗಳು ತಮ್ಮ ಕಲಿಕೆಯಲ್ಲಿ ಔನ್ನತ್ಯ ಸಾಧಿಸುತ್ತಾರೆ ಮತ್ತು ಗಮನ ನೀಡುತ್ತಾರೆ. ಒಟ್ಟಾರೆ ಇದು ಒಳ್ಳೆಯ ದಿನವಾಗಿದೆ.

ಸಿಂಹ : ನೀವು ಒತ್ತಡದ ಕಾರ್ಯಗಳಿಂದ ದೂರ ಉಳಿಯುವಲ್ಲಿ ಕೊಂಚ ಆತಂಕ ಅನುಭವಿಸುತ್ತೀರಿ. ನಿಮ್ಮ ಮಾನಸಿಕ ಮತ್ತು ದೈಹಿಕ ಆರೋಗ್ಯ ಕಾಪಾಡಿಕೊಳ್ಳಬೇಕು. ಪ್ರಮುಖ ಸಭೆಗಳು ಯಶಸ್ವಿಯಾಗಿ ಮುಗಿಯುತ್ತವೆ, ಆದರೆ ಅವು ನಿಮ್ಮನ್ನು ದಿನದ ಅಂತ್ಯಕ್ಕೆ ನಿರುತ್ಸಾಹಗೊಳಿಸುತ್ತವೆ. ನಿರಾಳಗೊಳ್ಳಲು ದಾರಿಗಳನ್ನು ಹುಡುಕಿರಿ.

ಕನ್ಯಾ : ಆರೋಗ್ಯದ ವಿಷಯಕ್ಕೆ ಬಂದರೆ ಅನಿಶ್ಚಿತತೆ ಬೇಡ. ನೀವು ಹಳೆಯ ಗಾಯಗಳನ್ನು ವಾಸಿ ಮಾಡಿಕೊಳ್ಳಲು ಹಿಂದೆ ಮುಂದೆ ನೋಡಬೇಡಿ. ಆದರೆ, ಶಾಂತಿ ಮತ್ತು ಸಮೃದ್ಧಿ ದಿನದ ವಿಶೇಷತೆಗಳು ಇರಲಿವೆ. ನೀವು ಇಂದು ವಿನೋದ ಮತ್ತು ಮನರಂಜನೆಗೆ ಸಮಯ ಹೂಡಿಕೆ ಮಾಡಿ

ತುಲಾ: ಸರ್ಕಾರಕ್ಕೆ ಕೆಲಸ ಮಾಡುವುದು ಸದಾ ಪ್ರಮುಖ ಜವಾಬ್ದಾರಿ. ಆದರೆ, ಎಲ್ಲ ದಿನಗಳಿಗಿಂತ ಇಂದು ಸರ್ಕಾರದ ಸೇವೆಯಲ್ಲಿರುವವರಿಗೆ ಅಸಾಧಾರಣ ಮತ್ತು ಅಪೂರ್ವ. ನಿಮ್ಮ ಕ್ರಿಯೆಗಳು ಸಾಧನೆಗಳಾಗುತ್ತವೆ, ಮತ್ತು ನೀವು ನಿಮ್ಮ ಪ್ರಶಂಸನೀಯ ಸೇವೆಗೆ ಮಾನ್ಯತೆ ಪಡೆಯುವುದು ಮತ್ತು ಪುರಸ್ಕರಿಸಲ್ಪಡುವುದು ಖಚಿತ.

ವೃಶ್ಚಿಕ : ಇದು ವ್ಯಾಪಾರದ ಸಮಯ. ನೀವು ಹೊಸ ಉತ್ಪನ್ನ ಬಿಡುಗಡೆ ಮಾಡುವ ಮೂಲಕ ನಿಮ್ಮ ಪ್ರತಿಸ್ಪರ್ಧಿಗಳಿಗೆ ಶಾಕ್ ನೀಡುತ್ತೀರಿ. ನೀವು ಕೆಲ ಅಡೆತಡೆಗಳನ್ನು ದಾಟಬಹುದು ಎಂದು ಸೂಚಿಸುತ್ತಿವೆ. ನಿಮ್ಮ ಸಮಯ ತೆಗೆದುಕೊಳ್ಳಿ, ತೊಂದರೆಗಳನ್ನು ಪರಿಹರಿಸಿಕೊಳ್ಳಿ.

ಧನು : ನಿಮ್ಮ ಒಳಗಿರುವ ಋಷಿ ಇಂದು ನಾಯಕತ್ವ ವಹಿಸುತ್ತಾನೆ. ನೀವು ಮನಃಶಾಂತಿಗೆ ನಿಮ್ಮದೇ ದಾರಿ ಕಂಡುಕೊಳ್ಳಬಹುದು . ನೀವು ಇಂದು ಜ್ಞಾನಿ ಮತ್ತು ಸಂತೃಪ್ತರಾಗಿರುವಿರಿ, ನಿಮ್ಮ ಸುತ್ತಲೂ ನೀವು ಪ್ರೀತಿಯ ಸಂದೇಶ ಹರಡುತ್ತೀರಿ. ಒಟ್ಟಾರೆ, ಇಂದು ನಿಮಗೆ ಶಾಂತಿಯುತ ದಿನ ಇರಲಿದೆ.

ಮಕರ : ನಿಮ್ಮ ಅಸಾಧಾರಣ ಬೌದ್ಧಿಕ ಸಾಮರ್ಥ್ಯ ನಿಮಗೆ ಉತ್ಸಾಹಕರ ಫಲಿತಾಂಶಗಳನ್ನು ನೀಡುವುದಲ್ಲದೇ ನಿಮ್ಮ ಹತ್ತಿರದ ಸಹವರ್ತಿಗಳಿಗೆ ನಿಮ್ಮ ಮೌಲಿಕ ಸಲಹೆಯಿಂದ ಅವರ ವೃತ್ತಿಯಲ್ಲಿ ಮಹತ್ತರವಾಗಿ ಪ್ರಗತಿ ಕಾಣಲು ನೆರವಾಗುತ್ತದೆ. ಅಸಂಖ್ಯ ಸಮಸ್ಯೆಗಳು ನಿಮ್ಮ ದಾರಿಯಲ್ಲಿವೆ, ಆದರೆ ಆತಂಕ ಪಡುವ ಅವಶ್ಯಕತೆ ಇಲ್ಲ. ನೀವು ಅವುಗಳನ್ನು ಪ್ರತಿಯೊಂದನ್ನೂ ಸುಲಭವಾಗಿ ನಿವಾರಿಸುತ್ತೀರಿ. ಅನುಷ್ಠಾನಕ್ಕೆ ಅನುಮೋದನೆ ಪಡೆದ ಪ್ರಾಜೆಕ್ಟ್ ಯಶಸ್ವಿಯಾಗಲಿದೆ ಮತ್ತು ನಿಮಗೆ ಪರ್ಫೆಕ್ಷನಿಸ್ಟ್ ಎಂಬ ಗೌರವ ತಂದುಕೊಡಲಿದೆ.

ಕುಂಭ : ನಿಮ್ಮ ಸಂವಹನ ಕೌಶಲ್ಯಗಳು ಇಂದು ಅದ್ಭುತಗಳನ್ನು ಮಾಡುತ್ತವೆ. ನಿಮ್ಮ ಪರಿಣಿತ ಉಚ್ಛಾರಣೆ ನಿಮಗೆ ಪುರಸ್ಕಾರಗಳನ್ನು ತಂದುಕೊಡುತ್ತವೆ ಮತ್ತು ಕಾರ್ಯಕ್ರಮಗಳು ಹಾಗೂ ಸಭೆಗಳಲ್ಲಿ ಅತ್ಯಂತ ಅನುಕೂಲಕರವಾಗುತ್ತವೆ. ವಾಸ್ತವವಾಗಿ ನಿಮ್ಮ ಚರ್ಚೆಗಳು ಮತ್ತು ವಾದಗಳು ಶಕ್ತಿಯುತವಾಗಿರುತ್ತವೆ. ಜನರು ನಿಮ್ಮೊಂದಿಗೆ ಒಪ್ಪದೇ ಇರುವಾಗ ಕ್ಷೋಭೆಗೊಳ್ಳದೇ ಇರುವುದು ಮುಖ್ಯ.

ಮೀನ : ಹೊಸ ಯೋಜನೆಗಳನ್ನು ಪ್ರಾರಂಭಿಸಲು ಇದು ಪವಿತ್ರವಾದ ಸಮಯ, ಇಂದು ನಿಮ್ಮ ಭವಿಷ್ಯಕ್ಕೆ ಗಮನಾರ್ಹ ಹೂಡಿಕೆ ಮಾಡುವುದನ್ನು ಕಾಣುತ್ತೀರಿ. ನಿಮ್ಮ ಕುಟುಂಬ ನಿಮ್ಮ ಯಶಸ್ಸಿಗೆ ತಳಹದಿ, ಮತ್ತು ಅದನ್ನು ಮನದಲ್ಲಿಟ್ಟುಕೊಳ್ಳುವುದು ನಿಮಗೆ ಕೆಲವು ಪ್ರಮುಖ ಒಳನೋಟಗಳನ್ನು ನೀಡುತ್ತದೆ. ನಿಮ್ಮ ನಗು ಇಂದು ಹಲವು ಹೃದಯಗಳನ್ನು ಗೆಲ್ಲುತ್ತದೆ.

ABOUT THE AUTHOR

...view details