ಕರ್ನಾಟಕ

karnataka

By

Published : Apr 16, 2022, 5:24 PM IST

ETV Bharat / bharat

ಮಧುರೈನಲ್ಲಿ ವಾರ್ಷಿಕ ರಥೋತ್ಸವ : ಸಾವಿರಾರು ಭಕ್ತರು ಭಾಗಿ

ತಮಿಳುನಾಡಿನ ಮಧುರೈನಲ್ಲಿ ಚಿತ್ತಿರೈ ಹಬ್ಬವು ಕಳೆಗಟ್ಟಿದೆ. ಶುಕ್ರವಾರ ನಡೆದ ವಾರ್ಷಿಕ ರಥೋತ್ಸವದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿದ್ದಾರೆ..

TN: Devotees participate in annual chariot festival in Madurai
ಮಧುರೈನಲ್ಲಿ ವಾರ್ಷಿಕ ರಥೋತ್ಸವ: ಸಾವಿರಾರು ಭಕ್ತರು ಭಾಗಿ

ಮಧುರೈ, ತಮಿಳುನಾಡು :ದಕ್ಷಿಣ ಭಾರತದ ಪ್ರಸಿದ್ಧ ಪುಣ್ಯ ಕ್ಷೇತ್ರವಾದ ಮಧುರೈನಲ್ಲಿ ಚಿತ್ತಿರೈ ಹಬ್ಬವು ಕಳೆಗಟ್ಟಿದೆ. ಈ ಹಿನ್ನೆಲೆಯಲ್ಲಿ ನಡೆದ ವಾರ್ಷಿಕ ರಥೋತ್ಸವದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿದ್ದಾರೆ. ಏಪ್ರಿಲ್ 5ರಂದು ಮೀನಾಕ್ಷಿ ಅಮ್ಮನ್ ದೇವಸ್ಥಾನದಲ್ಲಿ ಧ್ವಜಾರೋಹಣದೊಂದಿಗೆ ಈ ಉತ್ಸವ ಆರಂಭವಾಗಿದ್ದು, ವಾರ್ಷಿಕ ರಥೋತ್ಸವ ಕಳೆಗಟ್ಟಿದೆ.

ಚಿತರೈ ಹಬ್ಬದ 10ನೇ ದಿನವಾದ ಗುರುವಾರ ಮಧುರೈ ಮೀನಾಕ್ಷಿ ಮತ್ತು ಸುಂದರೇಶ್ವರರ ಕಲ್ಯಾಣೋತ್ಸವ ಜರುಗಿವೆ. ಸಾವಿರಾರು ಭಕ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ಇದನ್ನು 'ಮೀನಾಕ್ಷಿ ಸುಂದರೇಶ್ವರ ತಿರುಕಲ್ಯಾಣಂ' ಎಂದೇ ಕರೆಯಲಾಗುತ್ತದೆ. ಎರಡು ವರ್ಷಗಳಿಂದ ಚಿತ್ತಿರೈ ಉತ್ಸವ ಕೋವಿಡ್ ಕಾರಣದಿಂದ ಕಳೆಗುಂದಿತ್ತು.

ಮಧುರೈನಲ್ಲಿ ವಾರ್ಷಿಕ ರಥೋತ್ಸವ..

ಇದನ್ನೂ ಓದಿ:ಎರಡು ವರ್ಷಗಳ ನಂತರ ಅದ್ಧೂರಿಯಾಗಿ ನೆರವೇರಿದ ಮಧುರೈ ಮೀನಾಕ್ಷಿ-ಸುಂದರೇಶ್ವರ ಕಲ್ಯಾಣೋತ್ಸವ.. ವಿಡಿಯೋ

For All Latest Updates

ABOUT THE AUTHOR

...view details