ಚೆನ್ನೈ: ಕೇಂದ್ರಾಡಳಿತ ಪ್ರದೇಶ ಲಕ್ಷ ದ್ವೀಪದಲ್ಲಿ ಜನ ವಿರೋಧಿ ಕಾನೂನುಗಳನ್ನು ಜಾರಿಗೆ ತಂದ ಆರೋಪದಡಿ ಆಡಳಿತಾಧಿಕಾರಿ ಪ್ರಫುಲ್ ಖೋಡಾ ಪಟೇಲ್ರನ್ನು ವಾಪಸ್ ಕರೆಸಿಕೊಳ್ಳುವಂತೆ ಪಿಎಂಗೆ ತಮಿಳುನಾಡು ಸಿಎಂ ಒತ್ತಾಯಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಸಿಎಂ ಎಂ.ಕೆ.ಸ್ಟಾಲಿನ್, ಮುಸ್ಲಿಮರನ್ನು ದೂರವಿಡಲು ಜನವಿರೋಧಿ ನೀತಿಗಳನ್ನು ಪ್ರುಫುಲ್ ಪಟೇಲ್ ಜಾರಿಗೆ ತಂದಿದ್ದಾರೆ. ಅವರ ಈ ನಡೆ ನಮಗೆ ದುಃಖವನ್ನುಂಟು ಮಾಡುತ್ತಿದೆ ಎಂದಿದ್ದಾರೆ.