ಕರ್ನಾಟಕ

karnataka

ETV Bharat / bharat

ಪ್ರಫುಲ್ ಪಟೇಲ್​ರನ್ನು ವಾಪಸ್ ಕರೆಸಿಕೊಳ್ಳಿ: ಪ್ರಧಾನಿಗೆ ಎಂ.ಕೆ. ಸ್ಟಾಲಿನ್ ಮನವಿ - ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್

ಮುಸ್ಲಿಮರನ್ನು ದೂರವಿಡಲು ಜನವಿರೋಧಿ ನೀತಿಗಳನ್ನು ಪ್ರುಫುಲ್ ಪಟೇಲ್ ಜಾರಿಗೆ ತಂದಿದ್ದಾರೆ. ಅವರ ಈ ನಡೆ ನಮಗೆ ದುಃಖವನ್ನುಂಟು ಮಾಡುತ್ತಿದೆ ಎಂದು ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್ ಟ್ವೀಟ್ ಮಾಡಿದ್ದಾರೆ.

TN CM Stalin
TN CM Stalin

By

Published : May 27, 2021, 5:27 PM IST

ಚೆನ್ನೈ: ಕೇಂದ್ರಾಡಳಿತ ಪ್ರದೇಶ ಲಕ್ಷ ದ್ವೀಪದಲ್ಲಿ ಜನ ವಿರೋಧಿ ಕಾನೂನುಗಳನ್ನು ಜಾರಿಗೆ ತಂದ ಆರೋಪದಡಿ ಆಡಳಿತಾಧಿಕಾರಿ ಪ್ರಫುಲ್ ಖೋಡಾ ಪಟೇಲ್​ರನ್ನು ವಾಪಸ್ ಕರೆಸಿಕೊಳ್ಳುವಂತೆ ಪಿಎಂಗೆ ತಮಿಳುನಾಡು ಸಿಎಂ ಒತ್ತಾಯಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಸಿಎಂ ಎಂ.ಕೆ.ಸ್ಟಾಲಿನ್, ಮುಸ್ಲಿಮರನ್ನು ದೂರವಿಡಲು ಜನವಿರೋಧಿ ನೀತಿಗಳನ್ನು ಪ್ರುಫುಲ್ ಪಟೇಲ್ ಜಾರಿಗೆ ತಂದಿದ್ದಾರೆ. ಅವರ ಈ ನಡೆ ನಮಗೆ ದುಃಖವನ್ನುಂಟು ಮಾಡುತ್ತಿದೆ ಎಂದಿದ್ದಾರೆ.

ಇದನ್ನೂ ಓದಿ: ದೇಶದ ಆರ್ಥಿಕತೆ ಉಳಿಸಲು ನೋಟು ಮುದ್ರಿಸಿ, ಬಡವರಿಗೆ ಹಂಚಿ: ಬ್ಯಾಂಕರ್ ಉದಯ್ Kotak ಸಲಹೆ

ನಮ್ಮ ದೇಶದ ಶಕ್ತಿಯೇ ಬಹುತ್ವ. ಆದರೆ, ಪ್ರಫುಲ್ ಜಾರಿಗೊಳಿಸಿರುವ ನಿಯಮಗಳು ಲಕ್ಷದ್ವೀಪದ ಜನರ ಮೂಲ ಹಕ್ಕುಗಳನ್ನು ಕಸಿಯುತ್ತಿವೆ. ಹಾಗಾಗಿ ಪ್ರಧಾನಿ ಮೋದಿಯವರು ಮಧ್ಯ ಪ್ರವೇಶಿಸಿ ಅವರನ್ನು ವಾಪಸ್ ಕರೆಸಿಕೊಳ್ಳಬೇಕು ಎಂದು ಸ್ಟಾಲಿನ್ ಒತ್ತಾಯಿಸಿದ್ದಾರೆ.

ABOUT THE AUTHOR

...view details