ಕರ್ನಾಟಕ

karnataka

ETV Bharat / bharat

ಭಾರತ ಮತ್ತೊಮ್ಮೆ ವಿಶ್ವಗುರು ಆಗಲು ಇದು ಸರಿಯಾದ ಸಮಯ : ಎಂ ವೆಂಕಯ್ಯ ನಾಯ್ಡು - venkaiah naidu latest news

ಭಾರತದ ಮಾಜಿ ರಾಷ್ಟ್ರಪತಿ ಸರ್ವೇಪಲ್ಲಿ ರಾಧಾಕೃಷ್ಣನ್ ಅವರನ್ನು ನೆನಪಿಸಿಕೊಂಡ ನಾಯ್ಡು, ರಾಧಾಕೃಷ್ಣನ್ ಅವರು ತಮ್ಮ ಜೀವನದ ಉತ್ತಮ ಭಾಗವನ್ನು ಶಿಕ್ಷಣಕ್ಕಾಗಿ ಅರ್ಪಿಸಿದರು. ಭಾರತದ ಈ ಮಹಾನ್ ಮಗನಿಗೆ ನಾವು ಸಲ್ಲಿಸಬಹುದಾದ ಅತ್ಯುನ್ನತ ಗೌರವವೆಂದರೆ ಅವರು ತೋರಿಸಿದ ಮಾರ್ಗವನ್ನು ಅನುಸರಿಸುವುದು ಎಂದು ಹೇಳಿದರು..

ವೆಂಕಯ್ಯ ನಾಯ್ಡು
ವೆಂಕಯ್ಯ ನಾಯ್ಡು

By

Published : Sep 5, 2021, 8:05 PM IST

ಹೈದರಾಬಾದ್: ರಾಷ್ಟ್ರದ ಅಭಿವೃದ್ಧಿಯಲ್ಲಿ ಶಿಕ್ಷಕರು ಪ್ರಮುಖ ಪಾತ್ರ ವಹಿಸುತ್ತಾರೆ ಎಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಶಿಕ್ಷಕರ ದಿನಾಚರಣೆ ಹಿನ್ನೆಲೆ ಎಲ್ಲಾ ಶಿಕ್ಷಕರಿಗೆ ಶುಭಕೋರಿದ್ದಾರೆ.

ಈ ವೇಳೆ ತಮ್ಮ ಶಿಕ್ಷಕರನ್ನು ಸ್ಮರಿಸಿಕೊಂಡ ಉಪರಾಷ್ಟ್ರಪತಿಗಳು, ಪ್ರತಿಯೊಬ್ಬರೂ ತಮ್ಮ ಜೀವನ ಪಯಣದಲ್ಲಿ ಮಾರ್ಗದರ್ಶನ ಮಾಡಿದ ಶಿಕ್ಷಕರನ್ನು ನೆನಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ನಮ್ಮಲ್ಲಿ ಪ್ರತಿಯೊಬ್ಬರೂ ಗಣನೀಯ ಪ್ರಮಾಣದಲ್ಲಿ, ವೃತ್ತಿ ಜೀವನದಲ್ಲಿ ನಮ್ಮ ಶಿಕ್ಷಕರ ಮಾರ್ಗದರ್ಶನಕ್ಕೆ ಬದ್ಧರಾಗಿದ್ದೇವೆ.

ನನ್ನ ಶೈಕ್ಷಣಿಕ ಮತ್ತು ರಾಜಕೀಯ ವೃತ್ತಿಜೀವನದ ಹಾದಿಯನ್ನು ರೂಪಿಸಿದ ಅನೇಕ ಶಿಕ್ಷಕರು ಮತ್ತು ಮಾರ್ಗದರ್ಶಕರ ಕೊಡುಗೆಯನ್ನು ನಾನು ನೆನಪಿಸಿಕೊಳ್ಳುತ್ತೇನೆ. ಅವರಿಗೆ ನಾನು ತಲೆ ಬಾಗಿ ಗೌರವಪೂರ್ವಕ ನಮನಗಳನ್ನು ಸಲ್ಲಿಸುತ್ತೇನೆ ಎಂದರು.

ಭಾರತದ ಮಾಜಿ ರಾಷ್ಟ್ರಪತಿ ಸರ್ವೇಪಲ್ಲಿ ರಾಧಾಕೃಷ್ಣನ್ ಅವರನ್ನು ನೆನಪಿಸಿಕೊಂಡ ನಾಯ್ಡು, ರಾಧಾಕೃಷ್ಣನ್ ಅವರು ತಮ್ಮ ಜೀವನದ ಉತ್ತಮ ಭಾಗವನ್ನು ಶಿಕ್ಷಣಕ್ಕಾಗಿ ಅರ್ಪಿಸಿದರು. ಭಾರತದ ಈ ಮಹಾನ್ ಮಗನಿಗೆ ನಾವು ಸಲ್ಲಿಸಬಹುದಾದ ಅತ್ಯುನ್ನತ ಗೌರವವೆಂದರೆ ಅವರು ತೋರಿಸಿದ ಮಾರ್ಗವನ್ನು ಅನುಸರಿಸುವುದು ಎಂದು ಹೇಳಿದರು.

ಭಾರತವು ಕಲಿಕೆಗೆ ಪ್ರಶಂಸನೀಯ ಕೇಂದ್ರವಾಗಿದೆ. ಭಾರತವು ಮತ್ತೊಮ್ಮೆ "ವಿಶ್ವಗುರು" ಆಗಲು ಮತ್ತು ಜ್ಞಾನ ಮತ್ತು ನಾವೀನ್ಯತೆಯ ಕೇಂದ್ರವಾಗಿ ಹೊರ ಹೊಮ್ಮುವ ಸಮಯ ಬಂದಿದೆ. ನಾವು ಕೇವಲ ಪೋಷಣೆಗಾಗಿ ಶ್ರಮಿಸುವುದಲ್ಲದೇ ನಮ್ಮ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಮುಂದಿನ ಪೀಳಿಗೆಗೆ ಉಳಿಸಲು ಪ್ರಯತ್ನಿಸಬೇಕು ಎಂದು ಸಲಹೆ ನೀಡಿದರು.

ABOUT THE AUTHOR

...view details