ಕರ್ನಾಟಕ

karnataka

ಹೋಳಿ ಆಡಿ ಕಳಿಂಗಪಟ್ಟಣಂ ಬೀಚ್​​ನಲ್ಲಿ ಸ್ನಾನಕ್ಕೆ ಹೋದ ಮೂವರು ನಾಪತ್ತೆ

ಆಂಧ್ರಪ್ರದೇಶದ ಶ್ರೀಕಾಕುಲಂ ಜಿಲ್ಲೆಯಲ್ಲಿನ ಕಳಿಂಗಪಟ್ಟಣಂ ಬೀಚ್​​ನಲ್ಲಿ ಸ್ನಾನಕ್ಕೆ ಹೋದ ಮೂವರು ಯುವಕರು ನಾಪತ್ತೆಯಾಗಿದ್ದು, ನೀರುಪಾಲಾಗಿರುವ ಶಂಕೆ ವ್ಯಕ್ತವಾಗಿದೆ.

By

Published : Mar 30, 2021, 6:40 AM IST

Published : Mar 30, 2021, 6:40 AM IST

Three went missing in Andhra's Kalingapatnam beach
ಹೋಳಿ ಆಡಿ ಕಳಿಂಗಪಟ್ಟಣಂ ಬೀಚ್​​ನಲ್ಲಿ ಸ್ನಾನಕ್ಕೆ ಹೋದ ಮೂವರು ನಾಪತ್ತೆ

ಶ್ರೀಕಾಕುಲಂ (ಆಂಧ್ರಪ್ರದೇಶ): ಹೋಳಿ ಆಡಿ ಸಮುದ್ರದಲ್ಲಿ ಸ್ನಾನ ಮಾಡಲೆಂದು ತೆರಳಿದ ಮೂವರು ಯುವಕರು ನಾಪತ್ತೆಯಾಗಿರುವ ಘಟನೆ ಆಂಧ್ರಪ್ರದೇಶದ ಶ್ರೀಕಾಕುಲಂ ಜಿಲ್ಲೆಯಲ್ಲಿ ನಡೆದಿದೆ.

ಕಳಿಂಗಪಟ್ಟಣಂ - ಮತ್ಸ್ಯಾಲೇಶಂ ಕರಾವಳಿ ಪ್ರದೇಶದಲ್ಲಿನ ಬೀಚ್​​ನಲ್ಲಿ ಒಟ್ಟು ಎಂಟು ಮಂದಿ ಸ್ನಾನಕ್ಕೆ ಹೋಗಿದ್ದರು. ಇವರಲ್ಲಿ ಆಶಿಶ್ ವರ್ಮಾ (18), ಚೋಟು (18) ಮತ್ತು ಸಂದೀಪ್ (18) ಎಂಬವರು ನಾಪತ್ತೆಯಾಗಿದ್ದಾರೆ.

ಇದನ್ನೂ ಓದಿ: 'ಪಿಐಎ' ಎಂದು ಬರೆದ ಮತ್ತೊಂದು ಬಲೂನ್​ ಕನಾಚಕ್​ನಲ್ಲಿ ಪತ್ತೆ

ಇವರೆಲ್ಲರೂ ಉತ್ತರ ಪ್ರದೇಶ ಮೂಲದವರಾಗಿದ್ದಾರೆ. ನೀರುಪಾಲಾಗಿರುವ ಶಂಕೆ ವ್ಯಕ್ತವಾಗಿದ್ದು, ಸ್ಥಳೀಯರು ಹಾಗೂ ಪೊಲೀಸರು ಶೋಧ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.

ABOUT THE AUTHOR

...view details