ಹೈದರಾಬಾದ್ :ಮಗಳ ಮದುವೆಗೆಂದು ಮಾಡಿದ ಸಾಲದ ಭಾರ ಹೆಚ್ಚಾಗಿ ಒಂದೇ ಕುಟುಂಬದ ಮೂವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕರೀಂನಗರ ಜಿಲ್ಲೆಯ ಚೊಪ್ಪದಂಡಿ ಮಂಡಲದ ಕಟ್ನೆಂಪಲ್ಲಿ ಎಂಬಲ್ಲಿ ಸೋಮವಾರ ನಡೆದಿದೆ.
ಭೈರಿ ಶಂಕಯ್ಯ(55), ಜಮುನಾ(50) ಹಾಗೂ ಪುತ್ರ ಶ್ರೀಧರ್ ಮೃತ ದುರ್ದೈವಿಗಳು. ಭೈರಿ ಶಂಕರಯ್ಯ ಕುಟುಂಬದಲ್ಲಿ ಕಳೆದ ಮೂರು ತಿಂಗಳ ಹಿಂದಷ್ಟೇ ಮಗಳ ಮದುವೆ ಕಾರ್ಯಕ್ರಮ ನಡೆದಿತ್ತು. ಮಗಳ ಮದುವೆಗಾಗಿ ಕುಟುಂಬಸ್ಥರು ಸಾಲ ಮಾಡಿಕೊಂಡಿದ್ದರು. ಇದನ್ನು ತೀರಿಸಲಾಗದೇ ಮನನೊಂದಿದ್ದರು.