ಕರ್ನಾಟಕ

karnataka

ETV Bharat / bharat

ಶವ ಕೊಂಡೊಯ್ಯುತ್ತಿದ್ದಾಗ ಭೀಕರ ರಸ್ತೆ ಅಪಘಾತ... ಒಂದೇ ಕುಟುಂಬದ ಮೂವರು ಸಾವು, 13 ಮಂದಿಗೆ ಗಾಯ!

ಮೃತದೇಹವನ್ನು ಸ್ವಗ್ರಾಮಕ್ಕೆ ಕೊಂಡೊಯ್ಯುತ್ತಿರುವಾಗ ಆಂಬ್ಯುಲೆನ್ಸ್​ವೊಂದು ಟ್ರಕ್​ನ ಹಿಂಬದಿ ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ಮೂವರು ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ ನಡೆದಿದೆ.

By

Published : Nov 14, 2020, 2:44 PM IST

three killed in road accident, three killed in road accident at Solapur, Solapur road accident, Solapur road accident news, ರಸ್ತೆ ಅಪಘಾತದಲ್ಲಿ ಮೂವರು ಸಾವು, ಸೋಲಾಪುರ ರಸ್ತೆ ಅಪಘಾತದಲ್ಲಿ ಮೂವರು ಸಾವು, ಸೋಲಾಪುರ ರಸ್ತೆ ಅಪಘಾತ, ಸೋಲಾಪುರ ರಸ್ತೆ ಅಪಘಾತ ಸುದ್ದಿ,
ಮೃತದೇಹ ಕೊಂಡೊಯ್ಯುತ್ತಿದ್ದಾಗ ಸಂಭವಿಸಿದ ಅಪಘಾತ

ಸೋಲಾಪುರ:ಮೃತದೇಹವನ್ನು ಸ್ವಗ್ರಾಮಕ್ಕೆ ಕೊಂಡೊಯ್ಯುತ್ತಿರುವಾಗ ಅಪಘಾತ ಸಂಭವಿಸಿ ಒಂದೇ ಕುಟುಂದ ಮೂವರು ಸಾವನ್ನಪ್ಪಿದ್ದು, 13 ಜನ ಗಾಯಗೊಂಡಿರುವ ಘಟನೆ ಇಲ್ಲಿನ ಹೆದ್ದಾರಿಯಲ್ಲಿ ನಡೆದಿದೆ.

ಮೃತದೇಹ ಕೊಂಡೊಯ್ಯುತ್ತಿದ್ದಾಗ ರಸ್ತೆ ಅಪಘಾತ

ತೆಲಂಗಾಣ ರಾಜ್ಯದ ರಾಜಧಾನಿ ಹೈದರಾಬಾದ್​ ಮೂಲಕ ಕುಟುಂಬ ತಮ್ಮ ಮನೆಯ ಸದಸ್ಯರ ಚಿಕಿತ್ಸೆಗೆ ಸೊಲ್ಲಾಪುರಕ್ಕೆ ತೆರಳಿತ್ತು. ಆದ್ರೆ ಚಿಕಿತ್ಸೆ ಫಲಿಸದೆ ಆ ವ್ಯಕ್ತಿ ಸಾವನ್ನಪ್ಪಿದ್ದಾನೆ. ಸ್ವಗ್ರಾಮಕ್ಕೆ ಮೃತದೇಹವನ್ನು ಸೊಲ್ಲಾಪುರದಿಂದ ಹೈದರಾಬಾದ್​ ತೆಗೆದುಕೊಂಡು ತೆರಳುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ.

ಮೃತದೇಹ ಕೊಂಡೊಯ್ಯುತ್ತಿದ್ದಾಗ ರಸ್ತೆ ಅಪಘಾತ

ಇನ್ನು ಆಂಬ್ಯುಲೆನ್ಸ್​ನಲ್ಲಿ ಮೃತದೇಹದೊಂದಿಗೆ 16 ಜನ ಪ್ರಯಾಣಿಸುತ್ತಿದ್ದರು. ಅಪಘಾತದಲ್ಲಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದು, 13 ಜನರು ಗಾಯಗೊಂಡಿದ್ದಾರೆ. ಗಾಯಾಳುಗಳಲ್ಲಿ ಮೂವರ ಸ್ಥಿತಿ ಗಂಭೀರವಾಗಿದೆ ಎನ್ನಾಲಾಗಿದೆ.

ಈ ಘಟನೆ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ABOUT THE AUTHOR

...view details