ಕರ್ನಾಟಕ

karnataka

ETV Bharat / bharat

ಹಿಟ್​ ಅಂಡ್ ರನ್​ಗೆ ಮೂವರು ಸಹೋದರರು ಬಲಿ: ಮದುವೆ ಸಂಭ್ರಮದಲ್ಲಿರಬೇಕಿದ್ದ ಮನೆಯಲ್ಲಿ ಸೂತಕ! - ಅಸ್ಸಂಧ್​ ರಸ್ತೆ ಅಪಘಾತ,

ಒಬ್ಬನ ಪತ್ನಿ ಗರ್ಭಿಣಿ, ಇನ್ನೊಬ್ಬ ಯುವಕನ ಮದುವೆ ಮುಂದಿನ ತಿಂಗಳು ನಿಶ್ಚಯವಾಗಿತ್ತು. ಆದ್ರೆ ಅಷ್ಟರಲ್ಲೇ ವಿಧಿ ಅವರ ಬಾಳಲ್ಲಿ ಆಟವಾಡಿದೆ. ರಸ್ತೆ ಅಪಘಾತದಲ್ಲಿ ಮೂವರು ಸಹೋದರರು ಸಾವನ್ನಪ್ಪಿರುವ ಘಟನೆ ಹರಿಯಾಣದ ಕರ್ನಾಲ್​ ಜಿಲ್ಲೆಯಲ್ಲಿ ನಡೆದಿದೆ.

three brothers died, three brothers died in road accident, three brothers died in road accident at assandh, assandh road accident, assandh road accident news, ಮೂವರು ಸಹೋದರರು ಸಾವು, ರಸ್ತೆ ಅಪಘಾತದಲ್ಲಿ ಮೂವರು ಸಹೋದರರು ಸಾವು, ಅಸ್ಸಂಧ್​ನಲ್ಲಿ ರಸ್ತೆ ಅಪಘಾತದಲ್ಲಿ ಮೂವರು ಸಹೋದರರು ಸಾವು, ಅಸ್ಸಂಧ್​ ರಸ್ತೆ ಅಪಘಾತ, ಅಸ್ಸಂಧ್​ ರಸ್ತೆ ಅಪಘಾತ ಸುದ್ದಿ,
ಹಿಟ್​ ಅಂಡ್ ರನ್​ ರಸ್ತೆ ಅಪಘಾತದಲ್ಲಿ ಮೂವರು ಸಹೋದರರು ಸಾವು

By

Published : Feb 15, 2021, 1:16 PM IST

ಕರ್ನಾಲ್(ಹರಿಯಾಣ): ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಮೂವರು ಬೈಕ್‌ ಸವಾರರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಅಸ್ಸಂಧ್‌ನ ಕಾಬುಲ್‌ಪುರ ಖೇಡಾ ಗ್ರಾಮದಲ್ಲಿ ನಡೆದಿದೆ.

ಘಟನೆ ವಿವರ...

ಕಾಬೂಲ್‌ಪುರ್​ ಖೇಡಾ ನಿವಾಸಿ 22 ವರ್ಷದ ಬಂಟಿ, ಅವನ 20 ವರ್ಷದ ಸೋದರಸಂಬಂಧಿ ಅಕ್ಷಯ್ ಮತ್ತು 21 ವರ್ಷದ ಚಿಕ್ಕಮ್ಮನ ಮಗ ರವೀಂದ್ರ ಅವರು ಮಾತ್ಲೌಡಾದ ಪಿಜ್ಜಾ ಗ್ಯಾಲರಿಯಾ ಅಂಗಡಿಯಲ್ಲಿ ಬಾಣಸಿಗರಾಗಿ ಕೆಲಸ ಮಾಡುತ್ತಿದ್ದರು. ಶನಿವಾರ ರಾತ್ರಿ ಮೂವರು ಸಹೋದರರು ಕಾಬೂಲ್‌ಪುರ ಖೇಡಾ ಗ್ರಾಮಕ್ಕೆ ಬೈಕ್‌ನಲ್ಲಿ ಬರುತ್ತಿದ್ದಾಗ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಘಟನೆ ಮನೆಯಿಂದ ಸುಮಾರು 200 ಮೀಟರ್ ದೂರದಲ್ಲೇ ಸಂಭವಿಸಿದೆ.

ಬಂಟಿಗೆ 11 ತಿಂಗಳ ಹಿಂದೆ ವಿವಾಹವಾಗಿದ್ದು, ಆತನ ಪತ್ನಿ ಗರ್ಭಿಣಿಯಾಗಿದ್ದಾಳೆ. ಚಿಕ್ಕಮ್ಮನ ಮಗ ರವೀಂದ್ರನ ಮುಂದಿನ ತಿಂಗಳು ಮದುವೆ ನಡೆಯಬೇಕಿತ್ತು. ಅಷ್ಟರಲ್ಲೇ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಇವರ ಕುಟುಂಬದಲ್ಲಿ ದುಃಖ ಮಡುಗಟ್ಟಿದೆ.

ABOUT THE AUTHOR

...view details