ಕರ್ನಾಟಕ

karnataka

By

Published : Jul 13, 2022, 3:21 PM IST

ETV Bharat / bharat

ಗುರು ಪೌರ್ಣಿಮೆ: ಶಿವಸೇನೆ ಬಂಡಾಯ ಗುಂಪು ಗುರಿಯಾಗಿಸಿ ಸಂಜಯ್ ರಾವುತ್​ ವಾಗ್ದಾಳಿ

ಪಕ್ಷಕ್ಕೆ ಮೋಸ ಮಾಡಿ ಹೊರ ಹೊಗಿರುವ ಶಿವಸೇನೆಯ ಬಂಡಾಯ ಮುಖಂಡರ ವಿರುದ್ಧ ಸಂಜಯ್ ರಾವುತ್​ ಕಿಡಿಕಾರಿದ್ದು, ಇದು ಬಾಳ್​ಸಾಹೇಬ್ ಠಾಕ್ರೆ ಅವರಿಗೆ ಮಾಡಿರುವ ಮೋಸ ಎಂದಿದ್ದಾರೆ.

Sanjay Raut targets rebel group
Sanjay Raut targets rebel group

ಮುಂಬೈ(ಮಹಾರಾಷ್ಟ್ರ):ಇಂದು ದೇಶಾದ್ಯಂತ ಗುರು ಪೌರ್ಣಿಮೆ ಆಚರಣೆ ಮಾಡಲಾಗ್ತಿದೆ. ಈ ಸಂದರ್ಭದಲ್ಲಿ ಶಿವಸೇನೆಯ ವಕ್ತಾರ ಸಂಜಯ್​ ರಾವುತ್​​ ಪಕ್ಷದ ಬಂಡಾಯ ಗುಂಪು ಗುರಿಯಾಗಿಸಿ ಮಾತನಾಡಿದ್ದಾರೆ. ತಮ್ಮ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ಬಾಳಾಸಾಹೇಬ್ ಠಾಕ್ರೆ ನಮ್ಮೆಲ್ಲರ ಗುರುಗಳು. ಶಿವಸೇನೆ ಅಥವಾ ಶಿವಸೈನಿಕರಿಗೆ ಮಾತ್ರವಲ್ಲ, ಶಿವಸೇನೆಯನ್ನ ಪ್ರೀತಿಸುವ ಮತ್ತು ಶಿವನಿಗೆ ನಿಷ್ಠರಾಗಿರುವ ಎಲ್ಲರಿಗೂ ಅವರು ಗುರು ಎಂದಿದ್ದಾರೆ.

ಬಾಳ್​ಸಾಹೇಬ್ ಠಾಕ್ರೆ ಅವರು ದೇಶಕ್ಕೆ ದಿಕ್ಕು ತೋರಿಸಿದ್ದಾರೆ. ಇಂತಹ ಗುರುಗಳನ್ನ ಗುರು ಪೂರ್ಣಿಮೆಯ ದಿನ ಮಾತ್ರವಲ್ಲದೇ ಪ್ರತಿದಿನವೂ ಸ್ಮರಿಸಲಾಗುತ್ತದೆ. ಲಕ್ಷಾಂತರ ಜನರು ಅವರನ್ನ ಗುರುವೆಂದು ಪರಿಗಣಿಸಿ ಪೂಜಿಸುತ್ತಾರೆ. ಜೊತೆಗೆ ಅವರಿಗೆ ನಿಷ್ಠರಾಗಿರುತ್ತಾರೆ. ಇದು ನಿಜವಾದ ಗುರುದಕ್ಷಿಣೆ ಹಾಗೂ ಮನವಂದನೆ.

ಆದರೆ, ಕೆಲವರು ಪಕ್ಷಕ್ಕೆ ಮೋಸ ಮಾಡಿ, ಅವರ ಹೆಸರು ಪದೇ ಪದೇ ಬಳಕೆ ಮಾಡುತ್ತಿದ್ದಾರೆ. ಇದು ಅವರಿಗೆ ಮಾಡುತ್ತಿರುವ ದ್ರೋಹ ಎಂದು ಟೀಕೆ ವ್ಯಕ್ತಪಡಿಸಿದರು. ರಾಜಕೀಯವಾಗಿ ಶಿವಸೇನೆಗೆ ಮಹತ್ವದ ಸ್ಥಾನವಿದೆ.

ಪ್ರತಿ ವರ್ಷ ಗುರು ಪೌರ್ಣಿಮೆಯ ದಿನ ಶಿವಸೇನೆಯ ಅನೇಕರು ಬಾಳಾ ಸಾಹೇಬ್​ ಠಾಕ್ರೆ ಅವರನ್ನ ನೆನೆಯುತ್ತಾರೆ. ಆದರೆ, ಪಕ್ಷದಲ್ಲಿ ಇಷ್ಟೊಂದು ದೊಡ್ಡ ಮಟ್ಟದ ಒಡಕಿನಿಂದಾಗಿ ಪಕ್ಷದ ಅರ್ಧದಷ್ಟು ಜನರು ಇದೀಗ ಶಿವಸೇನೆಯಿಂದ ಹೊರಹೊಗಿದ್ದಾರೆ.

ಇದನ್ನೂ ಓದಿರಿ:ಐಸಿಸಿ ಏಕದಿನ ರ‍್ಯಾಂಕಿಂಗ್‌: ನಂಬರ್​ 1 ಸ್ಥಾನಕ್ಕೆ ಲಗ್ಗೆ ಹಾಕಿದ ಯಾರ್ಕರ್​ ಕಿಂಗ್ ಬುಮ್ರಾ

ಮಹಾರಾಷ್ಟ್ರದಲ್ಲಿ ಮಹಾವಿಕಾಸ್ ಅಘಾಡಿ ಸರ್ಕಾರದ ವಿರುದ್ಧ ಬಂಡಾಯವೆದ್ದ ಶಿವಸೇನೆಯ ಏಕನಾಥ್ ಶಿಂದೆ ಸದ್ಯ ಬಿಜೆಪಿ ಜೊತೆ ಸೇರಿ ಸರ್ಕಾರ ರಚನೆ ಮಾಡಿದ್ದಾರೆ. ಇದರ ಬೆನ್ನಲ್ಲೇ ಉದ್ಧವ್ ಠಾಕ್ರೆ ಮೇಲೆ ಶಿವಸೇನೆಯ ಕೆಲ ಸಂಸದರು ಒತ್ತಡ ಹೇರಿರುವ ಕಾರಣ, ರಾಷ್ಟ್ರಪತಿ ಚುನಾವಣೆಯಲ್ಲಿ ಬಿಜೆಪಿಯ ದ್ರೌಪದಿ ಮುರ್ಮುಗೆ ಬೆಂಬಲ ನೀಡುವುದಾಗಿ ಘೋಷಣೆ ಮಾಡಿದ್ದಾರೆ.

ABOUT THE AUTHOR

...view details