ಕರ್ನಾಟಕ

karnataka

ETV Bharat / bharat

ಭಾರತದಲ್ಲಿ ಜಲ ವಿವಿಗಳ ಅವಶ್ಯಕತೆಯಿದೆ: ವಾಟರ್ ಮ್ಯಾನ್ ರಾಜೇಂದ್ರ ಸಿಂಗ್ - water universities in India

ದೇಶದ ನೀರಿನ ಸಮಸ್ಯೆಗೆ ನದಿಗಳ ಸಂಪರ್ಕವೇ ಪರಿಹಾರವಲ್ಲ. ಜಲ ಸಂರಕ್ಷಣೆ ಅತ್ಯಂತ ನಿರ್ಣಾಯಕವಾಗಿದ್ದು, ನಾಡಿನಲ್ಲಿ ಜಲ ಸಾಕ್ಷರತಾ ಆಂದೋಲನ ನಡೆಯಬೇಕು. ಜೊತೆಗೆ ಭಾರತದಲ್ಲಿ ಜಲ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಲು ಕೇಂದ್ರ ಸರ್ಕಾರ ಮುಂದಾಗಬೇಕು ಎಂದು ವಾಟರ್ ಮ್ಯಾನ್ ರಾಜೇಂದ್ರ ಸಿಂಗ್ ಹೇಳಿದ್ದಾರೆ.

ರಾಜೇಂದ್ರ ಸಿಂಗ್
ರಾಜೇಂದ್ರ ಸಿಂಗ್

By

Published : Feb 19, 2022, 8:53 AM IST

ಹೈದರಾಬಾದ್​( ತೆಲಂಗಾಣ): ನದಿ ಸಂಪರ್ಕಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಜಲ ಅಭಿವೃದ್ಧಿ ಪ್ರಾಧಿಕಾರ ನೀಡಿರುವ ಅಂಕಿ- ಅಂಶಗಳೆಲ್ಲವೂ ತಪ್ಪಾಗಿದೆ ಎಂದು ವಾಟರ್ ಮ್ಯಾನ್ ಆಫ್ ಇಂಡಿಯಾ ಹಾಗೂ ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತ ರಾಜೇಂದ್ರ ಸಿಂಗ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಈಟಿವಿ ಭಾರತದೊಂದಿಗೆ ಮಾತನಾಡಿದ ಅವರು, ದೇಶದ ನೀರಿನ ಸಮಸ್ಯೆಗೆ ನದಿಗಳ ಸಂಪರ್ಕವೇ ಪರಿಹಾರವಲ್ಲ. ಜಲ ಸಂರಕ್ಷಣೆ ಅತ್ಯಂತ ನಿರ್ಣಾಯಕವಾಗಿದ್ದು, ನಾಡಿನಲ್ಲಿ ಜಲ ಸಾಕ್ಷರತಾ ಆಂದೋಲನ ನಡೆಯಬೇಕು. ಜೊತೆಗೆ ಭಾರತದಲ್ಲಿ ಜಲ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಲು ಕೇಂದ್ರ ಸರ್ಕಾರ ಮುಂದಾಗಬೇಕು ಎಂದು ಸಲಹೆ ನೀಡಿದರು.

ಈಟಿವಿ ಭಾರತದೊಂದಿಗೆ ಮಾತನಾಡಿದ ರಾಜೇಂದ್ರ ಸಿಂಗ್

ABOUT THE AUTHOR

...view details