ಕರ್ನಾಟಕ

karnataka

ETV Bharat / bharat

ಪಿಎಂ ರೈತರ ಮೇಲೆ ಹಲ್ಲೆ ನಡೆಸುತ್ತಿದ್ದಾರೆ: ರಾಹುಲ್​ ಗಾಂಧಿ ಮತ್ತೆ ವಾಗ್ದಾಳಿ - Rahul gandhi in congress road show held in Tamilnadu

ಕೇಂದ್ರ ಮೂರು ನೂತನ ಕೃಷಿ ಕಾನೂನುಗಳನ್ನು ಜಾರಿಗೆ ತಂದಿದ್ದು, ಅದು ಭಾರತೀಯ ಕೃಷಿಯನ್ನು ನಾಶಪಡಿಸುತ್ತದೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್​ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.

ರಾಹುಲ್​ ಗಾಂಧಿ ವಾಗ್ದಾಳಿ
ರಾಹುಲ್​ ಗಾಂಧಿ ವಾಗ್ದಾಳಿ

By

Published : Jan 25, 2021, 12:17 PM IST

ಕರೂರ್‌ (ತಮಿಳುನಾಡು):ಪಿಎಂ ರೈತರ ಮೇಲೆ ಹಲ್ಲೆ ನಡೆಸುತ್ತಿದ್ದಾರೆ. ಕೇಂದ್ರ ಮೂರು ನೂತನ ಕೃಷಿ ಕಾನೂನುಗಳನ್ನು ಜಾರಿಗೆ ತಂದಿದ್ದು, ಅದು ಭಾರತೀಯ ಕೃಷಿಯನ್ನು ನಾಶಪಡಿಸುತ್ತದೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್​ ಗಾಂಧಿ ಹೇಳಿದ್ದಾರೆ.

ತಮಿಳುನಾಡಿನ ಕರೂರ್‌ನಲ್ಲಿ ನಡೆದ ಕಾಂಗ್ರೆಸ್ ರೋಡ್ ಶೋನಲ್ಲಿ ಮಾತನಾಡಿದ ಕಾಂಗ್ರೆಸ್​ ಮುಖಂಡ, ಕೇಂದ್ರ 2-3 ದೊಡ್ಡ ಕೈಗಾರಿಕೋದ್ಯಮಿಗಳಿಗೆ ಹಸ್ತಾಂತರಿಸಲಿದೆ. ರೈತರು ತಮ್ಮನ್ನು ರಕ್ಷಿಸಿಕೊಳ್ಳಲು ನ್ಯಾಯಾಲಯಕ್ಕೆ ಹೋಗಲು ಸಾಧ್ಯವಿಲ್ಲ ಎಂದು ಒಂದು ಕಾನೂನು ಸ್ಪಷ್ಟವಾಗಿ ಹೇಳುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಇಂದು ರಾಷ್ಟ್ರೀಯ ಮತದಾರರ ದಿನ: ಚುನಾವಣಾ ಆಯೋಗದ ಕೊಡುಗೆ ಪ್ರಶಂಸಿದ ಮೋದಿ

ಕಳೆದ ಆರು ವರ್ಷಗಳಲ್ಲಿ ನಾವು ಪ್ರಧಾನಿ ಅವರ ಕೆಲಸ ನೋಡುವುದಾದರೆ, ಭಾರತದ ಆರ್ಥಿಕತೆ ಆ ಮೂಲಕ ದೇಶ ಬಡವಾಗಿದೆ. ದೇಶ ಎರಡು ಭಾಗವಾಗಿರುವುದು ಎದ್ದು ಕಾಣುತ್ತಿದೆ. ದೇಶಾದ್ಯಂತ ಆರ್​ಎಸ್​ಎಸ್​ - ಬಿಜೆಪಿ ಸಿದ್ದಾಂತವನ್ನ ಪ್ರಚುರ ಪಡಿಸಲಾಗುತ್ತಿದೆ. ನಮ್ಮ ಅತಿದೊಡ್ಡ ಶಕ್ತಿ ಎಂದರೆ ಆರ್ಥಿಕತೆಯನ್ನ ಸರ್ವನಾಶ ಮಾಡಲಾಗುತ್ತಿದೆ ಎಂದು ರಾಹುಲ್​ ಗಾಂಧಿ ಆಕ್ರೋಶ ಹೊರ ಹಾಕಿದ್ದಾರೆ.

For All Latest Updates

ABOUT THE AUTHOR

...view details