ಕರ್ನಾಟಕ

karnataka

By

Published : Aug 11, 2023, 12:55 PM IST

ETV Bharat / bharat

ಬೇರೆಯವರ ಹೊಲದಲ್ಲಿ ಮೇಯ್ದ ಎತ್ತುಗಳು.. ತನ್ನ ಮನೆ ಮುಂದೆ ಮಾಲೀಕನನ್ನು ಕಟ್ಟಿ ಹಾಕಿದ ವ್ಯಕ್ತಿ

ತೆಲಂಗಾಣದಲ್ಲಿ ದಾರುಣ ಘಟನೆಯೊಂದು ನಡೆದಿದೆ. ತನ್ನ ಹೊಲದಲ್ಲಿ ಬೇರೆಯವರ ಎತ್ತುಗಳು ಮೇಯ್ದಿವೆ ಎಂದು ಆರೋಪಿಸಿ ಆ ಎತ್ತುಗಳ ಮಾಲೀಕನನ್ನು ಕಂಬಕ್ಕೆ ಕಟ್ಟಿ ಹಾಕಿರುವ ಘಟನೆ ವರದಿಯಾಗಿದೆ.

The owner was tied  The owner was tied to a stake as his bulls  farmer beat to farmer  ಬೇರೆಯವರ ಹೊಲದಲ್ಲಿ ಮೇಯ್ದ ಎತ್ತುಗಳು  ಮನೆ ಮುಂದೆ ಮಾಲೀಕನನ್ನು ಕಟ್ಟಿ ಹಾಕಿದ ವ್ಯಕ್ತಿ  ತೆಲಂಗಾಣದಲ್ಲಿ ದಾರುಣ ಘಟನೆ  ಎತ್ತುಗಳು ಮೇಯ್ದಿದ್ದಾವೆ ಎಂದು ಆರೋಪ  ಪೊಲೀಸ್​ ಠಾಣೆಗೆ ದೂರು  ಅಟ್ರಾಸಿಟಿ ಪ್ರಕರಣ ದಾಖಲಿಸಿಕೊಂಡು ತನಿಖೆ
ಬೇರೆಯವರ ಹೊಲದಲ್ಲಿ ಮೇಯ್ದ ಎತ್ತುಗಳು

ಮಂಚಿರ್ಯಾಲ, ತೆಲಂಗಾಣ: ಜಿಲ್ಲೆಯಲ್ಲಿ ಅವಮಾನವೀಯ ಘಟನೆಯೊಂದು ನಡೆದಿದೆ. ಬೇರೆಯವರ ಎತ್ತುಗಳು ತಮ್ಮ ಹೊಲದಲ್ಲಿ ಮೇಯ್ದಿವೆ ಎಂದು ಆ ಎತ್ತುಗಳ ಮಾಲೀಕನನ್ನು ತನ್ನ ಮನೆ ಮುಂದೆ ಇರುವ ಕಂಬಕ್ಕೆ ಕಟ್ಟಿ ಹಾಕಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.

ಏನಿದು ಪ್ರಕರಣ?: ಕೋಟಪಲ್ಲಿ ಮಂಡಲದ ಶೆಟ್ಪಲ್ಲಿ ಗ್ರಾಮದ ನಿವಾಸಿ ದುರ್ಗಂ ಬಾಪು ಪ್ರತಿನಿತ್ಯ ತಮ್ಮ ಎತ್ತುಗಳನ್ನು ಮೇಯಿಸಲು ತೆರಳುತ್ತಿದ್ದರು. ಈ ವೇಳೆ, ಅದೇ ಗ್ರಾಮದ ನಿವಾಸಿ ರಾಂ ರೆಡ್ಡಿ ಅವರ ಹೊಲಕ್ಕೆ ಎತ್ತುಗಳು ನುಗ್ಗಿವೆ. ಹೊಲದಲ್ಲಿದ್ದ ಬೆಳೆಗಳನ್ನು ತಿಂದು ಹಾಕಿವೆ. ಈ ವಿಷಯ ರಾಂ ರೆಡ್ಡಿಗೆ ಗೊತ್ತಾಗಿ ಎತ್ತುಗಳನ್ನು ತಮ್ಮ ಮನೆಯ ಮುಂದೆ ಕಟ್ಟಿದ್ದಾರೆ. ಈ ಎತ್ತುಗಳನ್ನು ಬಿಡಿಸಿಕೊಳ್ಳಲು ದುರ್ಗಂ ಬಾಪು ಸ್ಥಳಕ್ಕೆ ಬಂದಿದ್ದಾರೆ.

ಮನೆಯಲ್ಲಿ ರಾಂ ರೆಡ್ಡಿ ಇಲ್ಲದಿರುವುದನ್ನು ಕಂಡು ಎತ್ತುಗಳನ್ನು ಬಿಡಿಸಿಕೊಂಡು ಹೋಗುತ್ತಿದ್ದರು. ಈ ಸಂದರ್ಭದಲ್ಲಿ ದುರ್ಗಂ ಬಾಪುಗೆ ರಾಂ ರೆಡ್ಡಿ ಎದುರಾಗಿದ್ದಾರೆ. ಎತ್ತುಗಳನ್ನು ಬಿಡಿಸಿಕೊಂಡು ಹೋಗುತ್ತಿರುವುದನ್ನು ಕಂಡು ರಾಂ ರೆಡ್ಡಿ ಕೋಪಗೊಂಡಿದ್ದಾರೆ. ಈ ವೇಳೆ, ಇಬ್ಬರ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಬಳಿಕ ದುರ್ಗಂ ಬಾಪುರನ್ನು ರಾಂ ರೆಡ್ಡಿ ತನ್ನ ಮನೆಯ ಮುಂದಿರುವ ಕಂಬಕ್ಕೆ ಕಟ್ಟಿ ಹಾಕಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಇದರಿಂದ ಬೇಸರಗೊಂಡ ದುರ್ಗಂ ಬಾಪು ಅವರು ಪೊಲೀಸ್​ ಠಾಣೆಗೆ ದೂರು ನೀಡಿದ್ದಾರೆ. ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ಎಸ್‌ಎಸ್‌ಐ ಸುರೇಶ್‌, ಬಾಪು ಅವರನ್ನು ಜಾತಿ ಹೆಸರಿನಲ್ಲಿ ನಿಂದಿಸಿದ ಆರೋಪದ ಮೇಲೆ ಎಸ್‌ಸಿ, ಎಸ್‌ಟಿ ಅಟ್ರಾಸಿಟಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದರು. ಸದ್ಯ ಸಣ್ಣದೊಂದು ವಿಷಯ ದೊಡ್ಡದಾಗಿದ್ದು, ಪೊಲೀಸ್​ ಠಾಣೆಯ ಮೆಟ್ಟಿಲೇರಿದೆ. ಪೊಲೀಸರ ತನಿಖೆ ಬಳಿಕ ಸತ್ಯಾಂಶ ಹೊರ ಬರಲಿದೆ.

ಓದಿ: ಹೋಂ ವರ್ಕ್ ಮಾಡಿಲ್ಲವೆಂದು 50 ಏಟು.. 200 ಬಸ್ಕಿ ಹೊಡೆಸಿದ ಶಿಕ್ಷಕ: ತನಿಖೆಗೆ ಸೂಚನೆ

ಆರೋಪಿಯನ್ನ ಸಾರ್ವಜನಿಕವಾಗಿ ಥಳಿಸಿದ ಪೊಲೀಸರು:ಗುಜರಾತ್​ನ ಸೂರತ್​ನಲ್ಲಿನ ಸಯಾನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಬ್ಬರು ಪೊಲೀಸರು ಆರೋಪಿಯೊಬ್ಬನನ್ನು ಕೈಕಾಲು ಹಿಡಿದು ವಿದ್ಯುತ್ ಕಂಬದ ಬಳಿ ನಿಲ್ಲಿಸಿದ್ದರು. ನಂತರ ಸಯಾನ್ ಪೊಲೀಸ್ ಠಾಣೆಯ ಎಸ್‌ಐ ಕೈಯಲ್ಲಿ ದೊಣ್ಣೆ ಹಿಡಿದು ಆರೋಪಿಗೆ ಹೊಡೆದಿದ್ದರು ಎಂಬ ಆರೋಪ ಕೇಳಿ ಬಂದಿದ್ದಲ್ಲದೇ ಆ ವಿಡಿಯೋ ವೈರಲ್ ಆಗಿತ್ತು. ಪಿಎಸ್​ವೈ ದೊಣ್ಣೆಯಿಂದ ಥಳಿಸಿದ್ದು, ನೋವನ್ನು ತಡೆಯಲಾಗದೇ ಆರೋಪಿ ಕುಸಿದು ಬಿದ್ದಿರುವುದು ವೈರಲ್​ ಆದ ವಿಡಿಯೋದಲ್ಲಿ ಕಂಡು ಬಂದಿತ್ತು. ಈ ಘಟನೆ ಕುರಿತು ಪೊಲೀಸ್​ ಹಿರಿಯ ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ.

ABOUT THE AUTHOR

...view details