ಕರ್ನಾಟಕ

karnataka

ETV Bharat / bharat

ಅಪಾಯದ ಮಟ್ಟದಲ್ಲಿ ಹರಿಯುತ್ತಿರುವ ಗೋದಾವರಿ: 70 ಅಡಿ ದಾಟಿದ ನೀರಿನ ಮಟ್ಟ - Godavari flood danger levels

Godavari flood danger levels: ಭದ್ರಾದ್ರಿ ಕೊತಗುಡೆಂ ಜಿಲ್ಲೆಯ ಭದ್ರಾಚಲಂನಲ್ಲಿ ಗೋದಾವರಿ ನೀರಿನ ಮಟ್ಟ ಅಪಾಯಕಾರಿ ಮಟ್ಟದಲ್ಲಿ ಹೆಚ್ಚುತ್ತಿದೆ. 23.40 ಲಕ್ಷ ಕ್ಯೂಸೆಕ್ ನೀರು ಗೋದಾವರಿ ಸೇರುತ್ತಿದೆ. ಭದ್ರಾಚಲಂನ ಸುಮಾರು ಸಾವಿರಾರು ಜನರನ್ನು 9 ಪುನರ್ವಸತಿ ಕೇಂದ್ರಗಳಲ್ಲಿ ಇರಿಸಲಾಗಿದೆ.

The Godavari in spate at Bhadrachalam
ಅಪಾಯದ ಮಟ್ಟದಲ್ಲಿ ಹರಿಯುತ್ತಿರುವ ಗೋದಾವರಿ

By

Published : Jul 15, 2022, 6:51 PM IST

ಭದ್ರಾಚಲಂ (ತೆಲಂಗಾಣ):ಭದ್ರಾಚಲಂನಲ್ಲಿ ಗೋದಾವರಿ ಉಕ್ಕಿ ಹರಿಯುತ್ತಿರುವುದರಿಂದ ಕರಾವಳಿ ಪ್ರದೇಶ ಅಪಾಯದಲ್ಲಿದೆ. ಗೋದಾವರಿ ನೀರಿನ ಮಟ್ಟ ಗಂಟೆಗೊಮ್ಮೆ ಅಪಾಯಕಾರಿ ಮಟ್ಟಕ್ಕೆ ಏರುತ್ತಿದೆ. ಸದ್ಯ ನೀರಿನ ಮಟ್ಟ 70 ಅಡಿ ದಾಟಿದೆ. ಅಷ್ಟೇ ಅಲ್ಲದೇ 23.40 ಲಕ್ಷ ಕ್ಯೂಸೆಕ್ ನೀರು ಗೋದಾವರಿ ಸೇರುತ್ತಿದೆ. ಪ್ರವಾಹ ಅಪಾಯದ ಮಟ್ಟದಲ್ಲಿ ಇರುವುದರಿಂದ ತಗ್ಗು ಪ್ರದೇಶದ ನಿವಾಸಿಗಳನ್ನು ಈಗಾಗಲೇ ಪುನರ್ ವಸತಿ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ.

ಭದ್ರಾಚಲಂನ ಸುಮಾರು ಸಾವಿರಾರು ಜನರನ್ನು 9 ಪುನರ್ವಸತಿ ಕೇಂದ್ರಗಳಲ್ಲಿ ಇರಿಸಲಾಗಿದೆ. ಗೋದಾವರಿ ಇತಿಹಾಸದಲ್ಲಿ ಜುಲೈ ತಿಂಗಳ ಮೊದಲಾರ್ಧದಲ್ಲಿ ಈ ಪ್ರಮಾಣದ ಪ್ರವಾಹ ಉಂಟಾಗಿರುವುದು ಇದು ಎರಡನೇ ಬಾರಿ. ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರು ಶುಕ್ರವಾರ ಅನಿರೀಕ್ಷಿತ ಪ್ರವಾಹದಿಂದ ಹಾನಿಗೊಳಗಾದ ತಗ್ಗು ಪ್ರದೇಶಗಳ ಜನರನ್ನು ಸ್ಥಳಾಂತರಿಸಲು ರಕ್ಷಣಾ ಕ್ರಮಗಳನ್ನು ಕೈಗೊಳ್ಳುವಂತೆ ಅಗತ್ಯ ಎನ್‌ಡಿಆರ್‌ಎಫ್ ಸಿಬ್ಬಂದಿ, ರಕ್ಷಣಾ ತಂಡಗಳು ಮತ್ತು ಹೆಲಿಕಾಪ್ಟರ್‌ಗಳನ್ನು ಲಭ್ಯಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಉಕ್ಕಿ ಹರಿಯುತ್ತಿರುವ ಗೋದಾವರಿ ನದಿ

ರಾಜ್ಯದಲ್ಲಿ ಅತಿವೃಷ್ಟಿಯಿಂದ ಉಂಟಾಗಿರುವ ಪರಿಸ್ಥಿತಿಯನ್ನು ನಿಭಾಯಿಸಲು ರಾಜ್ಯ ಸರ್ಕಾರಕ್ಕೆ ಭಾರತೀಯ ಸೇನೆ ನೆರವಾಗಲಿದೆ ಎಂದು ಸಿ.ಎಸ್. ಸೋಮೇಶಕುಮಾರ್ ಭರವಸೆ ನೀಡಿದ್ದಾರೆ. ಭಾರತೀಯ ಸೇನೆಯ 101 ಸದಸ್ಯರ ತಂಡವು ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಪರಿಹಾರ ಕಾರ್ಯಾಚರಣೆಯಲ್ಲಿ ಭಾಗವಹಿಸಲಿದೆ ಎಂದು ಅವರು ಹೇಳಿದರು.

ಇದನ್ನೂ ಓದಿ:ಹಿಮಾಚಲ ಪ್ರದೇಶದಲ್ಲಿ ವಿಪರೀತ ಮಳೆ, ಕೊಳದಂತಾದ ಅಟಲ್​ ಸುರಂಗ..

ಸಿಎಂ ಕೆಸಿಆರ್ ಅವರ ಆದೇಶದಂತೆ ಪ್ರವಾಹ ಪ್ರದೇಶಗಳಲ್ಲಿ ಸಹಕರಿಸುವಂತೆ ಭಾರತೀಯ ಸೇನೆಗೆ ತಿಳಿಸಲಾಗಿದೆ ಎಂದು ಸಿಎಸ್ ವಿವರಿಸಿದರು. ಇದಕ್ಕೆ ಸ್ಪಂದಿಸಿ 68 ಮಂದಿಯ ಪದಾತಿ ದಳ, 10 ಮಂದಿಯ ವೈದ್ಯಕೀಯ ತಂಡ ಹಾಗೂ 23 ಮಂದಿಯ ಇಂಜಿನಿಯರಿಂಗ್ ತಂಡ ಭದ್ರಾದ್ರಿ ಕೊತಗುಡೆಂ ಜಿಲ್ಲೆಗೆ ತೆರಳಿ ಪರಿಹಾರ ಕಾರ್ಯಾಚರಣೆಯಲ್ಲಿ ಭಾಗವಹಿಸುತ್ತಿದೆ.

ABOUT THE AUTHOR

...view details