ಪೂರ್ವ ಗೋದಾವರಿ(ಆಂಧ್ರಪ್ರದೇಶ): ವಿವಾಹ ವಾರ್ಷಿಕೋತ್ಸವದ ಪ್ರಯುಕ್ತ ವಿಹಾರಕ್ಕೆ ತೆರಳಿದ್ದ ಕುಟುಂಬವೊಂದರಲ್ಲಿ ದುಃಖ ಆವರಿಸಿದೆ. ಮಗನನ್ನು ಕಾಪಾಡಲು ತೆರಳಿದ ತಂದೆ, ತನ್ನ ಪ್ರಾಣವನ್ನು ಉಳಿಸಿಕೊಳ್ಳಲು ಸಾಧ್ಯವಾಗದ ಘಟನೆ ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯಲ್ಲಿ ನಡೆದಿದೆ.
ಕೊಡಗುಡೆಂ ಜಿಲ್ಲೆಯ ದಮ್ಮಪೇಟೆಯ ಭದ್ರಾದ್ರಿ ಕಕ್ಕಿರಾಳ ಪ್ರದೇಶದ ಪುರುಷೋತ್ತಮ್ ಸುಮಾರು 13 ವರ್ಷಗಳ ಹಿಂದೆ ಆಶ್ವರಪೇಟ ಮಂಡಲದ ನಾರಾಯಣಪುರದ ಸಂತೋಷಿನಿ ಎಂಬಾಕೆಯೊಂದಿಗೆ ವಿವಾಹವಾಗಿತ್ತು. ಬುಧವಾರ ಅವರ ವಿವಾಹ ವಾರ್ಷಿಕೋತ್ಸವ ಸಮಾರಂಭ.
ವಿವಾಹ ವಾರ್ಷಿಕೋತ್ಸವದ ಪ್ರಯುಕ್ತ ದಂಪತಿ ತಮ್ಮ ಮಕ್ಕಳಾದ 12 ವರ್ಷದ ದಿಲೀಪ್ ಮತ್ತು 10 ವರ್ಷದ ದೀಪಕ್ನೊಡನೆ, ವಿಹಾರಕ್ಕಾಗಿ ಚಿಂತೂರು ವಲಯದ ಮೋಟುಗುಡೆಂ ಬಳಿಯ ಜಲಪಾತಕ್ಕೆ ಬುಧವಾರ ತೆರಳಿದ್ದರು.