ಕರ್ನಾಟಕ

karnataka

By

Published : Oct 17, 2021, 4:53 PM IST

ETV Bharat / bharat

ಕಾರಿನಲ್ಲಿದ್ದ ವ್ಯಕ್ತಿ, ಟ್ರಾಫಿಕ್ ಪೊಲೀಸ್ ಕುತ್ತಿಗೆ ಬಿಗಿದಪ್ಪಿ ಎಳೆದೊಯ್ದ ಆರೋಪ : ವಿಡಿಯೋ

ಪ್ರಕರಣ ದಾಖಲಿಸಿಕೊಂಡ ಮುಂಡ್ವಾ ಪೊಲೀಸರು, ಪ್ರಶಾಂತ್ ಶ್ರೀಧರ್ ಕಾಂತವರ್ (43 ವರ್ಷ, ಕನ್ಹಯ್ಯ ಕಾಂಪ್ಲೆಕ್ಸ್ ನಿವಾಸಿ)ನನ್ನು ಬಂಧಿಸಿದ್ದಾರೆ. ಅಲ್ಲದೆ, ಆತನ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಿಸಿದ್ದಾರೆ..

The driver snatched the traffic police from the bonnet of the car
The driver snatched the traffic police from the bonnet of the car

ಪುಣೆ (ಮಹಾರಾಷ್ಟ್ರ) :ಟ್ರಾಫಿಕ್​ ನಿಯಮ ಉಲ್ಲಂಘಿಸಿದ್ದನ್ನು ಪ್ರಶ್ನಿಸಿ 400 ರೂಪಾಯಿ ದಂಡ ಪಾವತಿಸುವಂತೆ ಕೇಳಿದ್ದಕ್ಕೆ ಕಾರಿನಲ್ಲಿ ಕುಳಿತಿದ್ದ ವ್ಯಕ್ತಿ ಟ್ರಾಫಿಕ್ ಪೊಲೀಸ್ ಕಾನ್ಸ್​ಟೇಬಲ್​ ಕುತ್ತಿಗೆ ಹಿಡಿದು ಎಳೆದೊಯ್ದಿರುವ ಘಟನೆ ನಗರದಲ್ಲಿ ನಡೆದಿದೆ.

ಟ್ರಾಫಿಕ್ ಪೊಲೀಸ್ ಕುತ್ತಿಗೆ ಬಿಗಿದಪ್ಪಿ 700 ಮೀಟರ್ ಎಳೆದೊಯ್ದ..

ಚಲಿಸುತ್ತಿದ್ದ ಕಾರಿನಲ್ಲಿದ್ದ ವ್ಯಕ್ತಿಯೊಬ್ಬ ಟ್ರಾಫಿಕ್ ಪೊಲೀಸ್ ಕಾನ್ಸ್​ಟೇಬಲ್​ ಕುತ್ತಿಗೆ ಬಿಗಿದಪ್ಪಿ ಅಂದಾಜು 700 ರಿಂದ 800 ಮೀಟರ್ ದೂರ ಎಳೆದೊಯ್ದಿದ್ದಾನೆ. ಈ ಸಂಬಂಧ ಪೊಲೀಸ್ ಕಾನ್ಸ್​ಟೇಬಲ್ ಶೇಷರಾವ್​​ ಜೈಭಯ್​(43) ಮುಂಡ್ವಾ ಠಾಣೆಗೆ ದೂರು ನೀಡಿದ್ದರು.

ಪ್ರಕರಣ ದಾಖಲಿಸಿಕೊಂಡ ಮುಂಡ್ವಾ ಪೊಲೀಸರು, ಪ್ರಶಾಂತ್ ಶ್ರೀಧರ್ ಕಾಂತವರ್ (43 ವರ್ಷ, ಕನ್ಹಯ್ಯ ಕಾಂಪ್ಲೆಕ್ಸ್ ನಿವಾಸಿ)ನನ್ನು ಬಂಧಿಸಿದ್ದಾರೆ. ಅಲ್ಲದೆ, ಆತನ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರಿಗೆ ಬರುತ್ತಿದ್ದ ಟ್ರಕ್‌ನಿಂದ 7 ಕೋಟಿ ರೂ. ಮೌಲ್ಯದ 9,000 ಮೊಬೈಲ್ ಲೂಟಿ!

ABOUT THE AUTHOR

...view details