ಚೆನ್ನೈ: ತಮಿಳುನಾಡು ವಿಧಾನಸಭೆ ಚುನಾವಣೆಗೆ ತೆರೆಯ ಹಿಂದೆ ಸದ್ದಿಲ್ಲದೆ ತಯಾರಿ ನಡೆಯುತ್ತಿದೆ. ಎರಡು ಬಾರಿ ತಮಿಳುನಾಡು ಆಡಳಿತ ನಡೆಸಿರುವ ಎಐಎಡಿಎಂಕೆ ಪಕ್ಷವು ಅಧಿಕಾರ ಉಳಿಸಿಕೊಳ್ಳಲು ತೀವ್ರ ಹೋರಾಟ ನಡೆಸುತ್ತಿದ್ದರೆ. ಇತ್ತ ವಿರೋಧ ಪಕ್ಷ ಡಿಎಂಕೆಯು ಪ್ರತಿಸ್ಪರ್ಧೆಯೊಡ್ಡಿ ಮುಂಬರುವ ಚುನಾವಣೆಯಲ್ಲಿ ಅಧಿಕಾರಕ್ಕೇರುವ ಸವಾಲು ಒಡ್ಡಿದೆ. ಇದಕ್ಕಾಗಿ ಹಳೆಯ ಮುಖಗಳನ್ನೇ ಮತ್ತೆ ಮುನ್ನೆಲೆಗೆ ತರಲು ಪ್ರಯತ್ನಿಸುತ್ತಿದೆ.
ಇದು ಎರಡು ದ್ರಾವಿಡ ಪಕ್ಷಗಳಿಗೆ ಮಾಡು ಇಲ್ಲವೇ ಮಡಿ ಎಂಬ ಯುದ್ಧವಾಗಿದೆ. ಸಾಮಾಜಿಕ ನ್ಯಾಯದ ಹಾದಿ ಅನುಸರಿಸಲು ಹೆಸರುವಾಸಿಯಾದ ರಾಜ್ಯವು ಭವಿಷ್ಯದ ರಾಜಕೀಯ ಹೋರಾಟ ದಾರಿಗೆ ನಿರ್ಣಾಯಕವಾಗಲಿದೆ.
ಚುನಾವಣಾ ಕಣದಲ್ಲಿ ಡಿಎಂಕೆಯ ಎಂ.ಕೆ ಸ್ಟಾಲಿನ್ ಮತ್ತು ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ಜೊತೆಗೆ ನಟ ಕಮಲ್ ಹಾಸನ್ ಸಹ ಈ ಬದಲಾವಣೆ ರಾಜಕೀಯದಲ್ಲಿ ಮುಂಚೂಣಿಯಲ್ಲಿದ್ದಾರೆ. 2021ರ ವಿಧಾನಸಭೆ ಚುನಾವಣೆ ದಿನಾಂಕ ಶೀಘ್ರದಲ್ಲೇ ಪ್ರಕಟವಾಗಲಿದ್ದು, ಈಗಾಗಲೇ ಚುನಾವಣಾ ಜ್ವರ ಕೂಡಾ ಹೆಚ್ಚಾಗುತ್ತಿದೆ.
ಎಐಎಡಿಎಂಕೆಯ ನಾಯಕ ಪಳನಿಸ್ವಾಮಿ ಪ್ರತಿಕೂಲ ಸಮಯದಲ್ಲಿ ಸಿಎಂ ಸ್ಥಾನಕ್ಕೇರಿ 4 ವರ್ಷ ಯಶಸ್ವಿಯಾಗಿ ಆಡಳಿತ ನಡೆಸಿದ್ದಾರೆ. ಇದು ಪಕ್ಷಕ್ಕೆ ಮುಖ್ಯ ಶಕ್ತಿ ಸಿಕ್ಕಂತಾಗಿದೆ. ಆದರೆ ಎಐಎಡಿಎಂಕೆಯನ್ನು ಬಿಜೆಪಿ ಬಳಿಸಿಕೊಂಡು ಕೇಸರಿ ಪಸರಿಸಲು ಸಿದ್ಧತೆ ನಡೆದಿದೆ. ಆದರೆ, ಇದುವರೆಗೆ ಬಿಜೆಪಿ ಪಡೆದಿರುವುದು ಕೇವಲ ಶೇ.2ರಷ್ಟು ಮತಗಳನ್ನು ಮಾತ್ರ. ಹೀಗಿದ್ದರೂ ಅದರ ಮಹಅತ್ವಾಕಾಂಕ್ಷೆಗೆ ಯಾವುದೇ ಮಿತಿಯಿಲ್ಲ ಮತ್ತು ಡಿಎಂಕೆಯನ್ನು ಅಧಿಕಾರದಿಂದ ದೂರವಿಡುವಂತೆ ಮಾಡುವುದೇ ಅಥವಾ ದುರ್ಬಲಗೊಳಿಸುವುದೇ ಅದರ ಪ್ರಮುಖ ಉದ್ದೇಶಗಳಲ್ಲಿ ಒಂದಾಗಿದೆ.
ಕೇಸರಿ ಬ್ರಿಗೇಡ್ ಪ್ರಕಾರ ದ್ರಾವಿಡ ಪಾರ್ಟಿಗಳ ವಿಭಜಿಸುವುದರಲ್ಲೇ ಬಿಜೆಪಿಯ ಜಯ ಅಡಗಿದೆ.
ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಹೊರತುಪಡಿಸಿ ಸಹ ನಾಲ್ವರು ಸ್ಪರ್ಧಿಗಳು ಕಣದಲ್ಲಿದ್ದಾರೆ. ಡಿಎಂಕೆ ಪಕ್ಷದ ಎಂ.ಕೆ ಸ್ಟಾಲಿನ್ ಸ್ವಲ್ಪದರಲ್ಲೇ ಸಿಎಂ ಆಗುವ ಅವಕಾಶ ಕಳೆದುಕೊಂಡು ಎಐಎಡಿಎಂಕೆಗೆ ಅವಕಾಶ ಮಾಡಿಕೊಟ್ಟರು.