ಕರ್ನಾಟಕ

karnataka

By

Published : Jul 28, 2022, 5:38 PM IST

ETV Bharat / bharat

ಗುಜರಾತ್​ನಲ್ಲಿ ಕಳ್ಳಭಟ್ಟಿ ದುರಂತ: ಮೃತ ಸಂಖ್ಯೆ 57ಕ್ಕೆ ಏರಿಕೆ, ಇಬ್ಬರು ಎಸ್​ಪಿಗಳ ಎತ್ತಂಗಡಿ

ಗುಜರಾತ್​ನಲ್ಲಿ ಕಳ್ಳಭಟ್ಟಿ ದುರಂತ ಮತ್ತಷ್ಟು ಜನರನ್ನು ಬಲಿ ಪಡೆದಿದೆ. ಸಾವಿನ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಇಬ್ಬರು ಎಸ್​ಪಿಗಳನ್ನು ಗೃಹ ಇಲಾಖೆ ಎತ್ತಂಗಡಿ ಮಾಡಿದೆ.

The death toll in Botad hooch tragedy has risen to 57
ಗುಜರಾತ್​ನಲ್ಲಿ ಕಳ್ಳಭಟ್ಟಿ ದುರಂತ: ಮೃತ ಸಂಖ್ಯೆ 57ಕ್ಕೆ ಏರಿಕೆ, ಇಬ್ಬರು ಎಸ್​ಪಿಗಳ ಎತ್ತಂಗಡಿ

ಅಹಮದಾಬಾದ್ (ಗುಜರಾತ್​): ಗುಜರಾತ್​ನಲ್ಲಿ ಕಳ್ಳಭಟ್ಟಿ ದುರಂತದಿಂದ ದಿನದಿಂದ ದಿನಕ್ಕೆ ಸಾವಿನ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಇದುವರೆಗೆ ಮೃತ ಸಂಖ್ಯೆ 57ಕ್ಕೆ ಏರಿಕೆಯಾಗಿದೆ. ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗಬಹುದು ಎಂದು ಹೇಳಲಾಗುತ್ತಿದೆ.

ಬೋಟಾಡ್‌ ಜಿಲ್ಲೆಯಲ್ಲಿ ಅಕ್ರಮ ಮದ್ಯ ಸೇವಿಸಿ ಜುಲೈ 25ರಂದು ಸುಮಾರು 50 ಜನರನ್ನು ಆಸ್ಪತ್ರೆಗೆ ದಾಖಲಾಗಿತ್ತು. ಇದಾದ ನಂತರ ಕಳ್ಳಭಟ್ಟಿ ದುರಂತ ಪಕ್ಕದ ಅಹಮದಾಬಾದ್ ಗ್ರಾಮಾಂತರ ಸೇರಿ ಇತರ ಪ್ರದೇಶಗಳಲ್ಲೂ ಬೆಳಕಿಗೆ ಬಂದಿತ್ತು. ಇದೀಗ ಕಳ್ಳಭಟ್ಟಿ ದುರಂತಕ್ಕೆ ಬಲಿಯಾದವರ ಸಂಖ್ಯೆ 57ಕ್ಕೆ ತಲುಪಿದೆ.

ಇದನ್ನೂ ಓದಿ:ಗುಜರಾತ್​ನಲ್ಲಿ ಪ್ರಧಾನಿ ಮೋದಿ​: ಸಬರ್ ಡೈರಿಯಲ್ಲಿ ಒಂದು ಸಾವಿರ ಕೋಟಿ ವೆಚ್ಚದ ಯೋಜನೆಗಳ ಉದ್ಘಾಟನೆ, ಶಂಕುಸ್ಥಾಪನೆ

ಇತ್ತ, ಈ ಕಳ್ಳಭಟ್ಟಿ ದುರಂತದ ನಂತರ ರಾಜ್ಯ ಸರ್ಕಾರ, ಗೃಹ ಇಲಾಖೆ ಎಚ್ಚೆತ್ತುಕೊಂಡಿದೆ. ಬೋಟಾಡ್‌ ಎಸ್​ಪಿ ಕರಂರಾಜ್ ವಘೇಲಾ ಹಾಗೂ ಅಹಮದಾಬಾದ್ ಗ್ರಾಮಾಂತರ ಎಸ್​ಪಿ ವೀರೇಂದ್ರ ಸಿಂಗ್ ಯಾದವ್ ಅವರನ್ನು ಎತ್ತಂಗಡಿ ಮಾಡಿದೆ. ಜೊತೆಗೆ ಐವರು ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ.

ಇದನ್ನೂ ಓದಿ:ಗುಜರಾತ್​ ಕಳ್ಳಭಟ್ಟಿ ದುರಂತ: ಸಾವಿನ ಸಂಖ್ಯೆ 30ಕ್ಕೆ ಏರಿಕೆ, ಸಾಮೂಹಿಕ ಅಂತ್ಯಸಂಸ್ಕಾರ

ABOUT THE AUTHOR

...view details