ಕರ್ನಾಟಕ

karnataka

By

Published : Nov 29, 2022, 3:57 PM IST

ETV Bharat / bharat

ಭಯೋತ್ಪಾದನೆ ಪ್ರಕರಣ: ಐವರು ಜೈಶ್ ಉಗ್ರರಿಗೆ ಜೀವಾವಧಿ ಶಿಕ್ಷೆ, ಓರ್ವನಿಗೆ 5 ವರ್ಷ ಸಜೆ

ಸಜಾದ್ ಅಹ್ಮದ್ ಖಾನ್ ಉರ್ಫ್ ಸಜ್ಜದ್ ಅಹ್ಮದ್ ಖಾನ್, ಬಿಲಾಲ್ ಅಹ್ಮದ್ ಮೀರ್ ಉರ್ಫ್ ಬಿಲಾಲ್ ಮಿರ್, ಮುಜಾಫರ್ ಅಹ್ಮದ್ ಭಟ್ ಉರ್ಫ್ ಮುಜಾಫರ್ ಭಟ್, ಇಷ್ಫಾಕ್ ಅಹ್ಮದ್ ಭಟ್ ಮತ್ತು ಮೆಹರಾಜ್ ಭಟ್ ಇವರನ್ನು ಸೆಕ್ಷನ್ 121 ಎ, 120 ಬಿ ಐಪಿಸಿ, 18, 38, 39 ಯುಎ (ಪಿ) ಆಕ್ಟ್ ಮತ್ತು ಸ್ಫೋಟಕ ವಸ್ತುಗಳ ಕಾಯಿದೆಯ ಸೆಕ್ಷನ್ 4, 5 ಕಾಯ್ದೆಗಳಡಿ ಅಪರಾಧಿಗಳೆಂದು ಘೋಷಿಸಿದ ನ್ಯಾಯಾಲಯ ಇವರೆಲ್ಲರಿಗೂ ಜೀವಾವಧಿ ಶಿಕ್ಷೆ ವಿಧಿಸಿದೆ.

ಭಯೋತ್ಪಾದನೆ ಪ್ರಕರಣ: ಐವರು ಜೈಶ್ ಉಗ್ರರಿಗೆ ಜೀವಾವಧಿ ಶಿಕ್ಷೆ, ಓರ್ವನಿಗೆ 5 ವರ್ಷ ಸಜೆ
Terrorism case Five Jaish militants sentenced to life imprisonment one to 5 years

ನವದೆಹಲಿ:ಭಯೋತ್ಪಾದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಜೈಶ್​ ಎ ಮೊಹಮ್ಮದ್ ಭಯೋತ್ಪಾದಕರಿಗೆ ಜೀವಾವಧಿ ಶಿಕ್ಷೆ ಮತ್ತು ಇನ್ನೊಬ್ಬನಿಗೆ ಐದು ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿ ಹೊಸದಿಲ್ಲಿಯ ವಿಶೇಷ ಎನ್‌ಐಎ ನ್ಯಾಯಾಲಯವು ಸೋಮವಾರ ತೀರ್ಪು ನೀಡಿದೆ.

2008ರ ಬ್ಯಾಚ್‌ನ ಒಡಿಯಾ ಐಪಿಎಸ್ ಅಧಿಕಾರಿ ಡಾ ಸತ್ಯಜಿತ್ ನಾಯಕ್ ಅವರು ಎನ್‌ಐಎಯ ಪೊಲೀಸ್ ಅಧೀಕ್ಷಕ (ಎಸ್‌ಪಿ) ಆಗಿದ್ದ ಅವಧಿಯಲ್ಲಿ ಮುಖ್ಯ ತನಿಖಾ ಅಧಿಕಾರಿ (ಸಿಐಒ) ಆಗಿ ತನಿಖೆ ನಡೆಸಿದ ಎನ್‌ಐಎಯ ಪ್ರಮುಖ ಪ್ರಕರಣಗಳಲ್ಲಿ ಇದು ಒಂದಾಗಿದೆ.

ಭಾರತದ ವಿವಿಧ ಭಾಗಗಳಲ್ಲಿ ಭಯೋತ್ಪಾದಕ ಕೃತ್ಯಗಳನ್ನು ನಡೆಸಲು ವ್ಯಕ್ತಿಗಳನ್ನು ನೇಮಿಸಿಕೊಳ್ಳಲು ಪಾಕಿಸ್ತಾನ ಮೂಲದ ಮೌಲಾನಾ ಮಸೂದ್ ಅಜರ್‌ನ ಸಹೋದರ ಮುಫ್ತಿ ಅಬ್ದುಲ್ ರೌಫ್ ಅಸ್ಗರ್ ಎಂಬ ಜೈಶ್-ಎ ಮೊಹಮ್ಮದ್ (ಜೆಇಎಂ) ಉಗ್ರಗಾಮಿಯ ಕ್ರಿಮಿನಲ್ ಪಿತೂರಿಯ ಪ್ರಕರಣ ಇದಾಗಿದೆ.

ಪಾಕಿಸ್ತಾನದಲ್ಲಿ ತರಬೇತಿ ಪಡೆದ ಶಸ್ತ್ರಾಸ್ತ್ರ ಮತ್ತು ಸ್ಫೋಟಕ ತರಬೇತಿ ನೀಡಬಲ್ಲ ಜೈಶ್ ಎ ಮೊಹಮ್ಮದ್ ಭಯೋತ್ಪಾದಕರು ಭಾರತದ ವಿವಿಧ ರಾಜ್ಯಗಳಲ್ಲಿ ನೆಲೆಸಿರುವ ತಮ್ಮ ಸಹಚರರ ಸಹಾಯದಿಂದ ಗಡಿ ದಾಟಿದ ನಂತರ ಅಕ್ರಮವಾಗಿ ಭಾರತದ ಭೂಪ್ರದೇಶಕ್ಕೆ ನುಸುಳಿದ್ದರು.ೠ

ಐವರಿಗೆ ಜೀವಾವಧಿ ಶಿಕ್ಷೆ ತೀರ್ಪು:ಸಜಾದ್ ಅಹ್ಮದ್ ಖಾನ್ ಉರ್ಫ್ ಸಜ್ಜದ್ ಅಹ್ಮದ್ ಖಾನ್, ಬಿಲಾಲ್ ಅಹ್ಮದ್ ಮೀರ್ ಉರ್ಫ್ ಬಿಲಾಲ್ ಮಿರ್, ಮುಜಾಫರ್ ಅಹ್ಮದ್ ಭಟ್ ಉರ್ಫ್ ಮುಜಾಫರ್ ಭಟ್, ಇಷ್ಫಾಕ್ ಅಹ್ಮದ್ ಭಟ್ ಮತ್ತು ಮೆಹರಾಜ್ ಭಟ್ ಇವರನ್ನು ಸೆಕ್ಷನ್ 121 ಎ, 120 ಬಿ ಐಪಿಸಿ, 18, 38, 39 ಯುಎ (ಪಿ) ಆಕ್ಟ್ ಮತ್ತು ಸ್ಫೋಟಕ ವಸ್ತುಗಳ ಕಾಯಿದೆಯ ಸೆಕ್ಷನ್ 4, 5 ಕಾಯ್ದೆಗಳಡಿ ಅಪರಾಧಿಗಳು ಎಂದು ಘೋಷಿಸಿದ ನ್ಯಾಯಾಲಯ ಇವರೆಲ್ಲರಿಗೂ ಜೀವಾವಧಿ ಶಿಕ್ಷೆ ವಿಧಿಸಿದೆ.

6ನೇ ಆರೋಪಿಗೆ 5 ವರ್ಷ ಶಿಕ್ಷೆ:ಆರನೇ ಅಪರಾಧಿ ತನ್ವೀರ್ ಅಹ್ಮದ್ ಗನಿ ಅಲಿಯಾಸ್ ತನ್ವೀರ್ ಅಹ್ಮದ್‌ಗೆ ಸೆಕ್ಷನ್ 120B IPC, 18, 38 UA (P) ಕಾಯ್ದೆ ಅಡಿಯಲ್ಲಿ ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.

ಎಲ್ಲ ಆರೋಪಿಗಳು, ವಿಶೇಷವಾಗಿ ಬಿಲಾಲ್ ಮಿರ್ ಮತ್ತು ಮುಜಾಫರ್ ಭಟ್ ಭಯೋತ್ಪಾದನೆ ದಾಳಿ ನಡೆಸುವ ಬಗ್ಗೆ ಸ್ಥಳಗಳನ್ನು ಪರಿಶೀಲನೆ ಮಾಡಿದ್ದರು ಮತ್ತು ಅಡಗುತಾಣಗಳನ್ನು ವ್ಯವಸ್ಥೆಗೊಳಿಸಿದ್ದರು. ಅಲ್ಲದೆ ಭಾರತದಲ್ಲಿ ಭಯೋತ್ಪಾದಕ ದಾಳಿಗಳನ್ನು ನಡೆಸಲು ಭಯೋತ್ಪಾದಕರಿಗೆ ಲಾಜಿಸ್ಟಿಕ್ ಬೆಂಬಲ ನೀಡಿದ್ದರು.

ದಾಳಿ ನಡೆಸುವ ಪ್ರಮುಖ ಗುರಿಗಳನ್ನು ಗುರುತಿಸಲು ಮತ್ತು ದೆಹಲಿಯಲ್ಲಿ ಅಡಗುತಾಣ ಸ್ಥಾಪಿಸಲು ಸಜ್ಜದ್ ಅಹ್ಮದ್ ಖಾನ್ ಅವನನ್ನು ದೆಹಲಿಗೆ ಕಳುಹಿಸಲಾಗಿತ್ತು. ಯುವಕರನ್ನು ಗುರುತಿಸುವುದು, ಅವರನ್ನು ಸಂಘಟಿಸುವುದು ಮತ್ತು ನೇಮಕ ಮಾಡಿಕೊಳ್ಳುವುದು, ಶಸ್ತ್ರಾಸ್ತ್ರಗಳು ಮತ್ತು ಸ್ಫೋಟಕಗಳು ಮತ್ತು ಫೀಲ್ಡ್‌ಕ್ರಾಫ್ಟ್‌ಗಳ ನಿರ್ವಹಣೆಯಲ್ಲಿ ತರಬೇತಿ ನೀಡುವುದು ಮತ್ತು ಅವರ ದುಷ್ಕೃತ್ಯಗಳನ್ನು ಕಾರ್ಯಗತಗೊಳಿಸಲು ನಿಧಿ ಸಂಗ್ರಹಿಸುವುದು, ಶಸ್ತ್ರಾಸ್ತ್ರ ಸಂಗ್ರಹಿಸುವುದು ಇವರ ಮುಖ್ಯ ಗುರಿಯಾಗಿತ್ತು.

ತನ್ವೀರ್ ಭಯೋತ್ಪಾದಕರನ್ನು ಸಾಗಿಸಲು ಅನುಕೂಲ ಮಾಡಿಕೊಟ್ಟಿದ್ದ ಮತ್ತು ಮೊಹರು ಮಾಡಿದ ಪಾರ್ಸೆಲ್‌ಗಳು, ಆಹಾರ, ಔಷಧಿಗಳು ಮತ್ತು ಇತರ ವ್ಯವಸ್ಥಾಪನಾ ಬೆಂಬಲ ಪೂರೈಸುವಲ್ಲಿ ತೊಡಗಿಸಿಕೊಂಡಿದ್ದ. ಇಶ್ಫಾಕ್ ಅಹ್ಮದ್ ಅತ್ಯಂತ ಮೂಲಭೂತವಾದಿಯಾಗಿದ್ದು, ಈತ ಇತರ ಯುವಕರನ್ನು ಸಂಘಟಿಸುವ ಕಾರ್ಯವನ್ನು ಸುಗಮಗೊಳಿಸಿದ್ದ ಮತ್ತು ಭಯೋತ್ಪಾದಕರಿಗೆ ಆಶ್ರಯ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ.

ಇದನ್ನೂ ಓದಿ: ಭಯೋತ್ಪಾದನೆ ಕಾಂಗ್ರೆಸ್‌ನ ಪಾಪದ ಕೂಸು; ಬಿಜೆಪಿ ಶಾಸಕ ಪಿ ರಾಜೀವ್ ಆರೋಪ

ABOUT THE AUTHOR

...view details