ಕರ್ನಾಟಕ

karnataka

ETV Bharat / bharat

ರಾಶಿ ಭವಿಷ್ಯ ಕೇಳಲು ಬಂದ ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಆರೋಪ.. ದೇವಸ್ಥಾನದ ಪೂಜಾರಿ ಅರೆಸ್ಟ್​​ - ದೇವಸ್ಥಾನದ ಪೂಜಾರಿಯಿಂದ ಲೈಂಗಿಕ ಕಿರುಕುಳ

Temple Priest Sexually assaulted minor girl: ರಾಶಿ ಭವಿಷ್ಯ ಕೇಳಲು ದೇವಸ್ಥಾನಕ್ಕೆ ಬಂದ ಅಪ್ರಾಪ್ತೆ ಮೇಲೆ ಪೂಜಾರಿಯೋರ್ವ ಲೈಂಗಿಕ ದೌರ್ಜನ್ಯವೆಸಗಿರುವ ಆರೋಪ ಪ್ರಕರಣ ಕೇರಳದಲ್ಲಿ ನಡೆದಿದ್ದು, ಇದೀಗ ಆತನನ್ನು ಬಂಧಿಸಲಾಗಿದೆ.

Temple Priest Sexually assaulted minor girl
Temple Priest Sexually assaulted minor girl

By

Published : Jan 8, 2022, 7:12 PM IST

ಕೊಟ್ಟಾಯಂ(ಕೇರಳ) :ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯವೆಸಗಿರುವ ಆರೋಪದ ಮೇಲೆ ದೇವಸ್ಥಾನದ ಅರ್ಚಕನೋರ್ವನನ್ನು ಬಂಧಿಸಲಾಗಿದೆ. ಕೇರಳದ ಕೊಟ್ಟಾಯಂನಲ್ಲಿ ಈ ಘಟನೆ ನಡೆದಿದೆ.

ಪರಿಪ ಶ್ರೀ ಪುರಂ ದೇವಸ್ಥಾನದ ಅರ್ಚಕ ಶಿರೀಶ್​(33) ಬಂಧನಕ್ಕೊಳಗಾಗಿರುವ ಪೂಜಾರಿ. ರಾಶಿ ಭವಿಷ್ಯ ತಿಳಿದುಕೊಳ್ಳುವ ಉದ್ದೇಶದಿಂದ ತನ್ನ ಪೋಷಕರೊಂದಿಗೆ ದೇವಸ್ಥಾನಕ್ಕೆ ಬಂದಿದ್ದ ಬಾಲಕಿಗೆ ಪೂಜಾರಿ ಲೈಂಗಿಕ ದೌರ್ಜನ್ಯ ಮಾಡಿದ್ದಾನೆ. ಜೊತೆಗೆ ತನ್ನನ್ನು ರೂಂನೊಳಗೆ ಕರೆದುಕೊಂಡು ಹೋಗಿ ಅತ್ಯಾಚಾರವೆಸಗಿದ್ದಾನೆಂದು ಬಾಲಕಿ ಗಂಭೀರ ಆರೋಪ ಮಾಡಿದ್ದಾಳೆ.

ಇದನ್ನೂ ಓದಿರಿ:ರೈಲ್ವೆ ಪ್ರಯಾಣ ಇನ್ನಷ್ಟು ದುಬಾರಿ.. ₹10ರಿಂದ 50ರವರೆಗೆ ನಿಲ್ದಾಣದ ಅಭಿವೃದ್ಧಿ ಶುಲ್ಕ ವಿಧಿಸಲು ರೈಲ್ವೆ ಇಲಾಖೆ ಯೋಜನೆ..

ತನ್ನ ಮೇಲೆ ನಡೆದಿರುವ ದೌರ್ಜನ್ಯದ ಬಗ್ಗೆ ಬಾಲಕಿ ಪೋಷಕರಿಗೆ ಮಾಹಿತಿ ನೀಡಿದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. ಇದರ ಬೆನ್ನಲ್ಲೇ ಪೋಷಕರು ಮಕ್ಕಳ ರಕ್ಷಣಾ ಸಮಿತಿಗೆ ದೂರು ನೀಡಿದ್ದಾರೆ. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆ ಕ್ರಮ ಕೈಗೊಂಡಿರುವ ಪೊಲೀಸರು ಆರೋಪಿಯನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.

ABOUT THE AUTHOR

...view details