ಕರ್ನಾಟಕ

karnataka

By

Published : Dec 4, 2020, 5:31 PM IST

ETV Bharat / bharat

ಸರ್ವಪಕ್ಷ ಸಭೆಗೆ ಆರ್​ಜೆಡಿಗೆ ಆಹ್ವಾನ ನೀಡದ್ದಕ್ಕೆ ಪ್ರಧಾನಿ ವಿರುದ್ಧ ತೇಜಸ್ವಿ ಕಿಡಿ

ಸಂಸತ್ತಿನಲ್ಲಿ ಕನಿಷ್ಠ 4 ರಿಂದ 5 ಸಂಸದರನ್ನು ಹೊಂದಿರುವ ಪಕ್ಷಗಳಿಗೆ ಮಾತ್ರ ಸರ್ವಪಕ್ಷಸಭೆಗೆ ಆಹ್ವಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಆದರೆ, ಬಿಹಾರದಲ್ಲಿ 75 ಶಾಸಕರನ್ನು ಹೊಂದಿರುವ ಆರ್‌ಜೆಡಿ 5 ರಾಜ್ಯಸಭಾ ಸಂಸದರನ್ನು ಹೊಂದಿದೆ..

Tejashwi
ಆರ್‌ಜೆಡಿ ನಾಯಕ ತೇಜಸ್ವಿ ಯಾದವ್

ಪಾಟ್ನಾ (ಬಿಹಾರ):ಇಂದು ಕೋವಿಡ್​ ಪರಿಸ್ಥಿತಿ, ಲಸಿಕೆ ಬಗ್ಗೆ ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಸರ್ವಪಕ್ಷ ಸಭೆ ನಡೆಸಿದ್ದರು. ಸಭೆಗೆ ರಾಷ್ಟ್ರೀಯ ಜನತಾದಳ (ಆರ್‌ಜೆಡಿ)ಕ್ಕೆ ಆಹ್ವಾನ ನೀಡಿರಲಿಲ್ಲವೆಂದು ಪಕ್ಷದ ನಾಯಕ ತೇಜಸ್ವಿ ಯಾದವ್ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

"ಬಿಹಾರದ ಏಕೈಕ ಅತಿದೊಡ್ಡ ಪಕ್ಷವಾಗಿರುವ ಆರ್‌ಜೆಡಿಯನ್ನು ಸರ್ವಪಕ್ಷ ಸಭೆಗೆ ನರೇಂದ್ರ ಮೋದಿ ಸರ್ಕಾರ ಆಹ್ವಾನಿಸಿಲ್ಲ. ಈ ಸಭೆ ಕೇವಲ ತೋರ್ಪಡಿಕೆಗಾಗಿ ಮಾಡಿದ್ದು ಬಿಟ್ಟರೆ ಬೇರೇನಕ್ಕೂ ಅಲ್ಲ" ಎಂದು ತೇಜಸ್ವಿ ಯಾದವ್ ಆರೋಪಿಸಿದ್ದಾರೆ.

ಇದನ್ನೂ ಓದಿ:ಭಾರತದಲ್ಲಿ ಶೀಘ್ರದಲ್ಲೇ ಕೋವಿಡ್ ಲಸಿಕೆ ಲಭ್ಯ: ಪ್ರಧಾನಿ ಮೋದಿ

ಸಂಸತ್ತಿನಲ್ಲಿ ಕನಿಷ್ಠ 4 ರಿಂದ 5 ಸಂಸದರನ್ನು ಹೊಂದಿರುವ ಪಕ್ಷಗಳಿಗೆ ಮಾತ್ರ ಸರ್ವಪಕ್ಷಸಭೆಗೆ ಆಹ್ವಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಆದರೆ, ಬಿಹಾರದಲ್ಲಿ 75 ಶಾಸಕರನ್ನು ಹೊಂದಿರುವ ಆರ್‌ಜೆಡಿ 5 ರಾಜ್ಯಸಭಾ ಸಂಸದರನ್ನು ಹೊಂದಿದೆ.

ABOUT THE AUTHOR

...view details