ಕನೌಜ್ (ಉತ್ತರ ಪ್ರದೇಶ) : ಇಟ್ರಾನಗರಿಯಲ್ಲಿ ನಾಯಿಗಳ ಹಾವಳಿ ಹೆಚ್ಚಾಗುತ್ತಿದೆ. ಮಂಗಳವಾರ ಬೀದಿ ನಾಯಿಗಳ ದಂಡು ಯುವಕನ ಮೇಲೆ ದಾಳಿ ಮಾಡಿವೆ. ನಾಯಿಗಳು ಹದಿಹರೆಯದವನ ದೇಹವನ್ನು ಪರಚಿ ಗಾಯಗೊಳಿಸಿವೆ. ಅಲ್ಲದೇ ಬುಧವಾರ ಮಕರಂದ್ನಗರದಲ್ಲಿರುವ ಪವರ್ ಹೌಸ್ ಬಳಿ ಬಾಲಕನ ಮೃತದೇಹ ರಸ್ತೆಬದಿಯಲ್ಲಿ ಬಿದ್ದಿರುವುದು ಪತ್ತೆಯಾಗಿದೆ. ಹದಿಹರೆಯದ ಯುವಕನ ಸಾವಿನಿಂದ ಕುಟುಂಬದಲ್ಲಿ ದುಃಖ ಮಡುಗಟ್ಟಿದೆ.
ಘಟನೆಯ ಮಾಹಿತಿ ಮೇರೆಗೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಮಂಗಳವಾರ ರಾತ್ರಿ ಬಾಲಕ ಕೋಪಗೊಂಡು ಮನೆ ಬಿಟ್ಟು ಹೋಗಿದ್ದ ಎಂದು ಹೇಳಲಾಗುತ್ತಿದೆ. ಹಿಂತಿರುಗಿ ಮನೆಗೆ ಬಾರದೆ ಇದ್ದಾಗ ಸಂಬಂಧಿಕರು ಹುಡುಕಾಡಿದ್ದಾರೆ.
ಇದನ್ನೂ ಓದಿ:ಒಂದೇ ದಿನ 16 ಜನರ ಮೇಲೆ ಬೀದಿ ನಾಯಿ ದಾಳಿ: ಭಯ ಭೀತರಾಗಿರುವ ಜನರು
ಮನೆಬಿಟ್ಟು ಹೊರಬಂದ ಯುವಕನ ಮೇಲೆ ನಾಯಿ ದಾಳಿ: ಓಂಕಾರ್ ಕುಶ್ವಾಹ ಅವರು ತಮ್ಮ ಕುಟುಂಬದೊಂದಿಗೆ ಸದರ್ ಕೊತ್ವಾಲಿ ಪ್ರದೇಶದ ಓಲ್ಡ್ ಪೊಲೀಸ್ ಲೈನ್ನಲ್ಲಿರುವ ಕಾನ್ಶಿ ರಾಮ್ ಕಾಲೋನಿಯಲ್ಲಿ ವಾಸಿಸುತ್ತಿದ್ದಾರೆ. ಮಂಗಳವಾರ ಅವರ ಮಗ ರಾಜಕುಮಾರ (13) ಯಾವುದೋ ವಿಷಯಕ್ಕೆ ಸಂಬಂಧಿಸಿದಂತೆ ಕುಟುಂಬ ಸದಸ್ಯರೊಂದಿಗೆ ಜಗಳವಾಡಿದ್ದಾನೆ. ನಂತರ ಅವನು ಕೋಪಗೊಂಡು ತನ್ನ ಕುಟುಂಬದ ಸದಸ್ಯರಿಗೆ ತಿಳಿಸದೆ ಸದ್ದಿಲ್ಲದೆ ಮನೆಯಿಂದ ಹೊರಬಂದಿದ್ದಾನೆ. ಅಷ್ಟರಲ್ಲಿ ಬೀದಿ ನಾಯಿಗಳ ದಂಡು ಹುಡುಗನ ಮೇಲೆ ದಾಳಿ ಮಾಡಿದೆ. ಅಲ್ಲದೇ ನಾಯಿಗಳು ಅವನನ್ನು ಕೊಂದುಹಾಕಿವೆ.