ಕರ್ನಾಟಕ

karnataka

ಕರ್ತವ್ಯದ ವೇಳೆ ಬಿಜೆಪಿ ಸೇರಿದ ಇಬ್ಬರು ಪೊಲೀಸ್​ ಸಿಬ್ಬಂದಿ ಅಮಾನತು

By ETV Bharat Karnataka Team

Published : Jan 4, 2024, 3:19 PM IST

ಯುನಿಫಾರಂನಲ್ಲಿದ್ದ ಕಾರ್ತಿಕೇಯನ್​ ಮತ್ತು ರಾಜೇಂದ್ರನ್​ ಮಿಸ್ಡ್​​ಕಾಲ್​​ ನೀಡಿ ಬಿಜೆಪಿ ನೋಂದಣಿ ಪ್ರಕ್ರಿಯೆಯಲ್ಲಿ ಭಾಗಿಯಾಗಿರುವುದು ದೃಢಪಟ್ಟ ಹಿನ್ನೆಲೆ ಇಲಾಖೆ ಅಮಾನತು ಮಾಡಿದೆ.

Suspension of two policemen for Joining BJP While on Duty
Suspension of two policemen for Joining BJP While on Duty

ಚೆನ್ನೈ: ಪೊಲೀಸ್​​ ಕರ್ತವ್ಯ ನಿರ್ವಹಣೆ ವೇಳೆ ಭಾರತೀಯ ಜನತಾ ಪಕ್ಷ (ಬಿಜೆಪಿ) ಸೇರಿದ ಇಬ್ಬರು ಪೊಲೀಸರನ್ನು ತಮಿಳುನಾಡು ಪೊಲೀಸ್​ ಇಲಾಖೆ ಅಮಾನತು ಮಾಡಿದೆ. ವಿಶೇಷ ಸಬ್​ ಇನ್ಸ್​ಪೆಕ್ಟರ್​ ಕಾರ್ತಿಕೇಯನ್​ ಮತ್ತು ಸಬ್​​ ಇನ್ಸ್​ಪೆಕ್ಟರ್​ ರಾಜೇಂದ್ರನ್​ ಅಮಾನತುಗೊಂಡಿರುವ ಅಧಿಕಾರಿಗಳು.

ಕಳೆದ ಡಿಸೆಂಬರ್​​ 27ರಂದು ಬಿಜೆಪಿ ರಾಜ್ಯಾಧ್ಯಕ್ಷೆ ಕೆ ಅಣ್ಣಾಮಲೈ ನೇತೃತ್ವದಲ್ಲಿನ ಕರಾವಳಿ ಜಿಲ್ಲೆ ನಾಗಪಟ್ಟಿನಂನಲ್ಲಿ ಬಿಜೆಪಿ ರೋಡ್​ ಶೋ ನಡೆಸುತ್ತಿತ್ತು. ಎನ್​ ಮನ್​ ಎನ್​ ಮಕ್ಕಳು (ನನ್ನ ಭೂಮಿ, ನನ್ನ ಜನರು) ರೋಡ್​ ಶೋಗೆ ಬಂದೋಬಸ್ತ್​​ನಲ್ಲಿ ಈ ಇಬ್ಬರೂ ಅಧಿಕಾರಿಗಳು ಕೂಡ ಕರ್ತವ್ಯ ನಿರ್ವಹಿಸುತ್ತಿದ್ದರು. ಅಯುರಿತಿದಳ್​ ಎಂಬ ಸಣ್ಣ ಊರಿನಲ್ಲಿ ಈ ಸಂದರ್ಭದಲ್ಲಿ ಪಕ್ಷಕ್ಕೆ ಹೊಸ ಸದಸ್ಯರ ನೋಂದಣಿ ಪ್ರಕ್ರಿಯೆಗೆ ಚಾಲನೆ ನೀಡಲಾಗಿತ್ತು. ಇಲ್ಲಿ ಸಾಮಾನ್ಯ ಜನರಿಗೆ ಮೊಬೈಲ್​ ನಂಬರ್​​ಗೆ ಮಿಸ್ಡ್​​ಕಾಲ್​ ಮಾಡಿ ಬಿಜೆಪಿಗೆ ಸೇರುವ ಅವಕಾಶ ನೀಡಲಾಗಿತ್ತು. ಈ ವೇಳೆ ಯುನಿಫಾರಂನಲ್ಲಿದ್ದ ಕಾರ್ತಿಕೇಯನ್​ ಮತ್ತು ರಾಜೇಂದ್ರನ್​ ಮಿಸ್ಡ್​​ಕಾಲ್​​ ಮಾಡಿ ಬಿಜೆಪಿ ನೋಂದಣಿ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದರು. ಈ ಮೂಲಕ ಇಲಾಖೆಯ ಸೇವಾ ನಿಯಮವನ್ನು ಉಲ್ಲಂಘಿಸಿದ್ದಾರೆ. ಈ ಹಿನ್ನೆಲೆ ಅವರಿಬ್ಬರನ್ನು ಅಮಾನತು ಮಾಡಲಾಗಿದೆ ಎಂದು ತಿಳಿದುಬಂದಿದೆ.

ಈ ಕುರಿತು ನಾಗಪಟ್ಟಿನಂ ಜಿಲ್ಲೆಯ ಹಿರಿಯ ಪೊಲೀಸ್​ ಅಧಿಕಾರಿಗಳು ಮಾತನಾಡಿ, ಇದು ಸೇವಾ ನಿಯಮದ ಸಂಪೂರ್ಣ ಉಲ್ಲಂಘನೆಯಾಗಿದೆ. ಪೊಲೀಸರು ನಡೆಸಿರುವ ಈ ನೋಂದಣಿ ಪ್ರಕ್ರಿಯೆಯ ಕ್ಯಾಮರಾದಲ್ಲಿ ದಾಖಲಾಗಿದ್ದು, ಇದರಲ್ಲಿ ಅಧಿಕಾರಿಗಳು ನೇರವಾಗಿ ಭಾಗಿಯಾಗಿದ್ದಾರೆ ಎಂಬುದು ಸಾಕ್ಷಿ ಸಿಕ್ಕಿದೆ ಎಂದಿದ್ದಾರೆ.

ಈ ಸಂಬಂಧ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ. ಪ್ರಾಥಮಿಕ ತನಿಖೆಯನ್ನು ಅದೇ ದಿನ ನಾಗಪಟ್ಟಿನಂನ ಜಿಲ್ಲಾ ಸೂಪರಿಂಟೆಂಡೆಂಟ್​​​ ಹರ್ಷ ಸಿಂಗ್​ ಮಾಡಿದ್ದಾರೆ. ಡಿಸೆಂಬರ್​ 28ರಂದು ಈ ಇಬ್ಬರೂ ಪೊಲೀಸರನ್ನು ಮೀಸಲು ಸೇನಾ ಘಟಕಕ್ಕೆ ವರ್ಗಾಯಿಸಲಾಗಿದೆ. ಇದರ ಜೊತೆಗೆ ನಡೆದ ತನಿಖೆಯಲ್ಲಿ ಅವರ ವಿರುದ್ಧ ಆರೋಪ ದೃಢಪಟ್ಟಿದೆ. ಈ ಹಿನ್ನೆಲೆ ತಂಜಾಬೂರು ವಲಯದ ಡಿಜಿಪಿ ಜಯಚಂದ್ರನ್​​ ಅವರನ್ನು ತಮಿಳುನಾಡು ಅಧೀನ ಪೊಲೀಸ್ ಅಧಿಕಾರಿಗಳು ನಿಯಮಗಳ ಅನುಸಾರ ಅಮಾನತು ಮಾಡಿದ್ದಾರೆ.

ಇನ್ನು ಘಟನೆ ಕುರಿತು ಪ್ರತಿಕ್ರಿಯಿಸಿರುವ ಮಾಜಿ ಪೊಲೀಸ್​ ಅಧಿಕಾರಿಯಾಗಿರುವ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ, ಈ ಅಮಾನತಿನ ನಿರ್ಧಾರವನ್ನು ಮರು ಪರಿಶೀಲಿಸುವಂತೆ ಹಿರಿಯ ಪೊಲೀಸ್​ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.

ಇದನ್ನೂ ಓದಿ:ನಾಗರಶೈಲಿಯಲ್ಲಿ ಕಣ್ಮನ ಸೆಳೆಯುವ ಅಯೋಧ್ಯೆಯ ಭವ್ಯ ರಾಮಮಂದಿರ: ಅದರ ವೈಶಿಷ್ಟ್ಯಗಳಿವು ಇಲ್ಲಿವೆ

ABOUT THE AUTHOR

...view details