ಕರ್ನಾಟಕ

karnataka

ETV Bharat / bharat

ಬಿಜೆಪಿಯಿಂದ ಬೆಂಬಲ ಹಿಂತೆಗೆದುಕೊಂಡ ಶಾಸಕರಿಗೆ ಸುರ್ಜೇವಾಲಾ ಅಭಿನಂದನೆ - dehli farmer protest

ಖಟ್ಟರ್ ಸರ್ಕಾರದಿಂದ ಬೆಂಬಲ ಹಿಂತೆಗೆದುಕೊಂಡಿದ್ದಕ್ಕಾಗಿ ನಾನು ಅವರನ್ನು ಅಭಿನಂದಿಸುತ್ತೇನೆ ಎಂದು ರಣದೀಪ್ ಸುರ್ಜೇವಾಲಾ ಹೇಳಿದ್ದಾರೆ.

surjewala congratulate two independent MLAs
ಬಿಜೆಪಿಯಿಂದ ಬೆಂಬಲ ಹಿಂತೆಗೆದುಕೊಂಡ ಶಾಸಕರನ್ನು ಅಭಿನಂಧಿಸಿದ ಸುರ್ಜೇವಾಲಾ

By

Published : Dec 2, 2020, 4:59 PM IST

ನವದೆಹಲಿ: ಇಬ್ಬರು ಸ್ವತಂತ್ರ ಶಾಸಕರು ತಮ್ಮ ಆತ್ಮಸಾಕ್ಷಿ ಒಪ್ಪುವಂತಹ ಕೆಲಸ ಮಾಡಿದ್ದಾರೆ. ರೈತರ ಹೋರಾಟಕ್ಕೆ ಧ್ವನಿಯಾಗಿದ್ದಾರೆ. ಖಟ್ಟರ್ ಸರ್ಕಾರದಿಂದ ಬೆಂಬಲವನ್ನು ಹಿಂತೆಗೆದುಕೊಂಡಿದ್ದಕ್ಕಾಗಿ ನಾನು ಅವರನ್ನು ಅಭಿನಂದಿಸುತ್ತೇನೆ ಎಂದು ಕಾಂಗ್ರೆಸ್‌ ರಾಷ್ಟ್ರೀಯ ವಕ್ತಾರ ರಣದೀಪ್ ಸುರ್ಜೇವಾಲಾ ಹೇಳಿದ್ದಾರೆ.

ಇತರ ಸ್ವತಂತ್ರ ಶಾಸಕರು ಸಹ ಇದೇ ರೀತಿ ಮುಂದೆ ಬರುತ್ತಾರೆ. ಈ ರೀತಿಯ ಧೈರ್ಯಶಾಲಿ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ.

ಶಾಂತಿಯುತ ಪ್ರತಿಭಟನೆಯಲ್ಲಿ ತೊಡಗಿರುವ ರೈತರ ಮೇಲೆ ದೌರ್ಜನ್ಯವನ್ನು ನಾನು ಸಹಿಸುವುದಿಲ್ಲ. ಪ್ರಸ್ತುತ ಸಂದರ್ಭದಲ್ಲಿ ನಾನು ಸರ್ಕಾರದೊಂದಿಗೆ ಹೋಲಿಕೆ ಮಾಡಿಕೊಳ್ಳಲು ಸಾಧ್ಯವಿಲ್ಲ ಮತ್ತು ಬಿಜೆಪಿಗೆ ನೀಡಿದ್ದ ಬೆಂಬಲ ಹಿಂತೆಗೆದುಕೊಳ್ಳಲು ನಿರ್ಧರಿಸಿದ್ದೇನೆ ಎಂದು ಶಾಸಕ ಸಂಗ್ವಾನ್​ ಹೇಳಿದ್ದರು.

ABOUT THE AUTHOR

...view details