ಕರ್ನಾಟಕ

karnataka

ಕಾವೇರಿ ಆಸ್ಪತ್ರೆಯಿಂದ ಸೂಪರ್​ ಸ್ಟಾರ್​ ರಜನಿಕಾಂತ್​ ಡಿಸ್ಚಾರ್ಜ್​

By

Published : Oct 31, 2021, 10:46 PM IST

Updated : Nov 1, 2021, 12:43 PM IST

ಚೆನ್ನೈನ ಕಾವೇರಿ ಆಸ್ಪತ್ರೆಗೆ ದಾಖಲಾಗಿದ್ದ ಬಹುಭಾಷಾ ನಟ ರಜನಿಕಾಂತ್​ ಭಾನುವಾರ ಡಿಸ್ಚಾರ್ಜ್​ ಆಗಿ ಮನೆಗೆ ತೆರಳಿದ್ದಾರೆ. ತಲೈವಾ ಆರೋಗ್ಯವಾಗಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ..

Rajanikant
ಕಾವೇರಿ ಆಸ್ಪತ್ರೆಯಿಂದ ಸೂಪರ್​ ಸ್ಟಾರ್​ ರಜನಿಕಾಂತ್​ ಡಿಸ್ಚಾರ್ಜ್​

ಚೆನ್ನೈ/ತಮಿಳುನಾಡು :ದಕ್ಷಿಣ ಭಾರತದ ಸೂಪರ್ ಸ್ಟಾರ್ ರಜನಿಕಾಂತ್ ಕಾವೇರಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

ಗುರುವಾರ (ಅಕ್ಟೋಬರ್ 28), ಅವರು Carotid Artery revascularizationಗೆ ಒಳಗಾಗಲು ಸಲಹೆ ನೀಡಿದ್ದರಿಂದ ಅವರನ್ನು ಚೆನ್ನೈನ ಕಾವೇರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈಗ ಚಿಕಿತ್ಸೆ ಯಶಸ್ವಿಯಾಗಿ ನಡೆದಿದ್ದು, ಅವರು ಚೇತರಿಸಿಕೊಂಡಿದ್ದಾರೆ. ತಮ್ಮ ಎಂದಿನ ಕೆಲಸ ಕಾರ್ಯಗಳನ್ನು ಅವರು ನಿರ್ವಹಿಸಬಹುದು ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಕಾವೇರಿ ಆಸ್ಪತ್ರೆಯಿಂದ ಸೂಪರ್​ ಸ್ಟಾರ್​ ರಜನಿಕಾಂತ್​ ಡಿಸ್ಚಾರ್ಜ್​

ಸಿನಿಮಾ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ ರಜನಿ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಸ್ವೀಕರಿಸಲು ಕೆಲವು ದಿನಗಳ ಹಿಂದೆ ನವದೆಹಲಿಗೆ ತೆರಳಿದ್ರು. ವಾಪಸ್ಸಾದ ಬಳಿಕ ರೆಗ್ಯೂಲರ್​ ಹೆಲ್ತ್​​ ಚೆಕ್​ಅಪ್​​ಗಾಗಿ ಕಾವೇರಿ ಆಸ್ಪತ್ರೆಗೆ ಹೋಗಿದ್ದರು. ಆದರೆ, ವೈದ್ಯರ ಸಲಹೆ ಮೇರೆಗೆ ಆಸ್ಪತ್ರೆಯಲ್ಲೇ ದಾಖಲಾಗಬೇಕಾಯಿತು.

ಇನ್ನು ರಜನಿಕಾಂತ್ ಅಭಿನಯದ 'ಅನ್ನತ್ತೆ' ಚಿತ್ರ ಇದೇ ದೀಪಾವಳಿಯ ನವೆಂಬರ್ 4 ರಂದು ತೆರೆಗೆ ಬರಲಿದೆ.

ಇದನ್ನೂ ಓದಿ:'ಜೈ ಭೀಮ್‌'ನಂತಹ ಚಲನಚಿತ್ರಗಳತ್ತ ಒಲವು ಹೆಚ್ಚಾಗುತ್ತಿದೆ : ನಟ ಸೂರ್ಯ

Last Updated : Nov 1, 2021, 12:43 PM IST

ABOUT THE AUTHOR

...view details