ಕೋಲ್ಕತಾ, ಪಶ್ಚಿಮ ಬಂಗಾಳ :ತೌಕ್ತೆ ಚಂಡಮಾರುತದಿಂದ ಈಗಾಗಲೇ ದೇಶದ ಪಶ್ಚಿಮ ಕರಾವಳಿ ಸಾಕಷ್ಟು ಹಾನಿಗೆ ಒಳಗಾಗಿದೆ. ಈ ಬೆನ್ನಲ್ಲೇ ಮೇ 23 ಮತ್ತು ಮೇ 25 ನಡುವೆ ಪಶ್ಚಿಮ ಬಂಗಾಳದ ಸುಂದರ್ ಬನ್ ಪ್ರದೇಶದಲ್ಲಿ 'ಯಶ್' ಎಂಬ ಹೆಸರಿನ ಚಂಡಮಾರುತ ಅಪ್ಪಳಿಸಲಿದ್ದು, ಭೂಕುಸಿತ ಉಂಟಾಗುವ ಸಾಧ್ಯತೆಯಿದೆ ಎನ್ನಲಾಗಿದೆ.
ಪಶ್ಚಿಮ ಬಂಗಾಳದ ಪ್ರಾದೇಶಿಕ ಹವಾಮಾನ ಇಲಾಖೆ ಈ ರೀತಿಯ ಮಾಹಿತಿ ನೀಡಿದ್ದು, ಸುಂದರ್ ಬನ್ ಮತ್ತು ಇತರ ಪ್ರದೇಶಗಳಲ್ಲಿ ಸಾಕಷ್ಟು ಹಾನಿಯಾಗುವ ಸಾಧ್ಯತೆಯಿದೆ. ನಂತರ ಬಾಂಗ್ಲಾದೇಶದ ಕಡೆಗೆ ಚಂಡಮಾರುತ ಸಾಗಬಹುದು ಎಂದು ಹೇಳಲಾಗುತ್ತಿದೆ.
ಒಮನ್ ರಾಷ್ಟ್ರ ಯಶ್ ಎಂಬ ಹೆಸರನ್ನು ನೀಡಿದ್ದು, ಕಳೆದ ವರ್ಷ ಮೇ ತಿಂಗಳಲ್ಲಿ ಕೋಲ್ಕತ್ತಾ ಮತ್ತು ಪೂರ್ವ ಕರಾವಳಿಯ ಪ್ರದೇಶಗಳನ್ನು ಧ್ವಂಸಗೊಳಿಸಿದ್ದ ಆಂಫಾನ್ ಚಂಡಮಾರುತಕ್ಕೆ ಈ ಯಶ್ ಚಂಡಮಾರುತ ಸಮನಾಗಿರಬಹುದೆಂದು ಊಹಿಸಲಾಗಿದೆ.