ನವದೆಹಲಿ:ಗ್ಲೋಬಲ್ ಸೌತ್ನ ವಾಯ್ಸ್ ಶೃಂಗಸಭೆಯು ಒಂದು ವಿಶಿಷ್ಟ ಆರಂಭವಾಗಿದೆ. ಇದು ಗ್ಲೋಬಲ್ ಸೌತ್ ದೇಶಗಳ ಆದ್ಯತೆಗಳ ಹೆಚ್ಚಿನ ಸಹಯೋಗದ ಹೊಸ ಮಾರ್ಗವನ್ನು ರೂಪಿಸಲು ಭಾರತಕ್ಕೆ ಅವಕಾಶ ಮಾಡಿಕೊಡುತ್ತದೆ. ಅಭಿವೃದ್ಧಿಶೀಲ ರಾಷ್ಟ್ರಗಳ ಆದ್ಯತೆಗಳು, ದೃಷ್ಟಿಕೋನಗಳು ಮತ್ತು ಕಾಳಜಿಗಳನ್ನು ಪ್ರತಿಧ್ವನಿಸಲು ಭಾರತ ಎರಡು ದಿನದ ವರ್ಚುಯಲ್ ಸಭೆಯನ್ನು ಆಯೋಜಿಸಿತ್ತು ಎಂದು ಶೃಂಗಸಭೆ ಮುಕ್ತಾಯದ ಬಳಿಕ ವಿದೇಶಾಂಗ ಕಾರ್ಯದರ್ಶಿ ವಿನಯ್ ಕ್ವಾತ್ರಾ ತಿಳಿಸಿದ್ದಾರೆ.
ಗುರುವಾರ ಗ್ಲೋಬಲ್ ಸೌತ್ನ ವಾಯ್ಸ್ ಶೃಂಗಸಭೆ ಪ್ರಧಾನಿ ನರೇಂದ್ರ ಮೋದಿ ನಾಯಕತ್ವದ ಅಡಿ ಪ್ರಾರಂಭವಾಯಿತು. 125 ದೇಶಗಳು ಇದರಲ್ಲಿ ಹೊಸದಾಗಿ ಮತ್ತು ವಿಶಿಷ್ಟ ರೀತಿಯ ಉಪಕ್ರಮದೊಂದಿಗೆ ಭಾಗಿಯಾದವು. ಗ್ಲೋಬಲ್ ಸೌತ್ ಬೆಳವಣಿಗೆಗಳಿಂದ ಪ್ರತಿಕೂಲ ಪರಿಣಾಮ ಬೀರುತ್ತಿದೆ. ಶೃಂಗಸಭೆಯಲ್ಲಿ ಭಾಗಿಯಾದ ನಾಯಕರ ಮತ್ತು ಸಚಿವರ ಸಲಹೆ ಮತ್ತು ಯೋಜನೆಗಳ ಬಗ್ಗೆ ಭಾರತ ಮೌಲ್ಯವನ್ನು ಹೊಂದಿದೆ ಎಂದು ಇದೇ ವೇಳೆ ತಿಳಿಸಿದರು.
ಭಾರತ ಇದೇ ಮೊದಲ ಬಾರಿಗೆ ಜಿ20 ಅಧ್ಯಕ್ಷತೆ ವಹಿಸುತ್ತದೆ ಎಂಬುದು ಹೇಳುವುದು ತಪ್ಪಲ್ಲ. ಬಹುಶಃ ಅದು ಸಂಪೂರ್ಣ ಅಭಿವೃದ್ಧಿಶೀಲ ರಾಷ್ಟ್ರಗಳ ಭಾವನೆ ಮತ್ತು ದೃಷ್ಟಿಕೋನಗಳನ್ನು ಸೆರೆಹಿಡಿದಿದೆ ಎಂದು ಹೇಳಬಹುದು. ಗ್ಲೋಬಲ್ ಸೌತ್ ದೇಶಗಳ ಕಳವಳಗಳನ್ನು ಅಂತರರಾಷ್ಟ್ರೀಯ ವೇದಿಕೆಗಳ ಮೂಲಕ ಸಹಜವಾಗಿ ತಲುಪಿಸಲು ಭಾರತ ಪ್ರಯತ್ನ ಮಾಡುತ್ತಿದ್ದು, ಇದು ನಮ್ಮ ಆದ್ಯತೆ ವಿಷಯವಾಗಿದೆ ಎಂದರು.
ಶೃಂಗಸಭೆಯ ಸಮಯದಲ್ಲಿ ಅಂತಾರಾಷ್ಟ್ರೀಯ ಸಂಸ್ಥೆಗಳಲ್ಲಿ ಗ್ಲೋಬಲ್ ಸೌತ್ನ ಧ್ವನಿಯನ್ನು ವ್ಯಕ್ತಪಡಿಸುವ ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳ ಸಮತೋಲಿತ ಪ್ರಾತಿನಿಧ್ಯಕ್ಕಾಗಿ ಸುಧಾರಿಸುವ ಅಗತ್ಯತೆ ಇದೆ. ವಾಯ್ಸ್ ಆಫ್ ಗ್ಲೋಬಲ್ ಸೌತ್ ಶೃಂಗಸಭೆಯ ಮೂಲಕ ಭಾಗವಹಿಸಿದ ರಾಷ್ಟ್ರಗಳು, ಇಡೀ ಪ್ರಪಂಚದಾದ್ಯಂತ ಬಲವಾದ ಮತ್ತು ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ಪಷ್ಟವಾಗಿ ಪ್ರದರ್ಶಿಸಿದ್ದಾರೆ ಎಂದರು.