ಕರ್ನಾಟಕ

karnataka

ETV Bharat / bharat

ನಾನು ನನ್ನ ತಂದೆಯನ್ನು ದ್ವೇಷಿಸುತ್ತೇನೆ.. ಡೆತ್​​ನೋಟ್​​ ಬರೆದಿಟ್ಟು ವಿದ್ಯಾರ್ಥಿನಿ ಆತ್ಮಹತ್ಯೆ!

ಎಸ್​ಎಸ್​​ಎಲ್​ಸಿ​ ಪರೀಕ್ಷೆ ಹಿಂದಿನ ದಿನ ವಿದ್ಯಾರ್ಥಿನಿಯೋರ್ವಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಂಗಾರೆಡ್ಡಿ ಜಿಲ್ಲೆ ನಂದಿಗಾಮ ವಲಯದ ಬುಗ್ಗೊನಿಗುಡದಲ್ಲಿ ಸೋಮವಾರ ತಡರಾತ್ರಿ ಬೆಳಕಿಗೆ ಬಂದಿದೆ..

By

Published : May 24, 2022, 2:30 PM IST

SSLC  student commits suicide
ಸಾಂದರ್ಭಿಕ ಚಿತ್ರ

ರಂಗಾರೆಡ್ಡಿ(ತೆಲಂಗಾಣ) :"ನಾನು ನನ್ನ ತಂದೆಯನ್ನು ದ್ವೇಷಿಸುತ್ತೇನೆ. ನಾನು ಅವನನ್ನು ಕೊಲ್ಲಬೇಕು ಇಲ್ಲದಿದ್ದರೆ, ನಾನು ಸಾಯಬೇಕು" ಎಂದು ಎಸ್​ಎಸ್​​ಎಲ್​ಸಿ ವಿದ್ಯಾರ್ಥಿನಿಯೊಬ್ಬಳು ಡೆತ್​​ನೋಟ್​​ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾಳೆ. ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ನಂದಿಗಾಮ ವಲಯದ ಬುಗ್ಗೊನಿಗುಡ ಗ್ರಾಮದಲ್ಲಿ ಈ ಘಟನೆ ನಡೆದಿದೆ.

'ನಮ್ಮ ತಂದೆ ಒಬ್ಬ ಮೂರ್ಖ, ಪ್ರತಿದಿನ ಮದ್ಯ ಸೇವಿಸಿ ನಮಗೆ ನರಕ ತೋರಿಸುತ್ತಿದ್ದಾನೆ. ನಮ್ಮ ತಾಯಿ ಬದುಕಿದ್ದಾಗ ತುಂಬಾ ಒಳ್ಳೆಯವನಾಗಿದ್ದ. ಆಕೆಯ ಮರಣದ ನಂತರ ಕುಡಿತದ ಚಟಕ್ಕೆ ಬಿದ್ದು ಒರಟಾಗಿ ವರ್ತಿಸುತ್ತಿದ್ದ. ಅವರನ್ನು ಅಪ್ಪಾ ಎಂದು ಕರೆಯಲು ಮನಸ್ಸಿಲ್ಲ. ನಾನು ಮೂರು ಬಾರಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಿದೆ.

ಆದರೆ, ಬದುಕುಳಿದೆ. ಅವನು ಪ್ರತಿದಿನ ನಮಗೆ ಕಿರುಕುಳ ನೀಡುತ್ತಾನೆ. ಕೆಲವು ದಿನಗಳಲ್ಲಿ ನನ್ನ ಸಾವಿನ ಬಗ್ಗೆ ಎಲ್ಲರಿಗೂ ತಿಳಿಯಲಿದೆ. ನಾನು ನನ್ನ ಸಾವಿಗೆ ಕಾಯುತ್ತಿದ್ದೇನೆ' ಎಂದು ಡೆತ್​​ನೋಟ್​​ನಲ್ಲಿ ಬರೆದಿದ್ದಾಳೆ. ರಂಗಾರೆಡ್ಡಿ ಜಿಲ್ಲೆಯ ನಂದಿಗಾಮ ವಲಯದ ಬುಗ್ಗೊನಿಗುಡ ಗ್ರಾಮದ ನರಸಿಂಹುಲು ಮತ್ತು ಲಲಿತಾ ದಂಪತಿಗೆ ಓರ್ವ ಪುತ್ತ ಮತ್ತು ಪುತ್ರಿ. ಮಗಳು ಮನಿಷಾ (16) ಹತ್ತನೇ ತರಗತಿ ಓದುತ್ತಿದ್ದಳು.

ಲಲಿತಾ ಒಂದು ವರ್ಷದ ಹಿಂದೆ ಮೃತಪಟ್ಟಿದ್ದರು. ಪತ್ನಿ ತೀರಿಕೊಂಡ ನಂತರ ನರಸಿಂಹುಲು ಕುಡಿತದ ಚಟಕ್ಕೆ ಬಿದ್ದಿದ್ದನಂತೆ. ನಿತ್ಯ ಕುಡಿದು ಬಂದು ಮಗ ಮತ್ತು ಮಗಳ ಜತೆ ಜಗಳವಾಡುತ್ತಿದ್ದ. ಭಾನುವಾರ ಬೆಳಗ್ಗೆ ಮತ್ತೆ ಜಗಳ ನಡೆದಿದೆ ಎನ್ನಲಾಗಿದೆ. ಮಧ್ಯಾಹ್ನ ತಂದೆ ಮಗನಿಗೆ ಫೋನ್ ಮಾಡಿ ಮನೆಯಲ್ಲಿ ತಂಗಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಿಳಿಸಿದರು.

ಮನೆಗೆ ಬಂದು ನೋಡಿದಾಗ ಮನಿಷಾ ಕತ್ತಿನ ಮೇಲೆ ರಕ್ತಗಾಯಗಳೊಂದಿಗೆ ಶವವಾಗಿ ಬಿದ್ದಿರುವುದು ಕಂಡು ಬಂದಿದೆ. ಅದರ ಪಕ್ಕದ ಹಾಸಿಗೆಯ ಮೇಲಿರುವ ಪುಸ್ತಕದಲ್ಲಿ "ನಾನು ನನ್ನ ತಂದೆಯನ್ನು ದ್ವೇಷಿಸುತ್ತೇನೆ" ಎಂದು ನಾಲ್ಕು ಬಾರಿ ಬರೆಯಲಾಗಿದೆ ಎಂದು ಮನಿಷಾ ಸಹೋದರ ಪೊಲೀಸರಿಗೆ ದೂರು ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ:40ರ ಮಹಿಳೆ ಜೊತೆ ರೂಂ​ಗೆ ಹೋದ ವೃದ್ಧ; ಲೈಂಗಿಕ ಕ್ರಿಯೆಯಲ್ಲಿ ಹಾರಿಹೋಯ್ತು ಪ್ರಾಣ!

ABOUT THE AUTHOR

...view details