ಕರ್ನಾಟಕ

karnataka

By

Published : Jul 4, 2022, 3:48 PM IST

ETV Bharat / bharat

ಅಲ್ಲೂರಿ ಸ್ಪೂರ್ತಿ ಪಡೆದು ಮುನ್ನಡೆದರೆ ನಮ್ಮನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಮೋದಿ

ಆಂಧ್ರ ರಾಜ್ಯವು ಅನೇಕ ದೇಶಭಕ್ತರ ಸಂತಾನಸ್ಥಾನವಾಗಿದೆ. ಪಿಂಗಳಿ ವೆಂಕಯ್ಯ, ಕನ್ನೆಗಂಟಿ ಹನುಮಾನ್, ಪೊಟ್ಟಿ ಶ್ರೀರಾಮುಲು, ವೀರೇಶಲಿಂಗಂ ಪಂತುಲು ಮುಂತಾದ ಮಹಾನ್ ವ್ಯಕ್ತಿಗಳ ನಾಡು ಆಂಧ್ರಪ್ರದೇಶ. ದೇಶಕ್ಕಾಗಿ ತ್ಯಾಗ ಬಲಿದಾನ ಮಾಡಿದ ಇಂತಹವರ ಕನಸುಗಳು ನನಸಾಗಬೇಕು. ಇದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಮೋದಿ ಹೇಳಿದ್ದಾರೆ.

ಅಲ್ಲೂರಿ ಸ್ಪೂರ್ತಿ ಪಡೆದು ಮುನ್ನಡೆದರೆ ನಮ್ಮನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಮೋದಿ
ಅಲ್ಲೂರಿ ಸ್ಪೂರ್ತಿ ಪಡೆದು ಮುನ್ನಡೆದರೆ ನಮ್ಮನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಮೋದಿ

ಪಶ್ಚಿಮ ಗೋದಾವರಿ : ಇಡೀ ಭಾರತಕ್ಕೆ ಸ್ಫೂರ್ತಿಯಾಗಿರುವ ಅಲ್ಲೂರಿ ಜಯಂತಿಯಂದು ನಾವೆಲ್ಲರೂ ಇಲ್ಲಿ ಭೇಟಿಯಾಗಿರುವುದು ನನ್ನ ಅದೃಷ್ಟವೆಂದು ಭಾವಿಸುತ್ತೇನೆ ಎಂದು ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ಭೀಮಾವರಂನಲ್ಲಿ ನಡೆದ ಅಲ್ಲೂರಿ ಅವರ 125 ನೇ ಜನ್ಮದಿನಾಚರಣೆ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಇದು ಆಂಧ್ರ ರಾಜ್ಯದ ವೀರಭೂಮಿ, ಇಂತಹ ಪುಣ್ಯ ಕ್ಷೇತ್ರಕ್ಕೆ ಬಂದಿರುವುದು ನನ್ನ ಅದೃಷ್ಟ ಎಂದು ಭಾವಿಸುತ್ತೇನೆ. ಅಖಿಲ ಭಾರತದ ಪರವಾಗಿ ಅಲ್ಲೂರಿ ಅವರ ಪಾದಕ್ಕೆ ನಮಸ್ಕಾರ. ಅಲ್ಲೂರಿ ಕುಟುಂಬದೊಂದಿಗೆ ವೇದಿಕೆ ಹಂಚಿಕೊಳ್ಳುವ ಭಾಗ್ಯ ನನ್ನದಾಗಿದೆ. ದೇಶ ಈಗ 75ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸುತ್ತಿದೆ. ಆಂದೋಲನ ಆರಂಭವಾಗಿ 100 ವರ್ಷಗಳಾಗಿವೆ. ಈ ಸಮಯದಲ್ಲಿ ಅಲ್ಲೂರಿ ಸೀತಾರಾಮರಾಜು ಅವರ 125ನೇ ಜಯಂತಿಯನ್ನು ಸಂಭ್ರಮದಿಂದ ಆಚರಿಸುತ್ತಿದ್ದೇವೆ ಎಂದು ತಿಳಿಸಿದರು.

ಅಲ್ಲೂರಿ ಶೌರ್ಯದ ಪ್ರತೀಕ: ಅಲ್ಲೂರಿ ಸೀತಾರಾಮರಾಜು ಆದಿವಾಸಿಗಳ ಶೌರ್ಯ, ಧೈರ್ಯದ ಪ್ರತೀಕ. ಅಲ್ಲೂರಿ ಅವರ ರೋಮಾಂಚಕ ಜೀವನ ನಮಗೆಲ್ಲರಿಗೂ ಸ್ಫೂರ್ತಿಯಾಗಿದೆ. 'ಮನದೇ ರಾಜ್ಯ' ಎಂಬ ಘೋಷಣೆಯೊಂದಿಗೆ ಜನರನ್ನು ಒಟ್ಟುಗೂಡಿಸಿದ ಕೀರ್ತಿ ಅಲ್ಲೂರಿಗೆ ಸಲ್ಲುತ್ತದೆ. ಅವರು ಬ್ರಿಟಿಷರ ವಿರುದ್ಧ ವೀರೋಚಿತವಾಗಿ ಹೋರಾಡಿದರು. ಅಂದು ಅನೇಕ ಯುವಕರು ಬ್ರಿಟಿಷರ ವಿರುದ್ಧ ಹೋರಾಡಿದ್ದರು. ಅದರಂತೆ ಇಂದು ದೇಶದ ಅಭಿವೃದ್ಧಿಯಲ್ಲೂ ಯುವಕರ ಪಾಲ್ಗೊಳ್ಳುವಿಕೆ ಹೆಚ್ಚಾಗಬೇಕು ಎಂದು ಅವರ ಸಾಧನೆ ಸ್ಮರಿಸಿದರು.

ಅಲ್ಲೂರಿ ಸ್ಪೂರ್ತಿ ಪಡೆದು ಮುನ್ನಡೆದರೆ ನಮ್ಮನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಮೋದಿ

ಆಂಧ್ರದ ತ್ಯಾಗ ಬಲಿದಾನಿಗಳಿಗೆ ನಮನ: ಆಂಧ್ರ ರಾಜ್ಯವು ಅನೇಕ ದೇಶಭಕ್ತರ ಸಂತಾನಸ್ಥಾನವಾಗಿದೆ. ಪಿಂಗಳಿ ವೆಂಕಯ್ಯ, ಕನ್ನೆಗಂಟಿ ಹನುಮಾನ್, ಪೊಟ್ಟಿ ಶ್ರೀರಾಮುಲು, ವೀರೇಶಲಿಂಗಂ ಪಂತುಲು ಮುಂತಾದ ಮಹಾನ್ ವ್ಯಕ್ತಿಗಳ ನಾಡು ಆಂಧ್ರಪ್ರದೇಶ. ದೇಶಕ್ಕಾಗಿ ತ್ಯಾಗ ಬಲಿದಾನ ಮಾಡಿದ ಇಂತಹವರ ಕನಸುಗಳು ನನಸಾಗಬೇಕು. ಇದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ.

ಒಂದು ದೇಶ, ಒಂದು ಪರಿಕಲ್ಪನೆಯು ಯಾವಾಗಲೂ ದೇಶದ ಇತಿಹಾಸದ ಭಾಗವಾಗಿದೆ. ದೇಶಕ್ಕಾಗಿ ಅನೇಕ ಮಹಾನ್ ವ್ಯಕ್ತಿಗಳು ತ್ಯಾಗ ಮಾಡಿದ್ದಾರೆ. ಇಂತಹ ತ್ಯಾಗಗಳನ್ನು ನಿರಂತರವಾಗಿ ಸ್ಮರಿಸುತ್ತಾ ಮುನ್ನಡೆಯಬೇಕು. ಪ್ರತಿಯೊಬ್ಬರೂ ತಮ್ಮ ಸ್ವಾತಂತ್ರ್ಯ ಹೋರಾಟದ ಬಗ್ಗೆ ತಿಳಿದುಕೊಳ್ಳಬೇಕು. ಆ ಸ್ಫೂರ್ತಿಗಾಗಿ ನಾವು ಆಜಾದಿಕ ಅಮೃತ ಮಹೋತ್ಸವವನ್ನು ಆಚರಿಸುತ್ತಿದ್ದೇವೆ ಎಂದು ಮೋದಿ ತಿಳಿಸಿದರು.

ಆದಿವಾಸಿಗಳ ಅಭಿವೃದ್ಧಿ: ಆದಿವಾಸಿಗಳು ಹಾಗೂ ಯುವಕರು ಮತ್ತು ಮಹಿಳೆಯರಿಗೆ ಸಮಾನ ಅವಕಾಶ ಕಲ್ಪಿಸಲು ಕಳೆದ 8 ವರ್ಷಗಳಿಂದ ಹಲವು ಕಾರ್ಯಕ್ರಮಗಳನ್ನು ಮಾಡುತ್ತಿದ್ದೇವೆ. ರೈತರಿಗೆ ಎಲ್ಲ ರೀತಿಯಿಂದಲೂ ಬೆಂಬಲ ನೀಡುತ್ತೇವೆ. ಎಲ್ಲ ಸ್ವಾತಂತ್ರ್ಯ ಹೋರಾಟಗಾರರ ಕನಸನ್ನು ನನಸು ಮಾಡಲು ಎಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದೇವೆ. ನಾವು 'ಕೌಶಲ್ಯ ಭಾರತ' ಅಡಿ ಯುವಕರಿಗೆ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಗಳನ್ನು ನಡೆಸುತ್ತಿದ್ದೇವೆ.

ನಮ್ಮ ಉತ್ಪನ್ನಗಳನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯುವತ್ತ ಗಮನ ಹರಿಸಬೇಕು. ಅರಣ್ಯ ಪ್ರದೇಶದಲ್ಲಿ ಬೆಳೆಯುವ ಬಿದಿರನ್ನು ಕಟಾವು ಮಾಡಲು ಅವಕಾಶ ಕಲ್ಪಿಸಿದ್ದೇವೆ. ಅರಣ್ಯ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ನೀಡಿದ್ದೇವೆ. ಆದಿವಾಸಿಗಳಿಗೆ ಹಕ್ಕುಗಳನ್ನು ಒದಗಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಹೇಳಿದರು.

ಅಲ್ಲೂರಿ ಸ್ಮಾರಕ ಸ್ಥಾಪನೆ: ಹಿಂದುಳಿದ ಜಿಲ್ಲೆಗಳ ಅಭಿವೃದ್ಧಿಯ ಭಾಗವಾಗಿ ಕೆಲವು ಜಿಲ್ಲೆಗಳ ಅಭಿವೃದ್ಧಿಗೆ ಶ್ರಮಿಸುತ್ತಿದ್ದೇವೆ. ಉನ್ನತ ಮಟ್ಟದ ಶಿಕ್ಷಣಕ್ಕಾಗಿ ನಾವು ವ್ಯವಸ್ಥೆ ಮಾಡುತ್ತಿದ್ದೇವೆ. ಮಾತೃಭಾಷೆಯಲ್ಲಿ ಶಿಕ್ಷಣಕ್ಕಾಗಿ 750 ಏಕಲವ್ಯ ಶಾಲೆಗಳನ್ನು ಸ್ಥಾಪಿಸಲಾಗಿದೆ. ಅಲ್ಲೂರಿ ಸ್ಮಾರಕ ವಸ್ತುಸಂಗ್ರಹಾಲಯವನ್ನೂ ಸ್ಥಾಪಿಸಲಾಗುತ್ತಿದೆ. ನಮ್ಮ ದೇಶ ಹಲವು ಸವಾಲುಗಳನ್ನು ಎದುರಿಸುತ್ತಿದೆ.

ಸಮಸ್ಯೆಗಳ ವಿರುದ್ಧ ಹೋರಾಡುವ ತತ್ವವನ್ನು ಅಲ್ಲೂರಿ ಅವರಿಂದ ಕಲಿಯಬೇಕು. ಅಲ್ಲೂರಿ ಅವರ 125ನೇ ಜನ್ಮದಿನಾಚರಣೆಯ ಸಂದರ್ಭದಲ್ಲಿ ಅವರ ಚೇತನವನ್ನು ಮುನ್ನಡೆಸಬೇಕು. ಅಲ್ಲೂರಿ ಅವರ ಸ್ಪೂರ್ತಿ ಪಡೆದು ಮುನ್ನಡೆದರೆ ನಮ್ಮನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಸ್ಫೂರ್ತಿದಾಯಕ ಮಾತುಗಳನ್ನಾಡಿದರು.

ಇದನ್ನೂ ಓದಿ :ಬೆಂಗಳೂರಲ್ಲಿ ಅತ್ಯಾಚಾರಕ್ಕೆ ಯತ್ನಿಸಿದ ಕಿಡಿಗೇಡಿಗೆ ಥಳಿತ: ಯುವತಿ ರಕ್ಷಿಸಿದ ತೃತೀಯ ಲಿಂಗಿಗಳು

For All Latest Updates

TAGGED:

ABOUT THE AUTHOR

...view details