ಕರ್ನಾಟಕ

karnataka

By

Published : Mar 23, 2022, 12:44 PM IST

Updated : Mar 23, 2022, 1:48 PM IST

ETV Bharat / bharat

ಬಲಿದಾನ ದಿವಸ್ : ಮಹಾನ್ ದೇಶಭಕ್ತ ಭಗತ್ ಸಿಂಗ್ ಸ್ಮರಣೆ

ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಸುಖದೇವ್, ಭಗತ್ ಸಿಂಗ್, ರಾಜಗುರು, ಅವರುಗಳ ಹೆಸರು ಸದಾ ಸ್ಮರಣೀಯವಾಗಿದ್ದು, ಅವರು ದೇಶಕ್ಕಾಗಿ ತಮ್ಮ ಪ್ರಾಣ ತ್ಯಾಗ ಮಾಡಿದ ದಿನವನ್ನು ಬಲಿದಾನ ದಿವಸ್ ಎಂದು ಕರೆಯಲಾಗುತ್ತದೆ..

Special On Sardar Bhagat Singh Death Anniversary
92ನೇ ಬಲಿದಾನ ದಿವಸ್: ಮಹಾನ್ ದೇಶಭಕ್ತ ಭಗತ್ ಸಿಂಗ್ ಸ್ಮರಣೆ

ಇಡೀ ದೇಶದೆಲ್ಲೆಡೆ ಬಲಿದಾನ್​ ದಿವಸ್​ ಎಂದು ಆಚರಣೆ ಮಾಡಲಾಗುತ್ತದೆ. ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಸುಖದೇವ್, ಭಗತ್ ಸಿಂಗ್, ರಾಜಗುರು, ಅವರುಗಳ ಹೆಸರು ಸದಾ ಸ್ಮರಣೀಯವಾಗಿದೆ. ಈ ಮೂವರು ಕ್ರಾಂತಿಕಾರಿಗಳನ್ನು ಬ್ರಿಟಿಷರು 23ನೇ ಮಾರ್ಚ್ 1931ರಂದು ಗಲ್ಲಿಗೇರಿಸಿದ ಹಿನ್ನೆಲೆಯಲ್ಲಿ ಮಹಾನ್ ದೇಶಭಕ್ತರ ತ್ಯಾಗ, ಬಲಿದಾನದ ಸ್ಮರಣೆಗೆ ಈ ದಿನವನ್ನು ‘ರಾಷ್ಟ್ರೀಯ ಬಲಿದಾನ್ ದಿನ’ ಎಂದು ಆಚರಿಸಲಾಗುತ್ತದೆ.

1907ರ ಸೆಪ್ಟೆಂಬರ್ 28ರಂದು ಅವಿಭಜಿತ ಭಾರತದ ಲಿಯಾಲ್ಪುರದಲ್ಲಿ ಜನಿಸಿದ್ದ ಭಗತ್ ಸಿಂಗ್, ದೇಹವನ್ನು ಕೊಲ್ಲಬಹುದು. ಆದರೆ, ಬಲವಾದ ಮನಸ್ಸು, ಆಲೋಚನೆಗಳು ಅಮರವಾಗಿ ಉಳಿಯುತ್ತವೆ ಎಂದು ನಂಬಿದ್ದರು. ಅದರಂತೆ ತನ್ನ ಜೀವನದ ಮೂಲಕ ಸಾಬೀತುಪಡಿಸಿದ್ದರು. ಜನಸಾಮಾನ್ಯರಿಗಾಗಿ, ಸಾಮ್ರಾಜ್ಯಶಾಹಿಗಳನ್ನು ಕೆಳಗಿಳಿಸಿ ಕ್ರಾಂತಿಯಿಂದ ಬದುಕಲಿ ಎಂಬ ಘೋಷಣೆಗಳ ಮೂಲಕ ಸಿಂಗ್‌ ಸಾಮಾನ್ಯರ ಬೆಂಬಲಕ್ಕೆ ನಿಂತಿದ್ದವರು.

ಮಹಾನ್ ದೇಶಭಕ್ತ ಭಗತ್ ಸಿಂಗ್ ಸ್ಮರಣೆ

ತಮ್ಮ ಬರಹ, ಭಾಷಣಗಳ ಮೂಲಕ ಮೌಲಾನಾ ಹಸರತ್ ಮೊಹಾನಿಯ ಇಂಕ್ವಿಲಾಬ್ ಜಿಂದಾಬಾದ್ ಅನ್ನು ಜನಪ್ರಿಯಗೊಳಿಸಿದ್ದರು. ಭಾರತದಿಂದ ಬ್ರಿಟಿಷರನ್ನು ಓಡಿಸಲು 1928ರಲ್ಲಿ ಭಗತ್‌ ಸಿಂಗ್‌ ಪಣತೊಟ್ಟಿದ್ದರು. ಸೈಮನ್ ಆಯೋಗದ ಆಗಮನ ಹಾಗೂ ಮಹಾತ್ಮ ಗಾಂಧಿಯವರ ಅಹಿಂಸಾ ಚಳವಳಿ ಬೆಂಬಲಿಸಿದ್ದ ಲಾಲ್ ಲಜಪತ್ ರಾಯ್ ಅವರ ಮರಣವು ಭಗತ್ ಸಿಂಗ್ ಅವರ ಜೀವನದಲ್ಲಿ ನಿರ್ಣಾಯಕ ಕ್ಷಣವಾಗಿತ್ತು. 7 ಸದಸ್ಯರ ಸೈಮನ್ ಆಯೋಗದ ಆಗಮನವು ವ್ಯಾಪಕ ಪ್ರತಿಭಟನೆಗೆ ಕಾರಣವಾಯಿತು.

ಬ್ರಿಟಿಷರ ಹಿಂಸೆಗೆ ತಕ್ಕ ಪಾಠ ಕಲಿಸಲು ಅವರು ಇಡೀ ರಾಷ್ಟ್ರದ ಪರವಾಗಿ ನಿಂತರು. ವಸಾಹತುಶಾಹಿ ಪೊಲೀಸರ ಅನಾಗರಿಕತೆಗೆ ಪ್ರತೀಕಾರ ತೀರಿಸಿಕೊಳ್ಳಲು ನಿರ್ಧರಿಸಿದರು. ಅವರು ಎಜೆ ಸ್ಕಾಟ್ ಎಂದು ತಪ್ಪಾಗಿ ಭಾವಿಸಿದ ಸಾಮಾನ್ಯ ಪೊಲೀಸ್‌ ಸಾಂಡರ್ಸ್ ಅವರನ್ನು ಹೊಡೆದುರುಳಿಸಿ ದೇಶಭ್ರಷ್ಟರಾದರು.1930ರ ಅಕ್ಟೋಬರ್ 7 ರಂದು ನ್ಯಾಯಮಂಡಳಿಯು ಸಾಂಡರ್ಸ್ ಹತ್ಯೆಯಲ್ಲಿ ಭಗತ್ ಸಿಂಗ್, ಸುಖದೇವ್ ಹಾಗೂ ರಾಜಗುರು ತಪ್ಪಿತಸ್ಥರೆಂದು ಪರಿಗಣಿಸಿ ಮರಣದಂಡನೆ ವಿಧಿಸಿತು.

1931ರ ಮಾರ್ಚ್‌ 23ರಂದು ಲಾಹೋರ್ ಜೈಲಿನ ಹೊರಗೆ ಸಂಜೆ ಈ ಮೂವರು ಕ್ರಾಂತಿಕಾರಿಗಳನ್ನು ಗಲ್ಲಿಗೇರಿಸಿದರು. ಬ್ರಿಟಿಷ್ ಆಡಳಿತಗಾರರ ಕೋಪ ಮತ್ತು ಹತಾಶೆ ಅಲ್ಲಿಗೆ ನಿಲ್ಲಲಿಲ್ಲ. ಹುತಾತ್ಮರ ಶವಗಳನ್ನು ಅವರ ಕುಟುಂಬಗಳಿಗೆ ಹಸ್ತಾಂತರಿಸಲು ನಿರಾಕರಿಸಿ, ಜೈಲಿನ ಹಿಂಬದಿಯ ಗೋಡೆ ಒಡೆದು ಶವಗಳನ್ನು ಹೊರತೆಗೆದು ಹುಸೇನಿವಾಲಾದಲ್ಲಿ ಅವುಗಳನ್ನ ಸುಟ್ಟು ಸಟ್ಲೆಜ್ ನದಿಗೆ ಎಸೆದರು.

ಭಗತ್‌ ಸಿಂಗ್‌ ಅವರ ಪೂರ್ವಜರ ಮನೆಯನ್ನು ಈಗಲೂ ಪಾಕಿಸ್ತಾನದ ಲಾಹೋರ್‌ನ ಭಗತ್ ಸಿಂಗ್ ಸ್ಮಾರಕ ಪ್ರತಿಷ್ಠಾನವು ರಕ್ಷಿಸಿದೆ. ಲಾಹೋರ್ ಮೂಲದ ಭಗತ್ ಸಿಂಗ್ ಮೆಮೋರಿಯಲ್ ಫೌಂಡೇಶನ್ ಭಗತ್ ಸಿಂಗ್ ರಾಷ್ಟ್ರೀಯ ಹುತಾತ್ಮ ಸ್ಥಾನಮಾನ ನೀಡಬೇಕೆಂದು ಒತ್ತಾಯಿಸುತ್ತಿದೆ. ಭಗತ್ ಸಿಂಗ್ ಅವರ ಕೆಚ್ಚೆದೆಯ ಹೋರಾಟ ಭಾರತೀಯರು ಹೆಮ್ಮೆ ಪಡುವಂತದ್ದು.

ಇದನ್ನೂ ಓದಿ:ಕಾಮನ್‌ವೆಲ್ತ್ ಗೇಮ್ಸ್‌ ತರಬೇತಿಗಾಗಿ ಟರ್ಕಿಗೆ ತೆರಳಲಿರುವ ಒಲಂಪಿಕ್ ಚಿನ್ನದ ಹುಡುಗ 'ನೀರಜ್ ಛೋಪ್ರಾ'

Last Updated : Mar 23, 2022, 1:48 PM IST

ABOUT THE AUTHOR

...view details