ಕರ್ನಾಟಕ

karnataka

By

Published : Jan 21, 2023, 11:20 AM IST

ETV Bharat / bharat

ಅಪಹರಣದ ಕಥೆಕಟ್ಟಿ ತಂದೆಗೇ 2 ಲಕ್ಷ ರೂ ಹಣದ ಬೇಡಿಕೆ ಇಟ್ಟ ಮಗ!

ಉತ್ತರಪ್ರದೇಶದಲ್ಲಿ ನಕಲಿ ಅಪಹರಣ ಕೇಸ್ - ತನ್ನನ್ನೇ ಅಪಹರಣ ಮಾಡಿಕೊಂಡ ಯುವಕ - ಹಣಕ್ಕಾಗಿ ತಂದೆಗೆ ಬೇಡಿಕೆ - ವಿಡಿಯೋ ಕಾಲ್​ ಬೆದರಿಕೆಗೆ ಹೆದರಿ ಅಪಹರಣ ನಾಟಕ

son-conspired-to-kidnap-himself
ಅಪಹರಣ ಕಥೆಕಟ್ಟಿ ತಂದೆಗೇ 2 ಲಕ್ಷ ರೂ ಹಣದ ಬೇಡಿಕೆ ಇಟ್ಟ ಮಗ!

ಪ್ರಯಾಗ್‌ರಾಜ್:ತನಗೆ ಬರುತ್ತಿದ್ದ ಬೆದರಿಕೆ ಕರೆಗಳಿಂದ ತಪ್ಪಿಸಿಕೊಳ್ಳಲು ಯುವಕನೊಬ್ಬ ತಾನೇ ಅಪಹರಣಕಾರ ಎಂದು ಬಿಂಬಿಸಿಕೊಂಡು, ತಂದೆಯಿಂದ 2 ಲಕ್ಷ ರೂಪಾಯಿ ಬೇಡಿಕೆ ಇಟ್ಟು ಪೇಚಿಗೆ ಸಿಲುಕಿದ ಘಟನೆ ಉತ್ತರಪ್ರದೇಶದಲ್ಲಿ ಬೆಳಕಿಗೆ ಬಂದಿದೆ. ನಕಲಿ ಅಪಹರಣಕಾರನನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಯಾಗ್‌ರಾಜ್‌ನಲ್ಲಿ ವಾಸವಿದ್ದ ಆರೋಪಿ ಅಭಿಷೇಕ್ ತಿವಾರಿ, ತನ್ನ ತಂದೆ ಜ್ಯೋತಿಶ್ ತಿವಾರಿಗೆ ವಾಟ್ಸ್​ಆ್ಯಪ್​ ಕರೆ ಮಾಡಿ ಕೆಲವರು ತನ್ನನ್ನು ಕಪ್ಪುಬಟ್ಟೆಯಲ್ಲಿ ಸುತ್ತಿ ಅಪಹರಿಸಿದ್ದಾರೆ ಎಂದು ಹೇಳಿಕೊಂಡಿದ್ದಾನೆ.

ನಿರ್ಜನ ಪ್ರದೇಶದಲ್ಲಿ ತನ್ನನ್ನು ಇಡಲಾಗಿದೆ ಎಂದು ಅಪಹರಣಗೊಂಡ ಅಭಿಷೇಕ್​ ತಿಳಿಸಿದ್ದಾನೆ. ಬಳಿಕ ಅಪಹರಣಕಾರನಂತೆ 2 ಲಕ್ಷ ರೂಪಾಯಿ ಕೊಡಲು ಬೇಡಿಕೆ ಇಟ್ಟಿದ್ದಾನೆ. ಬಳಿಕ ಎರಡನೇ ಬಾರಿ ಕರೆ ಮಾಡಿ 2 ಲಕ್ಷ ನೀಡದಿದ್ದರೆ ಮಗನನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಲಾಗಿದೆ. ಅಪಹರಣಕಾರನ ಬೆದರಿಕೆಯಿಂದಾಗಿ ಅಭಿಷೇಕ್​ ಅವರ ತಂದೆ ಭಯಗೊಂಡು ಮಗ ಉಳಿದಿದ್ದ ಪ್ರಯಾಗ್​ರಾಜ್​ ಬಂದು ಪರಿಶೀಲಿಸಿದ್ದಾನೆ. ಅಲ್ಲಿ ಮಗ ಇಲ್ಲದಿರುವುದು ಭೀತಿ ಮೂಡಿಸಿದೆ. ಬಳಿಕ ಪುತ್ರ ಅಪಹರಣವಾಗಿದ್ದಾಗಿ ಪೊಲೀಸರಿಗೆ ದೂರು ನೀಡಿದ್ದಾರೆ.

ಅಪಹರಣಕಾರನ ಬೆನ್ನತ್ತಿದ್ದ ಪೊಲೀಸ್​:ಹಗಲು ಹೊತ್ತಿನಲ್ಲಿ ಅಪಹರಣದ ದೂರು ಪಡೆದ ಪೊಲೀಸರು ಚುರುಕಾಗಿದ್ದಾರೆ. ಕ್ರೈಂ ಬ್ರಾಂಚ್​ಗೂ ಕೂಡ ಪ್ರಕರಣದ ಮಾಹಿತಿ ನೀಡಲಾಗಿದೆ. ಬಳಿಕ ತನಿಖೆ ನಡೆಸಿ, ಅಪಹರಣಕಾರನನ್ನು ಹಿಡಿಯಬೇಕು ಎಂಬುವಷ್ಟರಲ್ಲಿ ಕತೆಯೇ ಬದಲಾಗಿದೆ. ಕಿಡ್ನ್ಯಾಪ್​ ಆಗಿದ್ದ ಅಭಿಷೇಕ್ ಅಪಹರಣದ ನಕಲಿ ನಾಟಕ ಬಯಲಾಗಿದೆ. ತನ್ನ ತಂದೆಯಿಂದ ತಾನೇ 2 ಲಕ್ಷ ರೂಪಾಯಿ ಸುಲಿಗೆಗೆ ಮುಂದಾಗಿದ್ದು ಗೊತ್ತಾಗಿದೆ.

ನಕಲಿ ಅಪಹರಣ ನಾಟಕ ಬಯಲು:ತನ್ನನ್ನು ಅಪಹರಣ ಮಾಡಲಾಗಿದೆ ಎಂದು ಬಿಂಬಿಸಿ ಪ್ರತಾಪ್‌ಗಢ ಜಿಲ್ಲೆಯಲ್ಲಿ ಅಡಗಿಕೊಂಡಿದ್ದ ಅಭಿಷೇಕ್ ತಿವಾರಿಯನ್ನು ಪೊಲೀಸರು ಪತ್ತೆ ಮಾಡಿದಾಗ ಆತನೊಬ್ಬನೇ ಸ್ಥಳದಲ್ಲಿ ಪತ್ತೆಯಾಗಿದ್ದ. ಅಪಹರಣಕಾರ ಮಾಡಿದ ತಂಡ, ಕಾರು ಅಲ್ಲಿರಲಿಲ್ಲ. ಅಭಿಷೇಕ್​ನನ್ನು ಹಿಡಿದು ವಿಚಾರಿಸಿದಾಗ ಪ್ರಕರಣದ ಅಸಲಿ ಸತ್ಯ ಬಯಲಾಗಿದೆ. ತಾನು ನಕಲಿ ವಿಡಿಯೋ ಕಾಲ್​ನಿಂದಾಗಿ ಬೆದರಿಕೆಗೆ ಒಳಗಾಗಿದ್ದೆ. ಹೀಗಾಗಿ ಹಣದ ಬೇಡಿಕೆ ಇಟ್ಟಿದ್ದೆ ಎಂಬ ಬಗ್ಗೆ ಬಾಯ್ಬಿಟ್ಟಿದ್ದಾನೆ.

ವಿಡಿಯೋ ಕಾಲ್​ ಬೆದರಿಕೆ:ಅಂಕಿತಾ ಶರ್ಮಾ ಎಂಬ ಹುಡುಗಿಯೊಂದಿಗೆ ಅಭಿಷೇಕ್​ ಫೇಸ್‌ಬುಕ್‌ನಲ್ಲಿ ಸ್ನೇಹ ಬೆಳೆಸಿಕೊಂಡಿದ್ದ. ಇದಾದ ಬಳಿಕ ಯುವತಿ ವಾಟ್ಸ್​ಆ್ಯಪ್​ ನಂಬರ್ ತೆಗೆದುಕೊಂಡು ವಿಡಿಯೋ ಕಾಲ್ ಮಾಡಿದ್ದಳು. ಈ ವೇಳೆ ಹುಡುಗಿ ಕಾಲ್​ನಲ್ಲಿ ವಿವಸ್ತ್ರಳಾಗಿದ್ದಳು. ಇದನ್ನು ಕಂಡ ಅಭಿಷೇಕ್ ಹೆದರಿ ಕಾಲ್ ಡಿಸ್ಕನೆಕ್ಟ್ ಮಾಡಿದ್ದ. ಇದಾದ ಸ್ವಲ್ಪ ಸಮಯದ ಬಳಿಕ ಇನ್ನೊಂದು ಕರೆ ಬಂದಾಗಲೇ ವಿಡಿಯೋ ರೆಕಾರ್ಡ್​ ಆಗಿದ್ದು ಗೊತ್ತಾಗಿದೆ.

ಯುವತಿಯೊಂದಿಗಿನ ನಗ್ನ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಲಾಗುವುದು ಎಂದು ಅಭಿಷೇಕ್​ಗೆ ಬೆದರಿಕೆ ಹಾಕಲಾಗಿದೆ. ಮಾನನಷ್ಟಕ್ಕೆ ಹೆದರಿದ ಅಭಿಷೇಕ್ ಬ್ಲ್ಯಾಕ್ ಮೇಲ್ ಮಾಡಿದವರಿಗೆ 30 ಸಾವಿರ ನೀಡುವುದಾಗಿ ಒಪ್ಪಿಕೊಂಡಿದ್ದ. ಇದರ ಬಳಿಕವೂ ಅಭಿಷೇಕ್​ಗೆ ನಿರಂತರ ಕರೆಗಳು ಬಂದಿವೆ. ತನ್ನನ್ನು ಪೊಲೀಸ್ ಅಧಿಕಾರಿ ಎಂದು ಪರಿಚಯಿಸಿಕೊಂಡ ವ್ಯಕ್ತಿ ಹೆಚ್ಚಿನ ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ.

ಇದರಿಂದಾಗಿ ಹಣ ಹೊಂದಿಸಲು ತಾನು ಅಪಹರಣವಾಗಿದ್ದಾಗಿ ನಾಟಕವಾಡಿದೆ. ತಂದೆಯಿಂದ ಹಣ ಪಡೆದುಕೊಳ್ಳಲು ಈ ರೀತಿ ಮಾಡಿದೆ ಎಂದು ಬಾಯ್ಬಿಟ್ಟಿದ್ದಾನೆ. ಇದರೊಂದಿಗೆ ಪೊಲೀಸರು ಅಭಿಷೇಕ್​ಗೆ ಬ್ಲ್ಯಾಕ್‌ಮೇಲ್​ ಮಾಡುತ್ತಿದ್ದ ತಂಡದ ಮೇಲೂ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ ಪೊಲೀಸ್​ ಅಧಿಕಾರಿ, ಬೆದರಿಕೆ ಕರೆಗಳಿಗೆ ಹೆದರಬೇಡಿ. ನಿಮ್ಮ ಹತ್ತಿರದ ಪೊಲೀಸ್ ಠಾಣೆಗೆ ಹೋಗಿ ಮಾಹಿತಿ ನೀಡಿ ಮತ್ತು ಕರೆ ಮಾಡುವ ಬ್ಲ್ಯಾಕ್‌ಮೇಲರ್ ಅನ್ನು ಹಿಡಿಯಲು ಪೊಲೀಸರಿಗೆ ಸಹಾಯ ಮಾಡಿ ಎಂದು ಸಲಹೆ ನೀಡಿದ್ದಾರೆ.

ಓದಿ:ಕಮರಿಗೆ ಉರುಳಿದ ಮಿನಿ ಬಸ್​; ಐವರ ದುರ್ಮರಣ, 15 ಮಂದಿಗೆ ಗಾಯ

ABOUT THE AUTHOR

...view details