ಕರ್ನಾಟಕ

karnataka

By ETV Bharat Karnataka Team

Published : Aug 31, 2023, 12:24 PM IST

Updated : Aug 31, 2023, 12:38 PM IST

ETV Bharat / bharat

ರಕ್ಷಾ ಬಂಧನದಂದು ನ್ಯಾಯಮೂರ್ತಿಗಳಾಗಿ ಆಯ್ಕೆ ಆದ ಅಕ್ಕ - ತಮ್ಮ: ಹಬ್ಬದ ಸಂಭ್ರಮ ಹೆಚ್ಚಿಸಿದ ನ್ಯಾಯಾಧೀಶರ ಮಕ್ಕಳು!

siblings become judges: ನಿವೃತ್ತ ನ್ಯಾಯಾಧೀಶ ಆರ್​ಬಿ ಸಿಂಗ್​ ಮೌರ್ಯ ಅವರ ಮಕ್ಕಳು ನ್ಯಾಯಾಂಗ ಸೇವಾ ಪರೀಕ್ಷೆಯಲ್ಲಿ ತೇರ್ಗಡೆ ಆಗಿದ್ದಾರೆ.

siblings become judges on Rakshabandhan day in Agra
ರಕ್ಷಾಬಂಧನದಂದು ನ್ಯಾಯಮೂರ್ತಿಗಳಾದ ಅಕ್ಕ ತಮ್ಮ

ಆಗ್ರಾ (ಉತ್ತರ ಪ್ರದೇಶ): ದೇಶಾದ್ಯಂತ ನಿನ್ನೆ ರಕ್ಷಾಬಂಧನ ಹಬ್ಬದ ಕಳೆಕಟ್ಟಿತ್ತು. ಇಂದು ಕೂಡ ಈ ವಿಶೇಷ ದಿನವನ್ನು ಆಚರಿಸಲಾಗುತ್ತಿದೆ. ಆಗ್ರಾದ ನಿವೃತ್ತ ನ್ಯಾಯಾಧೀಶರ ಮಕ್ಕಳು ರಕ್ಷಾಬಂಧನದ ಕಳೆ ಹೆಚ್ಚಿಸಿದ್ದಾರೆ. ಹೌದು, ಅಕ್ಕ - ತಮ್ಮ ಒಂದೇ ದಿನ ನ್ಯಾಯಮೂರ್ತಿಗಳಾಗಿ ಹೊರಹೊಮ್ಮಿದ್ದಾರೆ. ವಿಷಯ ತಿಳಿದ ಕುಟುಂಬಸ್ಥರು, ಆಪ್ತರು, ಪರಿಚಯಿಸ್ಥರು ಸಂಭ್ರಮಿಸಿದ್ದಾರೆ. ಅಕ್ಕ ತಮ್ಮ ಮೊದಲ ಪ್ರಯತ್ನದಲ್ಲೇ ಯಶಸ್ಸು ಕಂಡು ಗಮನ ಸೆಳೆದಿದ್ದಾರೆ.

ರಕ್ಷಾಬಂಧನದಂದು ನ್ಯಾಯಮೂರ್ತಿಗಳಾದ ಅಕ್ಕ ತಮ್ಮ

ಗುರಿ ಮತ್ತು ಕಠಿಣ ಪರಿಶ್ರಮ ಅಗತ್ಯ:ಈ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿರುವ ನಿವೃತ್ತ ನ್ಯಾಯಾಧೀಶರ ಮಕ್ಕಳು, ''ಯಶಸ್ಸಿಗೆ ಯಾವುದೇ ಶಾರ್ಟ್ ಕಟ್​ ಇಲ್ಲ. ಗುರಿ ಮತ್ತು ಕಠಿಣ ಪರಿಶ್ರಮದಿಂದ ಈ ಸಾಧನೆ ಮಾಡಬಹುದು. ಸಂಪೂರ್ಣ ಸಮರ್ಪಣೆ ಜೊತೆಗೆ ಗಟ್ಟಿ ಗುರಿ ಹೊಂದುವ ಮೂಲಕ ನಿಮ್ಮ ಸಿದ್ಧತೆ ಪ್ರಾರಂಭಿಸಿ'' ಎಂದು ತಮ್ಮ ಮನದಾಳದ ಮಾತು ಹೇಳಿ ಸಲಹೆ ನೀಡಿದ್ದಾರೆ.

ಆಗ್ರಾದ ಖಂಡೌಲಿ ಪೊಲೀಸ್​ ಠಾಣೆಎ ವ್ಯಾಪ್ತಿಯ ನಾಗ್ಲಾ ಅರ್ಜುನ್​​ ನಿವಾಸಿ ಆರ್​ಬಿ ಸಿಂಗ್​ ಮೌರ್ಯ ಅವರು ನಿವೃತ್ತ ನ್ಯಾಯಾಧೀಶರು. ಅವರ ಪುತ್ರಿ ಶೈಲಜಾ (25) ಮತ್ತು ಪುತ್ರ ಸುಧಾಂಶ್​​ (22) ಉತ್ತರ ಪ್ರದೇಶ ನ್ಯಾಯಾಂಗ ಸೇವೆಗೆ ಆಯ್ಕೆ ಆಗಿದ್ದಾರೆ. ಉತ್ತರ ಪ್ರದೇಶ ನ್ಯಾಯಾಂಗ ಸೇವಾ ಪರೀಕ್ಷಾ ಫಲಿತಾಂಶದಲ್ಲಿ ಶೈಲಜಾ ಅವರು 51 ನೇ ರ‍್ಯಾಂಕ್​ ಪಡೆದರೆ, ಸುಧಾಂಶ್​​ 276 ನೇ ರ‍್ಯಾಂಕ್​ ಗಳಿಸಿಕೊಂಡಿದ್ದಾರೆ.

ಅಕ್ಕ ತಮ್ಮ ಮೊದಲ ಪ್ರಯತ್ನದಲ್ಲೇ (ಪರೀಕ್ಷೆ) ಯಶಸ್ಸು ಕಂಡಿದ್ದಾರೆ. ಸಹೋದರ ಸಹೋದರಿ ಮನೆಯಲ್ಲೇ ಓದುತ್ತಿದ್ದರು. ರಕ್ಷಾಬಂಧನ ದಿನದಂದು ಹೊರಬಿದ್ದ ಫಲಿತಾಂಶದ ಪ್ರಕಾರ, ಇವರು ನ್ಯಾಯಮೂರ್ತಿಗಳಾಗಿ ಆಯ್ಕೆ ಆಗಿದ್ದು, ಕುಟುಂಬದಲ್ಲಿ ಸಂತಸ ಮನೆ ಮಾಡಿದೆ. ಶೈಲಜಾ ಮತ್ತು ಸುಧಾಂಶ್​ ಉತ್ತರ ಪ್ರದೇಶದ ನ್ಯಾಯಾಂಗ ಸೇವೆಯಲ್ಲಿ ಸಿವಿಲ್​ ನ್ಯಾಯಾಧೀಶರಾಗಿ (ಕಿರಿಯ ವಿಭಾಗ) ಆಯ್ಕೆ ಆಗಿದ್ದಾರೆ. ​ ​

ಇದನ್ನೂ ಓದಿ:ನೆಲ್ಲೈನಲ್ಲಿ ಗಗನಯಾನ ಎಂಜಿನ್​​​​​ನ ಪರೀಕ್ಷಾರ್ಥ ಪ್ರಯೋಗ ಯಶಸ್ವಿ : ಇಸ್ರೋ

ಭಯ ಬೇಡ, ಗುರಿ ಹೊಂದಿಸಿ: ಉತ್ತಮ ಗುರಿ ಹೊಂದುವಂತೆ ಯುವಕರಿಗೆ ಶೈಲಜಾ ಮತ್ತು ಸುಧಾಂಶ್​​ ಅವರು ಸಲಹೆ ನೀಡಿದ್ದಾರೆ. ಗಾಬರಿಯಾಗಬೇಡಿ, ನಿಮ್ಮ ಗುರಿಗಳನ್ನು ಹೊಂದಿಸಿಕೊಳ್ಳಿ. ಸಂಪೂರ್ಣ ಏಕಾಗ್ರತೆಯಿಂದ ಅಧ್ಯಯನ ಮಾಡಿ. ಕಠಿಣ ಪರಿಶ್ರಮ ಖಂಡಿತವಾಗಿಯೂ ಫಲಿತಾಂಶ ನೀಡುತ್ತದೆ. ಯಶಸ್ಸಿಗೆ ಯಾವುದೇ ಶಾರ್ಟ್​ ಕಟ್​ ಇಲ್ಲ. ಮನಸ್ಸಿಟ್ಟು, ಕಷ್ಟಪಟ್ಟು ಕೆಲಸ ಮಾಡಿ ಎಂದು ತಿಳಿಸಿದ್ದಾರೆ. ಪಿಯುಸಿ ಬಳಿಕ ಶೈಲಜಾ ಅವರು ಜಡ್ಜ್ ಆಗುವ ಗುರಿ ಹೊಂದಿದರು. ತಂದೆ, ಅಣ್ಣ ನನಗೆ ಸ್ಫೂರ್ತಿ. ಅವರನ್ನು ನೋಡಿ ಜಡ್ಜ್ ಆಗುವ ಗುರಿ ಹೊಂದಿದೆ. ನಾನು, ನನ್ನ ಕಿರಿಯ ಸಹೋದರ ಸುಧಾಂಶ್​ ಮನೆಯಲ್ಲೇ ಗುರಿ ಸಾಧನೆಗೆ ಬೇಕಾದ ಅಭ್ಯಾಸ ಮಾಡುತ್ತಿದ್ದೆವು. ಮೊದಲು ನಾವಿಬ್ಬರು ಚರ್ಚೆ ನಡೆಸುತ್ತಿದ್ದೆವು. ಬಳಿಕ ಅಧ್ಯಯನಕ್ಕೆ ತಂದೆ, ಅಣ್ಣ ಮಾರ್ಗದರ್ಶನ ನೀಡುತ್ತಿದ್ದರು ಎಂದು ತಿಳಿಸಿದರು.

ಇದನ್ನೂ ಓದಿ:Raksha Bandhan: ರಕ್ಷಾಬಂಧನ ಆಚರಿಸಿದ ರಿಷಬ್​ ಶೆಟ್ಟಿ ಮಕ್ಕಳು - ಅಣ್ಣ ತಂಗಿಯ​ ಕ್ಯೂಟ್​ ಫೋಟೋಗಳಿಲ್ಲಿವೆ

ಅಣ್ಣ, ಅಪ್ಪ ನ್ಯಾಯಾಧೀಶರು:ಇವರ ಹಿರಿಯ ಸಹೋದರ ಅರ್ಜಿತ್​ ಸಿಂಗ್​​ ಕೂಡ ನ್ಯಾಯಾಧೀಶರು. ಭದೋಹಿಯಲ್ಲಿ ಸಿವಿಲ್​​ ನ್ಯಾಯಾಧೀಶರಾಗಿ ನೇಮಕಗೊಂಡಿದ್ದಾರೆ. ಕುಟುಂಬದಲ್ಲೀಗ ಓರ್ವ ನಿವೃತ್ತ ನ್ಯಾಯಾಧೀಶರು ಮತ್ತು ಮೂವರು ಹಾಲಿ ನ್ಯಾಯಾಧೀಶರಿದ್ದಾರೆ. ತಂದೆ ಜುಲೈನಲ್ಲಿ ಇತಾಹ್​ ಜಿಲ್ಲಾ ನ್ಯಾಯಾಧೀಶ ಸ್ಥಾನದಿಂದ ನಿವೃತ್ತರಾಗಿದ್ದಾರೆ.

Last Updated : Aug 31, 2023, 12:38 PM IST

ABOUT THE AUTHOR

...view details