ವಿಶಾಖಪಟ್ಟಣಂ (ಆಂಧ್ರಪ್ರದೇಶ):ಧೈರ್ಯವಂತ ಸಬ್ಇನ್ಸ್ಪೆಕ್ಟರ್ ಒಬ್ಬರು ಕೆರೆಗೆ ಹಾರಿ ಭಾಗಶಃ ಕೊಳೆತ ಸ್ಥಿತಿಯಲ್ಲಿದ್ದ ಮೃತದೇಹವನ್ನು ಹೊರತಂದಿರುವ ಘಟನೆ ಆಂಧ್ರಪ್ರದೇಶದ ವಿಶಾಖಪಟ್ಟಣಂ ಜಿಲ್ಲೆಯಲ್ಲಿ ನಡೆದಿದೆ.
Video: ಕೆರೆಗೆ ಹಾರಿ ಮೃತದೇಹ ಹೊರತಂದ ಸಬ್ ಇನ್ಸ್ಪೆಕ್ಟರ್ - Andhra Pradesh crime news
ಆಂಧ್ರಪ್ರದೇಶದ ವಿಶಾಖಪಟ್ಟಣಂ ಜಿಲ್ಲೆಯಲ್ಲಿ ಸಬ್ ಇನ್ಸ್ಪೆಕ್ಟರ್ ಒಬ್ಬರು ಕೆರೆಗೆ ಹಾರಿ ಭಾಗಶಃ ಕೊಳೆತ ಸ್ಥಿತಿಯಲ್ಲಿದ್ದ ಮೃತದೇಹವನ್ನು ಹೊರತೆಗೆದಿದ್ದಾರೆ.
![Video: ಕೆರೆಗೆ ಹಾರಿ ಮೃತದೇಹ ಹೊರತಂದ ಸಬ್ ಇನ್ಸ್ಪೆಕ್ಟರ್ SI jumped into the lake bring out dead body](https://etvbharatimages.akamaized.net/etvbharat/prod-images/768-512-12682981-thumbnail-3x2-megha.jpg)
ಕೆರೆಗೆ ಹಾರಿ ಮೃತದೇಹ ಹೊರತಂದ ಸಬ್ ಇನ್ಸ್ಪೆಕ್ಟರ್
ವಿಶಾಖಪಟ್ಟಣಂನ ಮಾಡುಗುಲಾದಲ್ಲಿರುವ ಕೆರೆಯೊಂದರಲ್ಲಿ ಮಂಗಳವಾರ ರಾತ್ರಿ ಅಪರಿಚಿತ ವ್ಯಕ್ತಿಯೊಬ್ಬರ ಮೃತದೇಹ ಪತ್ತೆಯಾಗಿದೆ. ಆದರೆ, ಯಾರೊಬ್ಬರೂ ಕೂಡ ಕೆರೆಗೆ ಜಿಗಿದು ಶವವನ್ನು ಹೊರತೆಗೆಯುವ ಸಾಹಸಕ್ಕೆ ಕೈ ಹಾಕಲಿಲ್ಲ. ಈ ವೇಳೆ ಸಬ್ ಇನ್ಸ್ಪೆಕ್ಟರ್ ಪಿ.ರಾಮರಾವ್ ಕೆರೆಗೆ ಹಾರಿ ಮೃತದೇಹವನ್ನು ದಡದವರೆಗೆ ಎಳೆದು ತಂದಿದ್ದಾರೆ.
ಕೆರೆಗೆ ಹಾರಿ ಮೃತದೇಹ ಹೊರತಂದ ಸಬ್ ಇನ್ಸ್ಪೆಕ್ಟರ್
ರಾಮರಾವ್ ಅವರಿಗೆ ಮತ್ತೊಬ್ಬ ಸಬ್ಇನ್ಸ್ಪೆಕ್ಟರ್ ರಾಮಕೃಷ್ಣ ಹಾಗೂ ಕಾನ್ಸ್ಟೇಬಲ್ ವೆಂಕಟರಾವ್ ಸಹಕರಿಸಿದ್ದಾರೆ. ರಾಮ ರಾವ್ರ ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಇನ್ನು ಅಪರಿಚಿತ ವ್ಯಕ್ತಿಯ ಸಾವಿನ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.