ಲೂಧಿಯಾನ (ಪಂಜಾಬ್): ಪಂಜಾಬಿನ ಪ್ರಮುಖ ಹಬ್ಬವಾದ ಲೋಹ್ರಿ ಅಂಗವಾಗಿ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ಗುರುವಾರ ಮಧ್ಯಾಹ್ನ ಸಣ್ಣ ವಿರಾಮ ಪಡೆಯಲಿದೆ. ಯಾತ್ರೆಯಲ್ಲಿ ಭಾಗವಹಿಸುವವರು ಮತ್ತು ಮುಖಂಡರು ಪಂಜಾಬಿ ಹಬ್ಬವಾದ ಲೋಹ್ರಿ ಆಚರಣೆಗೆ ಅನುವು ಮಾಡಿಕೊಡಲು ಯಾತ್ರೆಗೆ ವಿರಾಮ ನೀಡಲಾಗುತ್ತಿದೆ. ಲೂಧಿಯಾನದ ಖನ್ನಾದಿಂದ ಯಾತ್ರೆ ಭಾರತ್ ಜೋಡೊ ಯಾತ್ರೆ ಪುನರಾರಂಭಗಿದೆ. ಯಾತ್ರೆಯು ದೋರಾಹಾ, ಸಾಹ್ನೆವಾಲ್ ಮತ್ತು ಧಂಡಾರಿ ಮೂಲಕ ನಗರದ ಸಮ್ರಾಲಾ ಚೌಕ್ ತಲುಪಲಿದೆ.
ಲೂಧಿಯಾನ ಸಂಸದ ರವನೀತ್ ಸಿಂಗ್ ಬಿಟ್ಟು ಕೂಡ ಯಾತ್ರೆಯಲ್ಲಿ ರಾಹುಲ್ ಗಾಂಧಿ ಜೊತೆ ಹೆಜ್ಜೆ ಹಾಕಲಿದ್ದಾರೆ. ಮಧ್ಯಾಹ್ನ ಸಮರಲಾ ಚೌಕ್ನಲ್ಲಿ ಯಾತ್ರೆ ಮುಕ್ತಾಯಗೊಂಡಿದ್ದು, ಇಂದು ಸಂಜೆ ಪಾದಯಾತ್ರೆ ಇರುವುದಿಲ್ಲ. ಲೋಹ್ರಿ ಉತ್ಸವದ ಕಾರಣದಿಂದ ಯಾತ್ರೆಯಲ್ಲಿ ಭಾಗವಹಿಸಿದ್ದವರು ಜನವರಿ 13 ರಂದು ವಿರಾಮ ತೆಗೆದುಕೊಳ್ಳಲಿದ್ದಾರೆ ಮತ್ತು ಜನವರಿ 14 ರಂದು ಯಾತ್ರೆ ಪುನರಾರಂಭಿಸುತ್ತಾರೆ. ಯಾತ್ರೆಯು ಬುಧವಾರ ಪಂಜಾಬ್ಗೆ ಪ್ರವೇಶಿಸಿದೆ. ಯಾತ್ರೆಯಲ್ಲಿ ಭಾಗವಹಿಸಿರುವವರು ಫತೇಘರ್ ಸಾಹಿಬ್ನಲ್ಲಿರುವ ಗುರುದ್ವಾರದಲ್ಲಿ ನಮನ ಸಲ್ಲಿಸಿದರು. ಭಾರತ್ ಜೋಡೊ ಯಾತ್ರೆಯ ಪಂಜಾಬ್ ಘಟ್ಟ ಆರಂಭದ ಸಂಕೇತವಾಗಿ ಹರಿಯಾಣದ ಕಾಂಗ್ರೆಸ್ ನಾಯಕರು ಸಿರ್ಹಿಂದ್ನಲ್ಲಿ ಪಂಜಾಬ್ನ ಕಾಂಗ್ರೆಸ್ ನಾಯಕರಿಗೆ ಭಾರತದ ರಾಷ್ಟ್ರ ಧ್ವಜವನ್ನು ಹಸ್ತಾಂತರಿಸಿದರು.
ನಮ್ಮ ಯಾತ್ರೆ ಏಕತೆ ಸಂದೇಶ ಸಾರುತ್ತಿದೆ:ಬುಧವಾರ ಸಿರ್ಹಿಂದ್ನಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ರಾಹುಲ್, ಬಿಜೆಪಿ ಮತ್ತು ಆರ್ಎಸ್ಎಸ್ ವಿರುದ್ಧ ವಾಗ್ದಾಳಿ ನಡೆಸಿದರು. ಬಿಜೆಪಿ ಮತ್ತು ಆರ್ಎಸ್ಎಸ್ ಜಾತಿ ಮತ್ತು ಧರ್ಮದ ಹೆಸರಿನಲ್ಲಿ ಜನರನ್ನು ಪರಸ್ಪರ ಎತ್ತಿಕಟ್ಟುತ್ತಿವೆ. ನಾವು ಜನರ ನಡುವೆ ಶಾಂತಿ ಮತ್ತು ಪ್ರೀತಿಗಾಗಿ ಪ್ರಯಾಣ ಪ್ರಾರಂಭಿಸಿದ್ದೇವೆ. ಈ ಯಾತ್ರೆ ಏಕತೆಯ ಸಂದೇಶ ಸಾರುತ್ತದೆ ಎಂದರು.