ಕರ್ನಾಟಕ

karnataka

By

Published : Mar 21, 2022, 8:12 PM IST

ETV Bharat / bharat

ನೋಯ್ಡಾದಲ್ಲಿ ದೇಗುಲಕ್ಕೆ ನುಗ್ಗಿ ಶಿವಲಿಂಗ ವಿರೂಪ: ದುಷ್ಕರ್ಮಿಗಳ ವಿರುದ್ಧ ಕ್ರಮಕ್ಕೆ ಒತ್ತಾಯ

ಗ್ರಾಮದ ಜನರ ಮಧ್ಯೆ ದ್ವೇಷ ಭಾವನೆ ಹುಟ್ಟಿಸುವ ಉದ್ದೇಶದಿಂದ ಶಿವನ ದೇವಸ್ಥಾನಕ್ಕೆ ತೀವ್ರ ಸ್ವರೂಪದಲ್ಲಿ ಹಾನಿ ಉಂಟು ಮಾಡಿರುವ ದುಷ್ಕರ್ಮಿಗಳು, ಶಿವಲಿಂಗವನ್ನು ವಿರೂಪಗೊಳಿಸಿದ್ದಾರೆ.

Noida temple vandalized in Noida
Noida temple vandalized in Noida

ನೋಯ್ಡಾ(ಉತ್ತರ ಪ್ರದೇಶ):ಗ್ರಾಮಸ್ಥರಲ್ಲಿ ದ್ವೇಷ ಭಾವನೆ ಹುಟ್ಟಿಸುವ ಉದ್ದೇಶದಿಂದ ದುಷ್ಕರ್ಮಿಗಳು ಶಿವನ ದೇವಸ್ಥಾನಕ್ಕೆ ಹಾನಿ ಮಾಡಿರುವ ಘಟನೆ ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದಿದೆ.

ನೋಯ್ಡಾದ ಸೆಕ್ಟರ್​​ 63ರ ಬರಹಂಪುರ ಗ್ರಾಮದಲ್ಲಿ ಕಳೆದ ರಾತ್ರಿ ದೇವಸ್ಥಾನದ ಒಳನುಗ್ಗಿ ಶಿವನ ವಿಗ್ರಹ ಹಾಗೂ ಶಿವಲಿಂಗ ವಿರೂಪಗೊಳಿಸಿದ್ದಾರೆ. ಬೆಳಗ್ಗೆ ದೇವಸ್ಥಾನಕ್ಕೆ ಗ್ರಾಮಸ್ಥರು ಭೇಟಿ ನೀಡಿದಾಗ ಘಟನೆ ಬೆಳಕಿಗೆ ಬಂದಿದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ:'ಪದ್ಮಶ್ರೀ' ಪಡೆದು ರಾಷ್ಟ್ರಪತಿ, ಪ್ರಧಾನಿ ಪಾದಗಳಿಗೆ ವಂದಿಸಿದ 125 ವರ್ಷದ ಸ್ವಾಮಿ ಶಿವಾನಂದರು!: ವಿಡಿಯೋ

ದೇವಸ್ಥಾನದೊಳಗೆ ರಕ್ತದ ಕಲೆ ಸಹ ಪತ್ತೆಯಾಗಿದ್ದು, ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿರುವ ಪೊಲೀಸರು ಸ್ಥಳೀಯ ಸಿಸಿಟಿವಿ ದೃಶ್ಯಾವಳಿ ವಶಕ್ಕೆ ಪಡೆದು ಪರಿಶೀಲನೆ ನಡೆಸಿದ್ದಾರೆ. ಆರೋಪಿಗಳಿಗೆ ಶೋಧಕಾರ್ಯ ಮುಂದುವರೆಸಿದ್ದಾರೆ.

ABOUT THE AUTHOR

...view details