ಕರ್ನಾಟಕ

karnataka

ಕೇಂದ್ರ ಸಚಿವ​ ರಾಣೆ ಮನೆಗೆ ನುಗ್ಗಿ ಕೊಲೆ ಮಾಡುವೆ: ಶಿವಸೇನೆ ಶಾಸಕನಿಂದ ಜೀವ ಬೆದರಿಕೆ

ಕೇಂದ್ರ ಸಚಿವ ನಾರಾಯಣ್​ ರಾಣೆ ಅವರಿಗೆ ನೀಡಿರುವ ಪೊಲೀಸ್​ ರಕ್ಷಣೆ ಹಿಂದಕ್ಕೆ ಪಡೆದುಕೊಂಡರೆ ಅವರ ಮನೆಗೆ ನುಗ್ಗಿ ನಾನೇ ಅವರನ್ನ ಕೊಲೆ ಮಾಡುವೆ ಎಂದು ಶಿವಸೇನೆ ಶಾಸಕನೋರ್ವ ವಿವಾದಾತ್ಮಕ ಹೇಳಿಕೆ ನೀಡಿದ್ದು, ಇದು ಚರ್ಚೆಗೆ ಗ್ರಾಸವಾಗಿದೆ.

By

Published : Aug 25, 2021, 7:20 PM IST

Published : Aug 25, 2021, 7:20 PM IST

Narayan Rane
Narayan Rane

ಮುಂಬೈ:ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಬಗ್ಗೆ ವಿವಾದಿತ ಹೇಳಿಕೆ ನೀಡಿ ಬಂಧನಕ್ಕೊಳಗಾಗಿ, ಬಿಡುಗಡೆ ಆಗಿರುವ ಕೇಂದ್ರ ಸಚಿವ ನಾರಾಯಣ್​ ರಾಣೆ ಪ್ರಕರಣ ಇದೀಗ ಮಹಾರಾಷ್ಟ್ರದಲ್ಲಿ ಬಿಜೆಪಿ-ಶಿವಸೇನೆ ನಡುವಿನ ಹಗ್ಗ-ಜಗ್ಗಾಟಕ್ಕೆ ಕಾರಣವಾಗಿದೆ. ಇದೇ ವಿಚಾರವನ್ನಿಟ್ಟುಕೊಂಡು ಸಾಮಾಜಿಕ ಜಾಲತಾಣದಲ್ಲೂ ಎರಡು ಪಕ್ಷಗಳ ನಡುವೆ ಜಟಾಪಟಿ ನಡೆಯುತ್ತಿದೆ.

ಶಿವಸೇನೆ ಶಾಸಕನಿಂದ ಜೀವ ಬೆದರಿಕೆ

ನಾರಾಯಣ್​ ರಾಣೆ ಅವರಿಗೆ ಜಾಮೀನು ಸಿಗುತ್ತಿದ್ದಂತೆ ಅವರ ಮಗ, ಶಾಸಕ ನಿತೀಶ್ ರಾಣೆ ಸಾಮಾಜಿಕ ಜಾಲತಾಣ ಟ್ವಿಟರ್​ನಲ್ಲಿ ಶಿವಸೇನೆಗೆ ವಾರ್ನ್​ ಮಾಡಿರುವ ರೀತಿಯಲ್ಲಿರುವ ವಿಡಿಯೋ ಹಾಕಿದ್ದಾರೆ. 23 ಸೆಕೆಂಡ್​ಗಳ ಈ ವಿಡಿಯೋ 'ರಾಜನೀತಿ' ಸಿನಿಮಾದ ತುಣುಕಾಗಿದೆ. ಇದರಲ್ಲಿ ನಟ ಮನೋಜ್​ ವಾಜಪೇಯಿ 'ಸರಿಯಾದ ಪ್ರತ್ಯುತ್ತರ ಸಿಗಲಿದೆ' ಎಂದು ಹೇಳಿರುವ ಡೈಲಾಗ್​ ಇದೆ.

ಇದಕ್ಕೆ ಟ್ವಿಟರ್ ಮೂಲಕವೇ ತಿರುಗೇಟು ನೀಡಿರುವ ಶಿವಸೇನೆ ವಕ್ತಾರ ಸಂಜಯ್​ ರಾವತ್​, ನಿತೀಶ್ ರಾಣೆ ಟಾರ್ಗೆಟ್ ಮಾಡಿ ಫೋಟೋವೊಂದನ್ನ ಶೇರ್ ಮಾಡಿದ್ದಾರೆ. ಇದರಲ್ಲಿ ಹುಲಿ ತನ್ನ ಬಾಯಲ್ಲಿ ಕೋಳಿ ಹಿಡಿದುಕೊಂಡಿದೆ. ಇದರ ಮಧ್ಯೆ ಎರಡು ಪಕ್ಷದ ಕಾರ್ಯಕರ್ತರು ಜಟಾಪಟಿ ನಡೆಸುತ್ತಿರುವ ಘಟನೆ ಕೂಡ ಮಹಾರಾಷ್ಟ್ರದ ವಿವಿಧ ಪ್ರದೇಶಗಳಲ್ಲಿ ನಡೆದಿರುವುದಾಗಿ ವರದಿಯಾಗಿದೆ.

ಕೇಂದ್ರ ಸಚಿವ ನಾರಾಯಣ್​ ರಾಣೆಗೆ ಈಗಾಗಲೇ ಕೋರ್ಟ್​ನಿಂದ ಜಾಮೀನು ಸಿಕ್ಕಿದ್ದು, ಮುಂದಿನ ಆದೇಶದವರೆಗೆ ಅವರ ವಿರುದ್ಧ ಮುಂಬೈ ಪೊಲೀಸರು ಯಾವುದೇ ರೀತಿಯ ಕ್ರಮ ಕೈಗೊಳ್ಳದಂತೆ ಬಾಂಬೆ ಹೈಕೋರ್ಟ್​​ ಸೂಚನೆ ನೀಡಿದೆ.

ನಾರಾಯಣ್​ ರಾಣೆಗೆ ಶಾಸಕನಿಂದ ಜೀವ ಬೆದರಿಕೆ

ಮುಖ್ಯಮಂತ್ರಿ ವಿರುದ್ಧ ನಾರಾಯಣ್​ ರಾಣೆ ನೀಡಿರುವ ಹೇಳಿಕೆಗೆ ಇನ್ನಿಲ್ಲದ ಆಕ್ರೋಶ ವ್ಯಕ್ತವಾಗುತ್ತಿದ್ದು, ಜಾಮೀನು ಮೇಲೆ ರಿಲೀಸ್​ ಆಗಿದ್ದರೂ ಕೂಡ ಶಿವಸೇನೆ ತನ್ನ ಆಕ್ರೋಶ ಹೊರಹಾಕುತ್ತಿದೆ. ಇದರ ಬೆನ್ನಲ್ಲೇ ಹಿಂಗೋಳಿಯ ಶಾಸಕ ಸಂತೋಷ್ ಬಂಗಾರ್​, ಕೇಂದ್ರ ಸಚಿವರಿಗೆ ಬೆದರಿಕೆ ಹಾಕಿದ್ದಾರೆ.

ಇದನ್ನೂ ಓದಿರಿ: ನನ್ನ ತಪ್ಪೇನು? ಯೋಗಿ ವಿರುದ್ಧ ಠಾಕ್ರೆ ಹೇಳಿಕೆ ನೆನಪಿಸಿದ ರಾಣೆ!... ಅಂದು ಉದ್ಧವ್​ ಬಳಸಿದ ಪದ ಯಾವುದು?

ನಾರಾಯಣ್​ ರಾಣೆ ಅವರಿಗೆ ನೀಡಿರುವ ಪೊಲೀಸ್​ ರಕ್ಷಣೆ ತೆಗೆದು ಹಾಕಿ, ಅವರ ಮನೆಗೆ ಹೋಗಿ ನಾನೇ ಕೊಲೆ ಮಾಡುತ್ತೇನೆ ಎಂದಿದ್ದಾರೆ. ಈ ಹೇಳಿಕೆಗೆ ಬಿಜೆಪಿಯಿಂದ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ. ಇದೀಗ ಶಿವಸೇನೆ ಶಾಸಕನ ವಿರುದ್ಧ ದೂರು ದಾಖಲಾಗುವ ಸಾಧ್ಯತೆ ದಟ್ಟವಾಗಿದೆ.

ABOUT THE AUTHOR

...view details