ಕರ್ನಾಟಕ

karnataka

By

Published : Nov 25, 2021, 12:26 PM IST

ETV Bharat / bharat

ಶಕ್ತಿಮಿಲ್​ ಸಾಮೂಹಿಕ ಅತ್ಯಾಚಾರ ಕೇಸ್:​ ಅಪರಾಧಿಗಳಿಗೆ ಮರಣದಂಡನೆ ಬದಲು ಆಜೀವ ಕಾರಾಗೃಹ ಶಿಕ್ಷೆ ವಿಧಿಸಿದ ಹೈಕೋರ್ಟ್​

ಮುಂಬೈ ಶಕ್ತಿಮಿಲ್​ನಲ್ಲಿ ಪತ್ರಿಕಾ ಛಾಯಾಗ್ರಾಹಕಿಯ ಮೇಲೆ 7 ವರ್ಷಗಳ ಹಿಂದೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಮೂವರು ಅಪರಾಧಿಗಳಿಗೆ ಸೆಷನ್ಸ್​ ಕೋರ್ಟ್​ ವಿಧಿಸಿದ್ದ ಮರಣ ದಂಡನೆ ಶಿಕ್ಷೆ ರದ್ದು ಮಾಡಿ ಆಜೀವ ಜೀವಾವಧಿ ಶಿಕ್ಷೆಯನ್ನಾಗಿ ಪರಿವರ್ತಿಸಿ ಬಾಂಬೆ ಹೈಕೋರ್ಟ್​ ತೀರ್ಪು ನೀಡಿದೆ.

bombay hc
ಬಾಂಬೆ ಹೈಕೋರ್ಟ್​

ಮುಂಬೈ:ಇಲ್ಲಿನ ಶಕ್ತಿ ಮಿಲ್​ನಲ್ಲಿ ಪತ್ರಿಕಾ ಛಾಯಾಗ್ರಾಹಕಿಯ ಮೇಲೆ 7 ವರ್ಷಗಳ ಹಿಂದೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಮೂವರು ಅಪರಾಧಿಗಳಿಗೆ ವಿಧಿಸಲಾಗಿದ್ದ ಮರಣದಂಡನೆ ಶಿಕ್ಷೆಯನ್ನು ಭಾರತೀಯ ದಂಡ ಸಂಹಿತೆ 376(ಇ) ಅಡಿ ಆಜೀವ ಜೀವಾವಧಿ ಶಿಕ್ಷೆಯನ್ನಾಗಿ ಪರಿವರ್ತಿಸಿ ಬಾಂಬೆ ಹೈಕೋರ್ಟ್​ ತೀರ್ಪು ನೀಡಿದೆ.

ನ್ಯಾಯಮೂರ್ತಿಗಳಾದ ಎಸ್​.ಎಸ್​. ಜಾಧವ್​, ಪೃಥ್ವಿರಾಜ್​ ಚೌಹಾಣ್​ ಅವರಿದ್ದ ಪೀಠ ಈ ಮಹತ್ವದ ಆದೇಶ ನೀಡಿದೆ. 7 ವರ್ಷಗಳ ಹಿಂದೆ ಶಕ್ತಿಮಿಲ್​ನಲ್ಲಿ ಪತ್ರಿಕಾ ಛಾಯಾಗ್ರಾಹಕಿ ಮೇಲೆ ಅತ್ಯಾಚಾರ ನಡೆಸಲಾಗಿತ್ತು. ಸಾಮೂಹಿಕ ಅತ್ಯಾಚಾರ ನಡೆಸಿದ ಆರೋಪಿಗಳ ವಿರುದ್ಧ ಸೆಷನ್ಸ್​ ಕೋರ್ಟ್​ನಲ್ಲಿ ವಿಚಾರಣೆ ನಡೆದು ಆರೋಪಿಗಳಾಗಿದ್ದ ವಿಜಯ್ ಜಾಧವ್, ಮೊಹಮ್ಮದ್ ಖಾಸಿಂ ಶೇಖ್ ಮತ್ತು ಮೊಹಮ್ಮದ್ ಸಲೀಂ ಅನ್ಸಾರಿ ಅವರು ಅಪರಾಧಿಗಳು ಎಂದು ಕೋರ್ಟ್​ ಘೋಷಿಸಿತ್ತು. ಅಲ್ಲದೇ, ಮೂವರಿಗೆ ಮರಣ ದಂಡನೆ ಸಹ ವಿಧಿಸಿತ್ತು.

ಇದನ್ನೂ ಓದಿ: ಅಂಬಾನಿ ಹಿಂದಿಕ್ಕಿ ಏಷ್ಯಾದಲ್ಲಿ ಅತ್ಯಂತ ಶ್ರೀಮಂತ ಉದ್ಯಮಿ ಪಟ್ಟ ಗಿಟ್ಟಿಸಿಕೊಂಡ ಅದಾನಿ

ಸೆಷನ್ಸ್​ ನ್ಯಾಯಾಲಯ ನೀಡಿದ ಮರಣದಂಡನೆ ಆದೇಶದ ವಿರುದ್ಧ ಆರೋಪಿಗಳು ಬಾಂಬೆ ಹೈಕೋರ್ಟ್​ಗೆ ಮೇಲ್ಮನವಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎಸ್. ಎಸ್​. ಜಾಧವ್​, ಪೃಥ್ವಿರಾಜ್​ ಚೌಹಾಣ್​ ಅವರಿದ್ದ ಪೀಠ ಸಾಮೂಹಿಕ ಅತ್ಯಾಚಾರ ನಡೆಸಿದ ಮೂವರು ಆರೋಪಿಗಳಿಗೆ ಮರಣದಂಡನೆ ಶಿಕ್ಷೆಯನ್ನು ರದ್ದು ಮಾಡಿ, ಐಪಿಸಿ ಸೆಕ್ಷನ್​ 376(ಇ) ಅಡಿಯ ಪ್ರಕಾರ ಆಜೀವ ಶಿಕ್ಷೆ, ಮರಣದವರೆಗೂ ಕಾರಾಗೃಹ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.

ABOUT THE AUTHOR

...view details