ಕರ್ನಾಟಕ

karnataka

ETV Bharat / bharat

ಬ್ರಹ್ಮಪುತ್ರದಲ್ಲಿ ಬೋಟ್​​ಗಳ ಡಿಕ್ಕಿ ಪ್ರಕರಣ: ಓರ್ವ ಮಹಿಳೆ ಸಾವು, 35 ಮಂದಿ ಕಣ್ಮರೆ

ಮಜುಲಿ ಜಿಲ್ಲಾಡಳಿತ ಟೋಲ್​ ಫ್ರೀ ಸಹಾಯವಾಣಿಯನ್ನು ಆರಂಭಿಸಿದೆ. ಬೋಟ್​ನಲ್ಲಿದ್ದ ಪ್ರಯಾಣಿಕರ ಸಂಬಂಧಿಗಳು ಅಥವಾ ಕುಟುಂಬಸ್ಥರು ಮಜುಲಿ ಜಿಲ್ಲಾಡಳಿತ ನೀಡಿದ ಟೋಲ್​ ಫ್ರೀ ನಂಬರ್​ಗಳಿಗೆ ಕರೆ ಮಾಡಿ, ಮಾಹಿತಿ ಪಡೆಯಬಹುದಾಗಿದೆ.

By

Published : Sep 9, 2021, 9:33 AM IST

Several passengers missing in ferries' head-on-collision in Brahmaputra river
ಬ್ರಹ್ಮಪುತ್ರದಲ್ಲಿ ಬೋಟ್​​ಗಳ ಡಿಕ್ಕಿ ಪ್ರಕರಣದಲ್ಲಿ ಓರ್ವ ಮಹಿಳೆ ಸಾವು, 35 ಮಂದಿ ಕಣ್ಮರೆ

ನಿಮತಿಘಾಟ್(ಅಸ್ಸೋಂ):ಬೋಟ್​ಗಳು ಪರಸ್ಪರ ಡಿಕ್ಕಿಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಮಾರು 35 ಮಂದಿ ಕಾಣೆಯಾಗಿದ್ದು, ಒಬ್ಬ ಮಹಿಳೆ ಸಾವನ್ನಪ್ಪಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ

ಅಸ್ಸೋಂನ ಜೊರ್ಹಾತ್ ಜಿಲ್ಲೆಯ ಬ್ರಹ್ಮಪುತ್ರ ನದಿಯ ನಿಮತಿಘಾಟ್​ನಲ್ಲಿ ಘಟನೆ ಸಂಭವಿಸಿದ್ದು, ಸುಮಾರು 120ಕ್ಕೂ ಹೆಚ್ಚು ಮಂದಿ ನೀರೊಳಗೆ ಬಿದ್ದಿದ್ದರು. ಈ ವೇಳೆ ಹಲವರು ಈಜಿ ಪ್ರಾಣಪಾಯದಿಂದ ಪಾರಾಗಿದ್ದಾರೆ. ಬಹುತೇಕರನ್ನು ರಕ್ಷಣೆ ಮಾಡಲಾಗಿದೆ. ಒಬ್ಬ ಮಹಿಳೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾಳೆ.

ಸ್ಥಳೀಯರ ಪ್ರಕಾರ ಪುರುಷರು ಮಹಿಳೆಯರು, ಮಕ್ಕಳು ಸೇರಿ ನೂರಕ್ಕೂ ಹೆಚ್ಚು ಮಂದಿ ಬೋಟ್​ನಲ್ಲಿದ್ದರು. ಅದರ ಜೊತೆಗೆ ಕೆಲವು ಬೈಕ್ ಮತ್ತು ಕಾರುಗಳು ಕೂಡಾ ಬೋಟ್​ನಲ್ಲಿದ್ದವು. ಎಷ್ಟು ಮಂದಿಯಿದ್ದರು, ಎಷ್ಟು ಮಂದಿ ಕಾಣೆಯಾಗಿದ್ದಾರೆ ಎಂಬ ಮಾಹಿತಿ ನೀಡಲು ಒಳನಾಡು ಜಲಸಾರಿಗೆ ಅಧಿಕಾರಿಗಳು ವಿಫಲರಾಗಿದ್ದಾರೆ. ಈಗಲೂ ಕೂಡಾ ರಕ್ಷಣಾ ಕಾರ್ಯಗಳು ನಡೆಯುತ್ತಿವೆ.

ಇದನ್ನೂ ಓದಿ:ಕೃಷಿ ಕಾಯ್ದೆ ವಿರೋಧಿಸಿ ದೆಹಲಿ ಗಡಿಯಲ್ಲಿ ಪ್ರತಿಭಟಿಸುತ್ತಿರುವ ಯಾರೂ ರೈತರಲ್ಲ.. ಬಿಜೆಪಿ ನಾಯಕ ವಿವಾದ

ಪೊಲೀಸರ ಪ್ರಕಾರ ಖಾಸಗಿ ಬೋಟ್ ಆದ 'ಮಾ ಕಮಲಾ' ನಿಮತಿಘಾಟ್​ನಿಂದ ಮಜುಲಿ ದ್ವೀಪ ಪ್ರದೇಶದಲ್ಲಿರುವ ಕಮಲಾಬರಿ ಫೆರ್ರಿ ಪಾಯಿಂಟ್​ಗೆ ತೆರಳುತ್ತಿತ್ತು. ಇದೇ ವೇಳೆ ನಿಮಿತಿಘಾಟ್​ನಿಂದ ಹೊರಡುತ್ತಿದ್ದ ರಾಜ್ಯದ ಒಳನಾಡು ಜಲಸಾರಿಗೆ ಟ್ರಿಪ್ಕಾಯ್​ ಬೋಟ್​ಗೆ ಡಿಕ್ಕಿಯಾಗಿ ಈ ಅವಘಡ ಸಂಭವಿಸಿದೆ.

ಸಹಾಯವಾಣಿ ಆರಂಭಿಸಿದ ಮಜುಲಿ

ಈಗಾಗಲೇ ರಕ್ಷಣಾ ಕಾರ್ಯದೊಂದಿಗೆ, ಮಜುಲಿ ಜಿಲ್ಲಾಡಳಿತ ಟೋಲ್​ ಫ್ರೀ ಸಹಾಯವಾಣಿಯನ್ನು ಆರಂಭಿಸಿದೆ. ಬೋಟ್​ನಲ್ಲಿದ್ದ ಪ್ರಯಾಣಿಕರ ಸಂಬಂಧಿಗಳು ಅಥವಾ ಕುಟುಂಬಸ್ಥರು ಮಜುಲಿ ಜಿಲ್ಲಾಡಳಿತ ನೀಡಿದ ಟೋಲ್​ ಫ್ರೀ ನಂಬರ್​ಗಳಿಗೆ ಕರೆ ಮಾಡಿ, ಮಾಹಿತಿ ಪಡೆಯಬಹುದಾಗಿದೆ.

ಸಹಾಯವಾಣಿ ಸಂಖ್ಯೆ

1077, 1070, 1079 ಟೋಲ್​ಫ್ರೀ ನಂಬರ್ ಆಗಿದ್ದು, 7635961522 ಟೆಲಿಫೋನ್​ ನಂಬರ್ ಆಗಿದೆ. ಯಾವುದಾದರೂ ಒಂದು ನಂಬರ್​ಗೆ ಕರೆ ಮಾಡಿ, ಮಾಹಿತಿ ಪಡೆದುಕೊಳ್ಳಬಹುದು ಎಂದು ಜಿಲ್ಲಾಡಳಿತ ಹೇಳಿದೆ.

ಈ ನಡುವೆ ಘಟನೆ ಬಗ್ಗೆ ರಾಷ್ಟ್ರಪತಿ ಕಳವಳ ವ್ಯಕ್ತಪಡಿಸಿದ್ದು, ಘಟನೆಯಲ್ಲಿ ಪ್ರಾಣ ಕಳೆದುಕೊಂಡ ಹಾಗೂ ನೋವುಂಡವರಿಗೆ ಸಂತಾಪ ಸೂಚಿಸಿದ್ದಾರೆ. ಎಲ್ಲರನ್ನೂ ಕಾಪಾಡಲು ಶಕ್ತಿ ಮೀರಿ ಪ್ರಯತ್ನಿಸುವಂತೆ ರಾಮನಾಥ ಕೋವಿಂದ್​ ಜಿಲ್ಲಾಡಳಿತ ಮತ್ತು ರಾಜ್ಯ ಸರ್ಕಾರಕ್ಕೆ ಸೂಚಿಸಿದ್ದಾರೆ.

ಈ ನಡುವೆ ಇಂತಹ ಘಟನೆಗಳಿಂದ ಪಾಠ ಕಲಿಯಬೇಕಿದ್ದು, ಎಲ್ಲ ಅಗತ್ಯ ನೆರವು ನೀಡುವುದಾಗಿ ಕೇಂದ್ರ ಗೃಹ ಸಚಿವ ಅಮಿತ್​ ಶಾ ಭರವಸೆ ನೀಡಿದ್ದಾರೆ.

ಇದನ್ನೂ ಓದಿ:ಬ್ರಹ್ಮಪುತ್ರ ನದಿಯಲ್ಲಿ ಎರಡು ದೋಣಿಗಳು ಡಿಕ್ಕಿಯಾಗಿ ಭೀಕರ ದುರಂತ: 50ಕ್ಕೂ ಹೆಚ್ಚು ಮಂದಿ ನಾಪತ್ತೆ

ABOUT THE AUTHOR

...view details