ಕರ್ನಾಟಕ

karnataka

ETV Bharat / bharat

ಗಣಿಯಲ್ಲಿ ಏಳು ಕೂಲಿ ಕಾರ್ಮಿಕರ ದುರ್ಮರಣ: ಅವಶೇಷಗಳಡಿ ಹಲವರು ಸಿಲುಕಿರುವ ಶಂಕೆ - ಗಣಿಯಲ್ಲಿ ಕೂಲಿ ಕೆಲಸ

ಛತ್ತೀಸ್​ಗಢದ ಬಸ್ತಾರ್​ನ ಮಲ್ಗಾಂವ್ ಪ್ರದೇಶದಲ್ಲಿ ಗಣಿ ಕುಸಿದು ಏಳು ಮೃತಪಟ್ಟಿರುವ ಘಟನೆ ನಡೆದಿದೆ.

seven-villagers-died-due-to-being-buried-in-mine-in-jagdalpur
ಗಣಿಯಲ್ಲಿ ಏಳು ಕೂಲಿ ಕಾರ್ಮಿಕರ ದುರ್ಮರಣ: ಅವಶೇಷಗಳಡಿ ಹಲವರು ಸಿಲುಕಿರುವ ಶಂಕೆ

By

Published : Dec 2, 2022, 3:54 PM IST

ಬಸ್ತಾರ್ (ಛತ್ತೀಸ್​ಗಢ): ಗಣಿಗಾರಿಕೆ ವೇಳೆ ಅವಶೇಷಗಳಡಿ ಸಿಲುಕಿ ಏಳು ಜನರು ಸಾವನ್ನಪ್ಪಿರುವ ಘಟನೆ ಛತ್ತೀಸ್​ಗಢದ ಬಸ್ತಾರ್​ನ ಮಲ್ಗಾಂವ್ ಪ್ರದೇಶದಲ್ಲಿ ನಡೆದಿದ್ದು, ಇನ್ನೂ ಹಲವರು ಅವಶೇಷಗಳಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ.

ಗಣಿಯಲ್ಲಿ ಕೆಲಸ ಮಾಡುತ್ತಿದ್ದಾಗ ಏಕಾಏಕಿ ಗಣಿ ಕುಸಿದು ಬಿದ್ದು ಈ ದುರಂತ ಸಂಭವಿಸಿದೆ. ಮೃತರಲ್ಲಿ ಆರು ಜನ ಮಹಿಳೆಯರು ಮತ್ತು ಓರ್ವ ಪುರುಷ ಸೇರಿದ್ದಾರೆ. ಮೃತರೆಲ್ಲರೂ ಸ್ಥಳೀಯ ಗ್ರಾಮಸ್ಥರಾಗಿದ್ದು, ಗಣಿಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.

ಈ ಘಟನೆಯ ವಿಷಯ ತಿಳಿದು ಸ್ಥಳಕ್ಕೆ ಎಸ್‌ಡಿಆರ್‌ಎಫ್ ಮತ್ತು ಪೊಲೀಸ್ ತಂಡ ದೌಡಾಯಿಸಿ, ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆ ತೊಡಗಿದೆ. ಈಗಾಗಲೇ ಅವಶೇಷಗಳಡಿ ಹೂತು ಹೋಗಿದ್ದವರನ್ನು ಜೆಸಿಬಿ ಸಹಾಯದಿಂದ ಹೊರತೆಗೆಯಲಾಗಿದೆ. ಇನ್ನೂ 15ಕ್ಕೂ ಹೆಚ್ಚು ಕಾರ್ಮಿಕರು ಅವಶೇಷಗಳಡಿ ಸಿಲುಕಿರುವ ಸಾಧ್ಯತೆ ಇದೆ.

ಇದನ್ನೂ ಓದಿ:ಯುಪಿಯಲ್ಲಿ ಶಾಲಾ ಮುಖ್ಯೋಪಾಧ್ಯಾಯರಿಗೆ ಗುಂಡಿಕ್ಕಿ ಹತ್ಯೆ

ABOUT THE AUTHOR

...view details