ಗಾಜಿಯಾಬಾದ್: ಇಲ್ಲಿನ ಮುರಾದ್ನಗರ ಪ್ರದೇಶದಲ್ಲಿ, ಪೂರ್ವ ಪೆರಿಫೆರಲ್ ಎಕ್ಸ್ಪ್ರೆಸ್ ವೇನಲ್ಲಿ ಸರಣಿ ಅಪಘಾತ ಸಂಭವಿಸಿದೆ. ಓರ್ವ ವ್ಯಕ್ತಿ ಮೃತ ಪಟ್ಟಿದ್ದು, 10 ಜನ ಗಂಭೀರವಾಗಿ ಗಾಯಗೊಂಡಿದ್ದಾರೆ.
ಮಂಜು ತಂದ ಗಂಡಾಂತರ: ಗಾಜಿಯಾಬಾದ್ನಲ್ಲಿ 30 ಕ್ಕೂ ಹೆಚ್ಚು ವಾಹನಗಳ ಸರಣಿ ಅಪಘಾತ - Series road accident in Ghaziabad news
ಮಂಜು ಕವಿದ ವಾತಾವರಣದಿಂದಾಗಿ ರಸ್ತೆ ಕಾಣದೆ ಹಾಗೂ ನಿಯಂತ್ರಣ ತಪ್ಪಿ 30 ಕ್ಕೂ ಹೆಚ್ಚು ವಾಹನಗಳು ಡಿಕ್ಕಿ ಹೊಡೆದುಕೊಂಡಿವೆ. ಓರ್ವ ವ್ಯಕ್ತಿ ಮೃತ ಪಟ್ಟಿದ್ದು, 10 ಜನ ಗಂಭೀರವಾಗಿ ಗಾಯಗೊಂಡಿದ್ದಾರೆ.
![ಮಂಜು ತಂದ ಗಂಡಾಂತರ: ಗಾಜಿಯಾಬಾದ್ನಲ್ಲಿ 30 ಕ್ಕೂ ಹೆಚ್ಚು ವಾಹನಗಳ ಸರಣಿ ಅಪಘಾತ Series road accident in Ghaziabad](https://etvbharatimages.akamaized.net/etvbharat/prod-images/768-512-10263572-1013-10263572-1610787582194.jpg)
ಗಾಜಿಯಾಬಾದ್ನಲ್ಲಿ 30 ಕ್ಕೂ ಹೆಚ್ಚು ವಾಹನಗಳ ನಡುವೆ ಡಿಕ್ಕಿ
ಮಂಜಿನಿಂದಾಗಿ 30 ಕ್ಕೂ ಹೆಚ್ಚು ವಾಹನಗಳು ಡಿಕ್ಕಿ ಹೊಡೆದುಕೊಂಡಿವೆ. ಗಾಯಗೊಂಡ ಎಲ್ಲರನ್ನೂ ಹತ್ತಿರದ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಬಸ್ಗಳು, ಕಾರುಗಳು, ಟ್ರಾಕ್ಟರ್ಗಳು ಮತ್ತು ಟ್ರಕ್ಗಳು ಡಿಕ್ಕಿ ಹೊಡೆದಿವೆ. ಅಪಘಾತದಲ್ಲಿ 2 ವಾಹನಗಳು ಸಂಪೂರ್ಣ ಜಖಂ ಗೊಂಡಿವೆ.
ಇಂದು ಬೆಳಗ್ಗೆ ಎನ್ಸಿಆರ್ ರಸ್ತೆಗಳಲ್ಲಿ ದಟ್ಟವಾದ ಮಂಜು ಇತ್ತು. ಹೆದ್ದಾರಿಯಲ್ಲಿ ಮಂಜಿನ ಮಧ್ಯೆ ವೇಗವನ್ನು ನಿಯಂತ್ರಿಸಲು ಸಾಧ್ಯವಾಗದಿರುವುದು ಇಂತಹ ಭೀಕರ ಅಪಘಾತಕ್ಕೆ ಕಾರಣವಾಗಿದೆ ಎಂದು ಹೇಳಲಾಗಿದೆ.