ಕರ್ನಾಟಕ

karnataka

ETV Bharat / bharat

ಅರುಣಾಚಲ ಪ್ರದೇಶದಲ್ಲಿ ಯೋಧರಿಬ್ಬರು ಕಣ್ಮರೆ.. 15 ದಿನವಾದರೂ ಸಿಗದ ಸುಳಿವು

ಅರುಣಾಚಲದಲ್ಲಿ ಯೋಧರಿಬ್ಬರು ನಾಪತ್ತೆಯಾಗಿದ್ದು, 15 ದಿನ ಕಳೆದರೂ ಅವರ ಸುಳಿವು ಸಿಕ್ಕಿಲ್ಲ. ಯೋಧರು ನದಿಯಲ್ಲಿ ಆಕಸ್ಮಿಕವಾಗಿ ಬಿದ್ದಿರಬೇಕು ಎಂದು ಸೇನಾಧಿಕಾರಿಗಳು ಶಂಕಿಸಿದ್ದಾರೆ.

By

Published : Jun 12, 2022, 5:54 PM IST

ಅರುಣಾಚಲಪ್ರದೇಶದಲ್ಲಿ ಯೋಧರಿಬ್ಬರ ಕಣ್ಮರೆ
ಅರುಣಾಚಲಪ್ರದೇಶದಲ್ಲಿ ಯೋಧರಿಬ್ಬರ ಕಣ್ಮರೆ

ತೇಜ್‌ಪುರ್:ಅರುಣಾಚಲ ಪ್ರದೇಶದ ಅಂಜಾವ್ ಜಿಲ್ಲೆಯ ಫಾರ್ವರ್ಡ್​ ಪೋಸ್ಟ್​ನಲ್ಲಿ ಕಾವಲಿಗಿದ್ದ ಇಬ್ಬರು ಯೋಧರು ನಾಪತ್ತೆಯಾಗಿ 15 ದಿನ ಕಳೆದರೂ ಅವರ ಸುಳಿವು ಸಿಕ್ಕಿಲ್ಲ. ಕಣ್ಮರೆಯಾದ ಸೈನಿಕರಿಗಾಗಿ ತೀವ್ರ ಶೋಧ ಕಾರ್ಯಾಚರಣೆ ಮುಂದುವರಿದಿದೆ.

ನಾಯಕ್ ಪ್ರಕಾಶ್ ಸಿಂಗ್ ಮತ್ತು ಲ್ಯಾನ್ಸ್ ನಾಯಕ್ ಹರೇಂದರ್ ಸಿಂಗ್ ಕಣ್ಮರೆಯಾದವರು. ಇಬ್ಬರನ್ನೂ ಅರುಣಾಚಲ ಪ್ರದೇಶದ ಅಂಜಾವ್​ನ ಫಾರ್ವರ್ಡ್​ ಪೋಸ್ಟ್​ನಲ್ಲಿ ಕಾವಲಿಗೆ ನಿಯೋಜಿಸಲಾಗಿತ್ತು.

ಪ್ರಕಾಶ್​​ ಸಿಂಗ್​ ಮತ್ತು ಹರೇಂದರ್​ ಸಿಂಗ್​ರನ್ನು ಅರುಣಾಚಲ ಪ್ರದೇಶದ ಫಾರ್ವರ್ಡ್ ಪೋಸ್ಟ್‌ನಲ್ಲಿ ನಿಯೋಜಿಸಲಾಗಿತ್ತು. ಗಸ್ತಿನ ವೇಳೆ ಪೋಸ್ಟ್‌ ಸಮೀಪದಲ್ಲಿ ವೇಗವಾಗಿ ಹರಿಯುವ ನದಿಗೆ ಆಕಸ್ಮಿಕವಾಗಿ ಬಿದ್ದಿರಬೇಕು ಎಂದು ತೇಜ್‌ಪುರ್ ಲೆಫ್ಟಿನೆಂಟ್ ಕರ್ನಲ್ ಅಮರಿಂದರ್ ಸಿಂಗ್ ವಾಲಿಯಾ ತಿಳಿಸಿದ್ದಾರೆ.

ಕಳೆದ ಎರಡು ವಾರಗಳಿಂದ ವೈಮಾನಿಕ ವಿಚಕ್ಷಣ ದಳ ಮತ್ತು ಶ್ವಾನ ದಳದಿಂದ ವ್ಯಾಪಕ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ. ಆದರೂ ಯೋಧರಿಬ್ಬರ ಸುಳಿವು ಇನ್ನೂ ಸಿಕ್ಕಿಲ್ಲ. ಘಟನೆಯ ಕುರಿತು ವಿಚಾರಣೆಗೆ ಸೇನೆಯಿಂದ ತನಿಖಾ ಸಮಿತಿಯನ್ನು ರಚಿಸಲಾಗಿದೆ.

ಕಣ್ಮರೆಯಾದ ಯೋಧರಿಬ್ಬರು ಉತ್ತರಾಖಂಡ್‌ ರಾಜ್ಯಕ್ಕೆ ಸೇರಿದವರಾಗಿದ್ದು, ಇಬ್ಬರು ಸೈನಿಕರ ಕುಟುಂಬ ಸದಸ್ಯರಿಗೆ ಈ ದುರದೃಷ್ಟಕರ ಘಟನೆಯ ಬಗ್ಗೆ ತಿಳಿಸಲಾಗಿದೆ ಎಂದು ಸೇನಾ ಮೂಲಗಳು ಹೇಳಿವೆ.

ಓದಿ:ಸಚಿವರ ಪುತ್ರನ ವಿರುದ್ಧ ಅತ್ಯಾಚಾರ ಆರೋಪ ಮಾಡಿದ ಯುವತಿ ಮೇಲೆ ಮಸಿ ದಾಳಿ!

ABOUT THE AUTHOR

...view details