ಮುಂಬೈ: ಪತ್ರಾ ಚಾಲ್ ಪುನರಾಭಿವೃದ್ಧಿ ಯೋಜನೆಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಶಿವಸೇನೆ ನಾಯಕ ಮತ್ತು ರಾಜ್ಯ ಸಭಾ ಸಂಸದ ಸಂಜಯ್ ರಾವುತ್ಗೆ ಪಿಎಂಎಲ್ಎ ನ್ಯಾಯಾಲಯ ಜಾಮೀನು ಮಂಜೂರು ಮಾಡಲಾಗಿದೆ. ಪ್ರಕರಣ ಆಲಿಸಿದ ವಿಶೇಷ ನ್ಯಾಯಾಮೂರ್ತಿ ಎಂಜಿ ದೇಶಾಪಾಂಡೆ ಅವರಿಗೆ ಜಾಮೀನು ನೀಡಿದ್ದಾರೆ. ಈಗಾಗಲೇ ಪ್ರಕರಣ ಸಂಬಂಧ ಕಳೆದ 101 ದಿನಗಳಿಂದ ಸೆರೆವಾಸದಲ್ಲಿದ್ದರು.
ಪತ್ರಾ ಚಾಲ್ ಪುನರಾಭಿವೃದ್ಧಿ ಯೋಜನೆಯಲ್ಲಿನ ಅಕ್ರಮ ಹಣ ವರ್ಗಾವಣೆ ಸಂಬಂಧ ಜಾರಿ ನಿರ್ದೇಶನಾಲಯ ಸಾಮ್ನಾ ಪತ್ರಿಕೆ ಸಂಪಾದಕರನ್ನು ಕಳೆದ ಜುಲೈನಲ್ಲಿ ಬಂಧಿಸಿತ್ತು. ಪ್ರಕರಣ ಸಂಬಂಧ ಜಾಮೀನು ಅರ್ಜಿ ಸಲ್ಲಿಸಿದ್ದ ಕ್ರಮವನ್ನು ಇಡಿ ವಿರೋಧಿಸಿತ್ತು.