ಕರ್ನಾಟಕ

karnataka

By

Published : Feb 18, 2023, 12:27 PM IST

ETV Bharat / bharat

ಸಬರಮತಿ ನದಿ ಮಾಲಿನ್ಯ: CPCB ವರದಿಗೆ ಉತ್ತರ ನೀಡುವಂತೆ GPCBಗೆ ಸೂಚಿಸಿದ ಹೈಕೋರ್ಟ್

ದೇಶದಲ್ಲೇ ಎರಡನೇ ಅತ್ಯಂತ ಕಲುಷಿತ ನದಿಯಾಗಿರುವ ಸಬರಮತಿ ನದಿ ಮಾಲಿನ್ಯಕ್ಕೆ ಸಂಬಂಧಿಸಿದಂತೆ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ನಡೆಸಿರುವ ಸಂಶೋಧನೆಗಳ ವರದಿಗೆ ಉತ್ತರ ನೀಡುವಂತೆ ಗುಜರಾತ್​ ಹೈಕೋರ್ಟ್ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ತಿಳಿಸಿದೆ.

Gujarat HC
ಹೈಕೋರ್ಟ್​

ಅಹಮದಾಬಾದ್(ಗುಜರಾತ್): ಭಾರತ ಎದುರಿಸುತ್ತಿರುವ ಪ್ರಮುಖ ಮಾಲಿನ್ಯ ಸಮಸ್ಯೆಗಳಲ್ಲಿ ಜಲಮಾಲಿನ್ಯ ಕೂಡ ಪ್ರಮುಖವಾದದ್ದು. ನದಿ, ಕಾಲುವೆ ಹಾಗೂ ಸಾಗರಗಳು ಕಲುಷಿತಗೊಂಡು ಜನರು ಮಾಲಿನ್ಯ ಸಂಬಂಧಿ ರೋಗರುಜಿನಗಳಿಂದ ಬಳಲುತ್ತಾರೆ. ಇದೀಗ ಸಬರಮತಿಯು ದೇಶದ ಎರಡನೇ ಅತ್ಯಂತ ಕಲುಷಿತ ನದಿಯಾಗಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಗುಜರಾತ್ ಹೈಕೋರ್ಟ್, ಶುಕ್ರವಾರ ಗುಜರಾತ್ ಮಾಲಿನ್ಯ ನಿಯಂತ್ರಣ ಮಂಡಳಿಗೆ (GPCB) ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ (CPCB) ಸಂಶೋಧನೆಗಳ ವರದಿಗೆ ವಿವರವಾದ ಉತ್ತರವನ್ನು ನೀಡುವಂತೆ ಕೇಳಿದೆ.

ಮುಖ್ಯ ನ್ಯಾಯಮೂರ್ತಿ ಸೋನಿಯಾ ಗೋಕನಿ ಮತ್ತು ನ್ಯಾಯಮೂರ್ತಿ ನಾನಾವತಿ ಅವರನ್ನೊಳಗೊಂಡ ಪೀಠವು ಈ ಕುರಿತಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿ, ಕೂಡಲೇ ಉತ್ತರ ನೀಡುವಂತೆ ಗುಜರಾತ್ ಮಾಲಿನ್ಯ ನಿಯಂತ್ರಣ ಮಂಡಳಿಗೆ ಸೂಚಿಸಿದೆ. ಇದು ಸುಮಾರು ಎರಡು ವರ್ಷಗಳ ಹಿಂದೆ ದಾಖಲಾದ ಪ್ರಕರಣವಾಗಿದ್ದು, ರಾಜ್ಯ ಹೈಕೋರ್ಟ್ ಸ್ವಯಂ ಪ್ರೇರಿತ ಪಿಐಎಲ್ ದಾಖಲಿಸಿಕೊಂಡಿದೆ.

ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಸಂಶೋಧನೆಗಳ ಪ್ರಕಾರ, 'ತಮಿಳುನಾಡಿನ ಕೂವಮ್​ ನದಿಯ ನಂತರ ಸಬರಮತಿ ನದಿಯು ದೇಶದ ಎರಡನೇ ಅತ್ಯಂತ ಕಲುಷಿತ ನದಿಯಾಗಿದೆ. ಗಾಂಧಿನಗರದ ರೈಸನ್‌ನಿಂದ ವೌಥಾ ಗ್ರಾಮದವರೆಗೆ ವಿಸ್ತರಿಸಿರುವ ನದಿಯ ಪ್ರತಿ ಲೀಟರ್‌ ನೀರಿಗೆ 292 ಮಿಲಿಗ್ರಾಂ ಜೀವರಾಸಾಯನಿಕ ಆಮ್ಲಜನಕದ ಬೇಡಿಕೆ (BOD) ಒಳಗೊಂಡಿದೆ ಎಂದು CPCB ವರದಿ ಬಹಿರಂಗಪಡಿಸಿದೆ.

ಇದನ್ನೂ ಓದಿ:ಸಬರಮತಿ ನದಿಯಲ್ಲಿ ರಿವರ್ ಕ್ರೂಸ್ ಕಮ್ ಫ್ಲೋಟಿಂಗ್ ರೆಸ್ಟೋರೆಂಟ್: ಏಪ್ರಿಲ್​​ ವೇಳೆಗೆ ಆರಂಭ ಸಾಧ್ಯತೆ

"ಇನ್ನು ಸಾಬರಮತಿ ನದಿಯನ್ನು ಮಾಲಿನ್ಯ ಮುಕ್ತಗೊಳಿಸಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಈ ಕಾರ್ಯವು ಮಹತ್ತರವಾಗಿದ್ದು, ನದಿಯನ್ನು ಸ್ವಚ್ಛಗೊಳಿಸುವುದು ದೀರ್ಘಾವಧಿ ಕೆಲಸ. ಭವಿಷ್ಯದ ಪೀಳಿಗೆಯು ಶುದ್ಧ ನದಿ ನೀರಿನ ಪ್ರಯೋಜನವನ್ನು ಪಡೆಯಬಹುದು" ಎಂದು ಅಮಿಕಸ್ ಕ್ಯೂರಿ ವಕೀಲ ಹೇಮಂಗ್ ಶಾ ಅವರು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಈ ಹಿಂದೆ ಸಬರಮತಿ ನದಿಗೆ ಸಂಸ್ಕರಿಸದ ನೀರು ಬಿಡುತ್ತಿದ್ದ ಕಂಪನಿಗಳು ಅದನ್ನು ನಿಲ್ಲಿಸಿದ್ದವು. ಆdre, ಇದೀಗ ಅಹಮದಾಬಾದ್‌ನ ಡ್ಯಾನಿಲಿಮ್ಡಾ ಪ್ರದೇಶದಲ್ಲಿ ಸ್ಥಾಪಿತವಾಗಿರುವ ಕೆಲವು ದೊಡ್ಡ ಮತ್ತು ಸಣ್ಣ ಕೈಗಾರಿಕಾ ಘಟಕಗಳು ಇನ್ನೂ ಕಲುಷಿತ ನೀರನ್ನು ಅಕ್ರಮವಾಗಿ ನದಿಗೆ ಬಿಡುತ್ತಿವೆ ಎಂದು ವಕೀಲರು ಆರೋಪಿಸಿದ್ದಾರೆ.

ಇದನ್ನೂ ಓದಿ:ಕಾಫಿ ಪಲ್ಪರ್ ತ್ಯಾಜ್ಯದಿಂದ ಕಲುಷಿತಗೊಳ್ಳುತ್ತಿರುವ ಜೀವನಾಡಿ ಹೇಮಾವತಿ.. ಕ್ರಮಕ್ಕೆ ಸ್ಥಳೀಯರ ಒತ್ತಾಯ

ಇನ್ನೂ ಸಬರಮತಿ ನದಿಯ ಹೂಳು ತೆಗೆಯುವ ಕುರಿತು ಅಹಮದಾಬಾದ್ ಮೆಗಾ ಕ್ಲೀನ್ ಅಸೋಸಿಯೇಷನ್ (AMCA) ಗೆ ಸಂಬಂಧಿಸಿದ ವಿಷಯದ ಮೇಲೂ ಸಹ ಹೈಕೋರ್ಟ್ ಗಮನಹರಿಸಿದೆ. ಸಂಸ್ಕರಿಸದ ನೀರನ್ನು ಶುದ್ಧೀಕರಣ ಘಟಕಕ್ಕೆ ಸಾಗಿಸುವ ಹಿನ್ನೆಲೆ ಪೈಪ್‌ಲೈನ್ ಅಳವಡಿಸುವ ಕಾರ್ಯವನ್ನು ಕಂಪನಿಗೆ ವಹಿಸಲಾಗಿದೆ. ಸಂಸ್ಕರಣೆಯ ನಂತರ ಏಜೆನ್ಸಿಯು ನೀರನ್ನು ಮತ್ತೆ ನದಿಗೆ ಪಂಪ್ ಮಾಡುತ್ತದೆ.

ಇದನ್ನೂ ಓದಿ:ನದಿ ಮಧ್ಯೆ ಸಿಲುಕಿದ ಗಂಗಾ ವಿಲಾಸ್​ ನೌಕೆ.. ಸುದ್ದಿ ಸುಳ್ಳೆಂದ ಪ್ರಾಧಿಕಾರ, ಕಾಂಗ್ರೆಸ್​ ಕಟು ಟೀಕೆ

ABOUT THE AUTHOR

...view details